ಆ್ಯಪ್ನಗರ

ಕೃಷ್ಣಜನ್ಮಾಷ್ಟಮಿ: ಮೊಸರು ಗಡಿಗೆ ಆಟ

ಇಲ್ಲಿನ ಸ್ಟೇಷನ್‌ ಬಜಾರ್‌ ವಿಠ್ಠಲ ಮಂದಿರ ಟ್ರಸ್ಟ್‌ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತವಾಗಿ ಸೋಮವಾರ ಶ್ರೀಕೃಷ್ಣನ ಭಾವಚಿತ್ರ ಮತ್ತು ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಿಂದ ನಡೆಯಿತು.

Vijaya Karnataka 4 Sep 2018, 4:45 pm
ಕಲಬುರಗಿ : ಇಲ್ಲಿನ ಸ್ಟೇಷನ್‌ ಬಜಾರ್‌ ವಿಠ್ಠಲ ಮಂದಿರ ಟ್ರಸ್ಟ್‌ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತವಾಗಿ ಸೋಮವಾರ ಶ್ರೀಕೃಷ್ಣನ ಭಾವಚಿತ್ರ ಮತ್ತು ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಿಂದ ನಡೆಯಿತು.
Vijaya Karnataka Web krishnanajaswamy the game for the curd
ಕೃಷ್ಣಜನ್ಮಾಷ್ಟಮಿ: ಮೊಸರು ಗಡಿಗೆ ಆಟ


ಮೆರವಣಿಗೆ ವಿಠ್ಠಲ ಮಂದಿರದಿಂದ ಹೊರಟು, ವಲ್ಲಭಾಯಿ ಪಟೇಲ್‌ ವೃತ್ತದ ವರೆಗೂ ನಡೆಯಿತು. ಬಳಿಕ ಪುನಃ ಮಂದಿರಕ್ಕೆ ಮರಳಿತು. ಈ ವೇಳೆ ಮಂದಿರದ ಮುಂಭಾಗದಲ್ಲಿ ಯುವಕರಿಗಾಗಿ ಮೊಸರು ಗಡಿಗೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬಹಳಷ್ಟು ಯುವಕರು ಮೊಸರು ಗಡಿಗೆ ಒಡೆಯುವಲ್ಲಿ ಆಸಕ್ತಿ ತೋರಿಸಿದರು. ಈ ವೇಳೆ ಅಪಾರ ಭಕ್ತರು ಹಾಜರಿದ್ದರು. ಬಳಿಕ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಹರಿನಾಮ ಸಪ್ತಾಹ

ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಕಳೆದ 18 ವರ್ಷಗಳಿಂದ ನಡೆಸುತ್ತಿರುವಂತೆ ಈ ಬಾರಿಯೂ ಅ.27ರಿಂದ ಸೆ.3ರವರೆಗೆ ಅಖಂಡ ಹರಿನಾಮ ಸಪ್ತಾಹ ಆಯೋಜಿಸಲಾಗಿತ್ತು. ದಿ. 2ರಂದು ಕೃಷ್ಣನ ತೊಟ್ಟಿಲು ಕಾರ್ಯಕ್ರಮವೂ ನಡೆಯಿತು. ಈ ವೇಳೆಯಲ್ಲಿ ಭಕ್ತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ