ಆ್ಯಪ್ನಗರ

ಖರ್ಗೆ ಸೋಲಿಗೆ, ಜಾಧವ್‌ ಗೆಲುವಿಗೆ ಕಾರಣ

ಬಿಜೆಪಿ ಅಭ್ಯರ್ಥಿ ಡಾ. ಉಮೇಶ್‌ ಜಾಧವ್‌ ಗೆಲುವಿಗೆ ಕಾರಣ,ಪ್ರಧಾನಿ ನರೇಂದ್ರ ಮೋದಿ ಹವಾ. ಜಾಧವ್‌ ಗೆದ್ದರೆ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂಬ ಮಾತಿಗೆ ಹೆಚ್ಚು ಬಲ ತುಂಬಿರುವುದು.

Vijaya Karnataka 24 May 2019, 4:36 pm
ಗುಲ್ಬರ್ಗ ಲೋಕಸಭೆ:ಬಿಜೆಪಿ ಅಭ್ಯರ್ಥಿ ಡಾ. ಉಮೇಶ್‌ ಜಾಧವ್‌ ಗೆಲುವಿಗೆ ಕಾರಣ,ಪ್ರಧಾನಿ ನರೇಂದ್ರ ಮೋದಿ ಹವಾ. ಜಾಧವ್‌ ಗೆದ್ದರೆ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂಬ ಮಾತಿಗೆ ಹೆಚ್ಚು ಬಲ ತುಂಬಿರುವುದು.
Vijaya Karnataka Web khar defeated jadhav for the win
ಖರ್ಗೆ ಸೋಲಿಗೆ, ಜಾಧವ್‌ ಗೆಲುವಿಗೆ ಕಾರಣ


ಪ್ರಬಲ ಸಮುದಾಯದ ಮತಗಳು ಬೆನ್ನಿಗೆ ನಿಂತಿರುವುದು,ಹೊಸ ಮತದಾರರ ಬಿಜೆಪಿ ಕಡೆ ವಾಲಿರುವುದು, ಖರ್ಗೆ ವಿರುದ್ಧ ವ್ಯವಸ್ಥಿತ ಪ್ರಚಾರ ಕೈಗೊಂಡಿರುವುದು.

ಕಳೆದ ಸಲಕ್ಕಿಂತ ಈ ಬಾರಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಾಗಿರುವುದು,ಎಂಎಲ್ಸಿ ಎನ್‌. ರವಿಕುಮಾರ್‌ ಗೌಂಡ್‌ ಲೇವಲ್‌ ಚುನಾವಣಾ ಗೆಲುವಿಗೆ ತಂತ್ರ ರೂಪಿಸಿರುವುದು

ಖರ್ಗೆ ವಿರುದ್ಧ ವ್ಯವಸ್ಥಿತವಾಗಿ ಚುನಾವಣಾ ತಂತ್ರ ರೂಪಿಸಿರುವುದು,ಖರ್ಗೆ ಮಾಡಿರುವ ಕೆಲಸಗಳನ್ನು ಪ್ರತಿ ಮತದಾರನಿಗೆ ತಲುಪಿಸುವಲ್ಲಿ ಎಡವಿರುವುದು.

ಹಿಂದಿಗಿಂತಲೂ ಈ ಬಾರಿ ಹಿಂದುಳಿದ ವರ್ಗದ ಮತಗಳು ಬಿಜೆಪಿಗೆ ಬಂದಿವೆ

ಜನರಲ್ಲಿ ಹೊಸ ಅಭಿವೃದ್ಧಿಯ ಕಲ್ಪನೆಯನ್ನು ಹುಟ್ಟು ಹಾಕಿರುವುದು

ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಕಾರಣ

ಪುತ್ರ ವ್ಯಾಮೋಹದ ಆರೋಪ

ಬಾಬುರಾವ ಚಿಂಚನಸೂರ್‌ ಕಾಂಗ್ರೆಸ್‌ ಬಿಟ್ಟಿದ್ದು

ಕಾಂಗ್ರೆಸ್‌ ಓಟ್‌ಬ್ಯಾಂಕ್‌ ಆಗಿದ್ದ ಪ್ರಬಲ ಸಮುದಾಯದ ಮತಗಳ ವಿಭಜನೆ

ಇವರಿಗೆ ಸೋಲಿಸಲು ಮಾಲೀಕಯ್ಯ, ಚಿಂಚನಸೂರ, ಮಲಕರಡ್ಡಿ ಒಗ್ಗಟ್ಟಾಗಿರುವುದು

ಕೈ ಶಾಸಕರು ಸಂಘಟಿತ ಪ್ರಚಾರ ಮಾಡದೇ ಇರುವುದು

ಮೇಲ್ವರ್ಗ, ಕೋಲಿ, ಹಿಂದುಳಿದ ವರ್ಗ, ಬಂಜಾರಾ ಸೇರಿ ಪ್ರಮುಖ ಸಮುದಾಯಗಳ ಮತ ಬಿಜೆಪಿಗೆ ಬಂದಿದ್ದು

ಖರ್ಗೆ ಸೋಲಿಸಲು ಪ್ರಧಾನಿಯಿಂದ ಹಿಡಿದು ರಾಷ್ಟ್ರಮಟ್ಟದಲ್ಲಿ ತಂತ್ರ ಹೆಣೆದಿರುವುದು

ಪ್ರತಿಯೊಂದು ಸಭೆ, ಸಮಾರಂಭಗಳಲ್ಲಿ ಪ್ರಧಾನಿ ಮೋದಿ ವಿರುದ್ಧವೇ ಟೀಕಿಸಿದ್ದು

ಖರ್ಗೆ ಬಂದರೆ ಪರಿಶಿಷ್ಟರ ದಬ್ಬಾಳಿಕೆ ಜಾಸ್ತಿ ಆಗಬಹುದಾ ಎಂಬ ಭಯ ಮೇಲ್ವರ್ಗದವರನ್ನು ಕಾಡಿದ್ದು

ಮೇಲ್ವರ್ಗದ ಬಹುತೇಕರು ಅಸ್ಪೃಶ್ಯನಿಗಿಂತ ಸ್ಪರ್ಶ ದಲಿತ ವ್ಯಕ್ತಿ ಕಡೆ ಒಲವು ತೋರಿದ್ದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ