ಆ್ಯಪ್ನಗರ

ಕೊಟಗಿ ಹತ್ಯೆ: ಇಬ್ಬರು ಆರೋಪಿಗಳ ಬಂಧನ

ನಗರದ ಖರ್ಗೆ ಕಾಲೊನಿಯಲ್ಲಿಇತ್ತೀಚೆಗೆ ನಡೆದ ಪ್ರಶಾಂತ ಕೊಟಗಿ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿಪೊಲೀಸರು ಯಶಸ್ವಿಯಾಗಿದ್ದಾರೆ.

Vijaya Karnataka 26 Sep 2019, 10:28 pm
ಕಲಬುರಗಿ:ನಗರದ ಖರ್ಗೆ ಕಾಲೊನಿಯಲ್ಲಿಇತ್ತೀಚೆಗೆ ನಡೆದ ಪ್ರಶಾಂತ ಕೊಟಗಿ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿಪೊಲೀಸರು ಯಶಸ್ವಿಯಾಗಿದ್ದಾರೆ.
Vijaya Karnataka Web kotagi murder arrest of two accused
ಕೊಟಗಿ ಹತ್ಯೆ: ಇಬ್ಬರು ಆರೋಪಿಗಳ ಬಂಧನ


ಬಿದ್ದಾಪುರ ಕಾಲೊನಿಯ ವಿನೋದ ತಂದೆ ಧರ್ಮಣ್ಣ ಚವ್ಹಾಣ ಮತ್ತು ಮಹೇಶ್‌ ತಂದೆ ಕಾಶಿನಾಥ ಪರೀಟ ಅಲಿಯಾಸ್‌ ದೋಬಿ ಬಂಧಿತರು. ಇವರಿಬ್ಬರೂ ಶರಣ ಸಿರಸಗಿ ಸಮೀಪದ ನಿಸರ್ಗ ಕಾಲೊನಿಯ ಪ್ರಶಾಂತನನ್ನು ಭೇಟಿ ಮಾಡಿ ಮದ್ಯಸೇವನೆಗೆ ಹಣವನ್ನು ಸಾಲದ ರೂಪದಲ್ಲಿಕೇಳಿದ್ದರು. ಪ್ರಶಾಂತ ಸಾಲ ನೀಡಲು ನಿರಾಕರಿಸಿದ್ದರಿಂದ ಇಬ್ಬರೂ ಆರೋಪಿಗಳು ಪ್ರಶಾಂತನಿಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ಇವರಿಬ್ಬರನ್ನೂ ಪೊಲೀಸರು ತಾಲೂಕಿನ ಅವರಾದ (ಬಿ) ಗ್ರಾಮದ ಬಳಿ ಭಾನುವಾರ ಬಂಧಿಸುವಲ್ಲಿಸಫಲರಾಗಿದ್ದಾರೆ.

ಈ ಕುರಿತು ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ, ಡಿಸಿಪಿ ಕಿಶೋರ್‌ಬಾಬು ಮಾರ್ಗದರ್ಶನದಲ್ಲಿಸಿ ವಿಭಾಗದ ಎಸಿಪಿ ಎಸ್‌.ಎಚ್‌.ಸುಬೇದಾರ್‌, ಗ್ರಾಮೀಣ ಪಿಐ ಸೋಮಲಿಂಗ ಕಿರದಳ್ಳಿ, ಪಿಎಸ್‌ಐ ಎಸ್‌.ಎಸ್‌.ದೊಡ್ಡಮನಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ