ಆ್ಯಪ್ನಗರ

ಲಾಕ್‌ಡೌನ್‌, ಮನೆಯ ಲಾಕ್‌ ಮುರಿದು ಕಳವು

ಲಾಕ್‌ಡೌನ್‌ ಹಿನ್ನೆಲೆಯಲ್ಲಿಮನೆ ಮಂದಿಯೆಲ್ಲರೂ ಸ್ವಗ್ರಾಮಕ್ಕೆ ತೆರಳಿದ್ದ ಸಂದರ್ಭ ಬಳಸಿಕೊಂಡು ಕಳ್ಳರು ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ನಗದು, ಚಿನ್ನಾಭರಣ ಮತ್ತು ದಿನಸಿ ಸಾಮಗ್ರಿ ಕಳವು ಮಾಡಿರುವ ಘಟನೆ ಇಲ್ಲಿನ ವಿದ್ಯಾನಗರದ ಮನೆಯೊಂದರಲ್ಲಿನಡೆದಿದೆ.

Vijaya Karnataka 24 Apr 2020, 8:23 pm
ಕಲಬುರಗಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿಮನೆ ಮಂದಿಯೆಲ್ಲರೂ ಸ್ವಗ್ರಾಮಕ್ಕೆ ತೆರಳಿದ್ದ ಸಂದರ್ಭ ಬಳಸಿಕೊಂಡು ಕಳ್ಳರು ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ನಗದು, ಚಿನ್ನಾಭರಣ ಮತ್ತು ದಿನಸಿ ಸಾಮಗ್ರಿ ಕಳವು ಮಾಡಿರುವ ಘಟನೆ ಇಲ್ಲಿನ ವಿದ್ಯಾನಗರದ ಮನೆಯೊಂದರಲ್ಲಿನಡೆದಿದೆ.
Vijaya Karnataka Web lockdown house lock broken and stolen
ಲಾಕ್‌ಡೌನ್‌, ಮನೆಯ ಲಾಕ್‌ ಮುರಿದು ಕಳವು


ಬಡಾವಣೆಯ ಬಸವರಾಜ ಹಿರಣ್ಣಯ್ಯ ಮನೆಯಲ್ಲಿಈ ಘಟನೆ ನಡೆದಿದೆ. ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿಲಾಕ್‌ಡೌನ್‌ ವಿಧಿಸುತ್ತಿದ್ದಂತೆಯೇ ಬಸವರಾಜ್‌ ತಮ್ಮ ಕುಟುಂಬದ ಸದಸ್ಯರೊಂದಿಗೆ ಸ್ವಂತ ಊರಾದ ಸರಡಗಿ ಗ್ರಾಮಕ್ಕೆ ತೆರಳಿದ್ದಾರೆ.

ಇತ್ತ ಅವರ ಮನೆಯ ಬೀಗ ಮುರಿದಿರುವ ಕಳ್ಳರು ನಗದು, ಚಿನ್ನಾಭರಣದೊಂದಿಗೆ ಅಡುಗೆ ಮನೆಯಲ್ಲಿದ್ದ ಅಕ್ಕಿ, ತೊಗರಿಬೇಳೆ, ಜೋಳ ಮತ್ತು ಗೋಧಿ ಹಿಟ್ಟು, ಸಕ್ಕರೆ, ಶೇಂಗಾ ಇತ್ಯಾದಿ ದಿನಸಿ ಸಾಮಗ್ರಿ ಕಳವು ಮಾಡಿಕೊಂಡು ಹೋಗಿದ್ದಾರೆ. ಸ್ಟೇಷನ್‌ ಬಜಾರ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ