ಆ್ಯಪ್ನಗರ

ಎಂ.ಬಿ. ಪಾಟೀಲ್‌, ಹೊರಟ್ಟಿಗೆ ಸಿಗದ ಸಚಿವ ಸ್ಥಾನ: ಲಿಂಗಾಯತರ ಆಕ್ರೋಶ

ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್‌, ಬಸವರಾಜ ಹೊರಟ್ಟಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡದೇ ಇರುವುದನ್ನು ಖಂಡಿಸಿ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಕಾರ್ಯಕರ್ತರು ಇಲ್ಲಿನ ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

Vijaya Karnataka 7 Jun 2018, 5:00 am
ಕಲಬುರಗಿ : ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್‌, ಬಸವರಾಜ ಹೊರಟ್ಟಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡದೇ ಇರುವುದನ್ನು ಖಂಡಿಸಿ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಕಾರ್ಯಕರ್ತರು ಇಲ್ಲಿನ ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
Vijaya Karnataka Web lingayats outrage protest
ಎಂ.ಬಿ. ಪಾಟೀಲ್‌, ಹೊರಟ್ಟಿಗೆ ಸಿಗದ ಸಚಿವ ಸ್ಥಾನ: ಲಿಂಗಾಯತರ ಆಕ್ರೋಶ


ಲಿಂಗಾಯತ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಲಾಗಿದೆ. ಬಸವರಾಜ ಹೊರಟ್ಟಿ ಅವರು 7 ಸಲ ಶಾಸಕರಾಗಿದ್ದರೂ ಅವರನ್ನು ಕಡೆಗಣಿಸಲಾಗಿದೆ. ಎಂ.ಬಿ. ಪಾಟೀಲ್‌ ಅವರು ಅತೀಹೆಚ್ಚು ಮತಗಳಿಂದ ಆಯ್ಕೆಯಾಗಿ ಸರಕಾರಕ್ಕೆ ಹೆಸರು ತಂದವರು. ಆದರೂ ಅವರಿಗೆ ಮಂತ್ರಿ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಮಹಾಸಭಾದ ಮುಖಂಡರಾದ ರವೀಂದ್ರ ಶಾಬಾದಿ, ರಮೇಶ ಪಸ್ತಾಪುರ, ವಿಜಯಕುಮಾರ ತೇಗಲತಿಪ್ಪಿ, ಸತೀಶ ಸಜ್ಜನ್‌, ನಾಗರಾಜ ನಿಂಬರಗಿ, ಶಾಂತವೀರ ಧಮ್ಮೂರ್‌, ನಾಗರಾಜ ಕಾಮಾ, ವಿಶ್ವನಾಥ ಮಂಗಲಗಿ, ಜಗದೀಶ ಪಾಟೀಲ್‌, ಜಗನ್ನಾಥ ಮಾಲಿ ಪಾಟೀಲ್‌ ಮುಂತಾದವರು ಇದ್ದರು.

ಎಂ.ಬಿ. ಪಾಟೀಲ್‌ ಮತ್ತು ಬಸವರಾಜ ಹೊರಟ್ಟಿ ಭಾವಚಿತ್ರ ಇರುವ ಬ್ಯಾನರ್‌ ಹಿಡಿದು ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ