ಆ್ಯಪ್ನಗರ

ಕೊತ್ತಲಬಸವೇಶ್ವರ ದೇವಾಲಯದ ಪರಿಸರ ಸ್ವಚ್ಛ

ಯುವಕರು ಮನಸ್ಸು ಮಾಡಿದರೆ ಸಮಾಜಮುಖಿ ಕೆಲಸ ಮಾಡಬಹುದು ಎನ್ನುವುದಕ್ಕೆ ಸೇಡಂನ ಯುವ ಬ್ರಿಗೇಡ ಕಾರ್ಯಕರ್ತರೇ ತಾಜಾ ನಿದರ್ಶನ.

Vijaya Karnataka 7 Nov 2019, 9:09 pm
ಸೇಡಂ :ಯುವಕರು ಮನಸ್ಸು ಮಾಡಿದರೆ ಸಮಾಜಮುಖಿ ಕೆಲಸ ಮಾಡಬಹುದು ಎನ್ನುವುದಕ್ಕೆ ಸೇಡಂನ ಯುವ ಬ್ರಿಗೇಡ ಕಾರ್ಯಕರ್ತರೇ ತಾಜಾ ನಿದರ್ಶನ.
Vijaya Karnataka Web kothalabasaveshwara temple is clean
ಕೊತ್ತಲಬಸವೇಶ್ವರ ದೇವಾಲಯದ ಪರಿಸರ ಸ್ವಚ್ಛ


ಯುವ ಬ್ರಿಗೇಡ ಉತ್ತರ ಭಾಗದ ಸದ್ಭಾವನಾ ರಾಜ್ಯ ಸಂಚಾಲಕ ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿಕಾರ್ಯಕರ್ತರು, ಯುವಕರು ಸ್ವಚ್ಛ ಕಾರ್ಯ ಕೈಗೊಂಡರು. ಕೈಯಲ್ಲಿಪೊರಕೆ ಹಿಡಿದು ದೇವಾಲಯ ಸುತ್ತಲಿನ ಪರಸರ ಸ್ವಚ್ಛಗೊಳಿಸಿದರು. ನೀರಿನಿಂದ ತೊಳೆದು ಬಣ್ಣ ಹಚ್ಚಿದರು. ಇದು ದೇವ ಮಂದಿರ ಪರಿಸರವಾಗಿದೆ. ಇಲ್ಲಿಮೂತ್ರವಿಸರ್ಜನೆ ನಿಷೇಧಿಸಲಾಗಿದೆ ಎಂದು ದಪ್ಪ ಅಕ್ಷರದಲ್ಲಿಬರೆಯಲಾಯಿತು.

ಕೊತ್ತಲಬಸವೇಶ್ವರ ದೇವಾಲಯ ಮುಂಭಾಗದ ರಸ್ತೆ ಬಯಲು ಮೂತ್ರ ವಿಸರ್ಜನೆಯ ಸ್ಥಳವಾಗಿ ಮಾರ್ಪಟ್ಟಿತ್ತು. ದೇವಾಲಯಕ್ಕೆ ಬರುವ ಮಹಿಳಾ ಭಕ್ತರು ಮುಜುಗರ ಪಡುತ್ತಿದ್ದರು. ಸುತ್ತಲಿನ ಪರಿಸರ ಮಲೀನ ಪ್ರದೇಶವಾಗಿತ್ತು. ಇಂತಹ ಒಳ್ಳೆಯ ಕೆಲಸ ಮಾಡಿದ ಕಾರ್ಯಕರ್ತರು ಸಾರ್ವಜನಿಕರ ಪ್ರಶಂಸೆಗೆ ಪಾತ್ರ ಆಗಿದ್ದಾರೆ.

ವಿಜಯಪುರ ವಿಭಾಗ ಸಂಚಾಲಕ ಶ್ರೀಕಾಂತ ಕೊಳ್ಳೂರ, ಸೇಡಂ ಸಂಚಾಲಕ ಕಾಶಿನಾಥ ಪೂಜಾರಿ, ಪ್ರಮುಖರಾದ ಜಗನ್ನಾಥ ಅಣ್ಣಾಸಾಗರ, ವಿನೋದ ಸಜ್ಜನ, ಗುರುಪ್ರಸಾದ, ಮಣಿಕಂಠ ಇತರರಿದ್ದರು.

ಕೊತ್ತಲಬಸವೇಶ್ವರ ದೇವಾಲಯ ಹತ್ತಿರದ ಮಲೀನ ಸ್ಥಳ ಸ್ವಚ್ಛಗೊಳಿಸಲಾಗಿದೆ. ಇಲ್ಲಿಮೂತ್ರ ವಿಸರ್ಜನೆ ಮಾಡಬಾರದು. ಸ್ವಚ್ಛತಾ ಕಾರ್ಯ ಸಾಂಕೇತಿಕವಾಗಿ ಮಾಡಿದ್ದು, ಪ್ರತಿಯೊಬ್ಬರು ಈ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಬೇಕು.

-ಕಾಶಿನಾಥ ಪೂಜಾರಿ, ಸಂಚಾಲಕರು ಯುವ ಬ್ರಿಗೇಡ ಸೇಡಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ