ಕಲಬುರಗಿ: ನಮ್ಮಲ್ಲಿ ಕೆಲವು ರಾಷ್ಟ್ರದ್ರೋಹಿಗಳು ಕ್ರಿಕೆಟ್ ನಲ್ಲಿ ಪಾಕಿಸ್ತಾನ ಪರವಾಗಿ ಇದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಭಾರತ -ಪಾಕಿಸ್ತಾನ T-20 ಕ್ರಿಕೆಟ್ ಪಂದ್ಯ ಹಿನ್ನಲೆಯಲ್ಲಿ ಕಲಬುರಗಿಯಲ್ಲಿ ಭಾನುವಾರ ಮಾತನಾಡಿದ ಅವರು ಇಂತಹದೊಂದು ಆರೋಪ ಮಾಡಿದರು. ನಮ್ಮಲ್ಲಿ ಕೆಲ ರಾಷ್ಟ್ರದ್ರೋಹಿಗಳು ಕ್ರಿಕೆಟ್ನಲ್ಲೂ ಪಾಕಿಸ್ತಾನದ ಪರ ಇದ್ದಾರೆ. ಆದರೆ ಆಟವನ್ನು ಆಟದ ರೀತಿಯಲ್ಲಿಯೇ ನೋಡಬೇಕು.ಆದರೆ ಆಟದಲ್ಲೂ ದ್ವೇಷ ಕಾಣೋದು ಅವಶ್ಯಕತೆ ಇಲ್ಲ ಎಂದರು. ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳ ಶ್ರಮಕ್ಕೆ ನಾನು ಹಾರೈಸುತ್ತೇನೆ ಎಂದು ಕೆಎಸ್ ಈಶ್ವರಪ್ಪ ಹೇಳಿದರು.
ಪೊಲೀಸರು ಹಸಿರು ಶಾಲು ಹಾಕಿದರೆ ಒಪ್ಪುತ್ತೀರಾ?: ಸಚಿವ ಸುನಿಲ್ ಕುಮಾರ್ ಕೊಟ್ಟ ಉತ್ತರವೇನು?
ಭಾನುವಾರ 7. 30 ಭಾರತ ಹಾಗೂ ಪಾಕಿಸ್ತಾನದ ನಡುವೆ ಟಿ. ಟ್ವಂಟಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯಾಟದ ಹಿನ್ನೆಲೆಯಲ್ಲಿ ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದೆ.
ಎರಡು ದೇಶಗಳ ನಡುವೆ ನಡೆಯಲಿರುವ ಹೈವೋಲ್ಟೇಟ್ ಪಂದ್ಯಾವಳಿ ಇದಾಗಿದೆ. ಈಗಾಗಲೇ ಅಭಿಮಾನಿಗಳು ಈ ಜಿದ್ದಾಜಿದ್ದಿ ಪಂದ್ಯಾಟವನ್ನು ನೋಡಲು ಕಾತರರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಪಂದ್ಯಾಟದ ಬಗ್ಗೆ ಚರ್ಚೆ ಜೋರಾಗಿದೆ.
ಭಾರತ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಇತಿಹಾಸದ ಪರಂಪರೆಯನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಈ ರೋಚಕ ಪಂದ್ಯಕ್ಕೆ ವಿರಾಟ್ ಕೊಹ್ಲಿ ನೇತೃತ್ವದ ತಂಡ ಸಜ್ಜಾಗಿದೆ.
ಪೊಲೀಸರು ಹಸಿರು ಶಾಲು ಹಾಕಿದರೆ ಒಪ್ಪುತ್ತೀರಾ?: ಸಚಿವ ಸುನಿಲ್ ಕುಮಾರ್ ಕೊಟ್ಟ ಉತ್ತರವೇನು?
ಭಾನುವಾರ 7. 30 ಭಾರತ ಹಾಗೂ ಪಾಕಿಸ್ತಾನದ ನಡುವೆ ಟಿ. ಟ್ವಂಟಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯಾಟದ ಹಿನ್ನೆಲೆಯಲ್ಲಿ ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದೆ.
ಎರಡು ದೇಶಗಳ ನಡುವೆ ನಡೆಯಲಿರುವ ಹೈವೋಲ್ಟೇಟ್ ಪಂದ್ಯಾವಳಿ ಇದಾಗಿದೆ. ಈಗಾಗಲೇ ಅಭಿಮಾನಿಗಳು ಈ ಜಿದ್ದಾಜಿದ್ದಿ ಪಂದ್ಯಾಟವನ್ನು ನೋಡಲು ಕಾತರರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಪಂದ್ಯಾಟದ ಬಗ್ಗೆ ಚರ್ಚೆ ಜೋರಾಗಿದೆ.
ಭಾರತ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಇತಿಹಾಸದ ಪರಂಪರೆಯನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಈ ರೋಚಕ ಪಂದ್ಯಕ್ಕೆ ವಿರಾಟ್ ಕೊಹ್ಲಿ ನೇತೃತ್ವದ ತಂಡ ಸಜ್ಜಾಗಿದೆ.