ಆ್ಯಪ್ನಗರ

ಕೃಷ್ಣ ಜನ್ಮೋತ್ಸವ; ಅದ್ಧೂರಿ ರಥೋತ್ಸವ

ಕೃಷ್ಣ ಜನ್ಮೋತ್ಸವದ ಪ್ರಯುಕ್ತ ಇಲ್ಲಿನ ವಿದ್ಯಾನಗರದ ಕೃಷ್ಣ ಮಂದಿರದಲ್ಲಿ ಅದ್ಧೂರಿ ರಥೋತ್ಸವ ಜರುಗಿತು.

Vijaya Karnataka 5 Sep 2018, 4:25 pm
ಕಲಬುರಗಿ : ಕೃಷ್ಣ ಜನ್ಮೋತ್ಸವದ ಪ್ರಯುಕ್ತ ಇಲ್ಲಿನ ವಿದ್ಯಾನಗರದ ಕೃಷ್ಣ ಮಂದಿರದಲ್ಲಿ ಅದ್ಧೂರಿ ರಥೋತ್ಸವ ಜರುಗಿತು.
Vijaya Karnataka Web krishna janmotsava hugely chariot
ಕೃಷ್ಣ ಜನ್ಮೋತ್ಸವ; ಅದ್ಧೂರಿ ರಥೋತ್ಸವ


1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರು ರಥೋತ್ಸವಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು. ಮಹಿಳಾ ಭಜನಾ ಮಂಡಳಿಯ ಭಜನೆ, ಹಾಡು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಫಲ ಮಂತ್ರಾಕ್ಷತೆ ನೀಡಲಾಯಿತು.

ಪಂಡಿತ ಗುರಾಚಾರ್ಯ ಆಶ್ರಿತ ಅವರು ಭಾಗವತ ಪುರಾಣ ಮಂಗಳ ಜರುಗಿತು.ಕೃಷ್ಣಾಚಾರ್ಯ ನವಲಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಮೊಸರು ಗಡಿಗೆ ಒಡೆದು ಜನ್ಮಾಷ್ಟಮಿ

ಇಲ್ಲಿನ ಜಗತ್‌ ವೃತ್ತದ ಗೊಲ್ಲರ ಕಾಲೊನಿಯಲ್ಲಿ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ವಿಶಿಷ್ಟವಾಗಿ ಆಚರಿಸಲಾಯಿತು.

ಮಾಜಿ ಶಾಸಕ ಅರುಣಾ ಸಿ. ಪಾಟೀಲ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉತ್ತರ ಕರ್ನಾಟಕ ಗೊಲ್ಲರ (ಯಾದವ) ಸಮಾಜ ಸೇವಾ ಸಂಘದ ಅಧ್ಯಕ್ಷ ವೆಂಕಟೇಶ ಯಾದವ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಶಿವಮೂರ್ತಿ ಶೀಲವಂತ, ಸುಭಾಷ ಗೌಳಿ, ಬಸವರಾಜ ರಾವೂರ, ಶಿವಶರಣಪ್ಪ ಗೋಗಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ