ಆ್ಯಪ್ನಗರ

ಬಾಪು ನಗರ, ಬರೂಚ್‌ನಲ್ಲಿ ಆಸ್ಪತ್ರೆ ನಿರ್ಮಿಸಿದ್ದು ಯಾರು: ಶಾಗೆ ಖರ್ಗೆ ಪ್ರಶ್ನೆ

ಖರ್ಗೆ ಈ ಭಾಗಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವವರಿಗೆ ಕಲಬುರಗಿ ನಗರವೊಂದರಲ್ಲಿಯೇ ಎರಡು ಫರ್ಲಾಂಗಿಗೆ ಒಂದು ಮೆಡಿಕಲ್ ಕಾಲೇಜು ಕಾಣಿಸುತ್ತಿಲ್ಲವೇ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಹೆಸರು ಹೇಳದೆ ಅಮಿತ್‌ ಶಾ ಅವರನ್ನು ಪ್ರಶ್ನಿಸಿದ್ದಾರೆ.

Vijaya Karnataka Web 28 Feb 2018, 3:15 pm
ಕಲಬುರಗಿ: ಖರ್ಗೆ ಈ ಭಾಗಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವವರಿಗೆ ಕಲಬುರಗಿ ನಗರವೊಂದರಲ್ಲಿಯೇ ಎರಡು ಫರ್ಲಾಂಗಿಗೆ ಒಂದು ಮೆಡಿಕಲ್ ಕಾಲೇಜು ಕಾಣಿಸುತ್ತಿಲ್ಲವೇ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಹೆಸರು ಹೇಳದೆ ಅಮಿತ್‌ ಶಾ ಅವರನ್ನು ಪ್ರಶ್ನಿಸಿದ್ದಾರೆ.
Vijaya Karnataka Web mallikarjun kharge questioned to amit shah
ಬಾಪು ನಗರ, ಬರೂಚ್‌ನಲ್ಲಿ ಆಸ್ಪತ್ರೆ ನಿರ್ಮಿಸಿದ್ದು ಯಾರು: ಶಾಗೆ ಖರ್ಗೆ ಪ್ರಶ್ನೆ


'ನಮ್ಮದೇ ಊರಿಗೆ ಬಂದು ನಮ್ಮನ್ನು ಬೈದು ಹೋದವರು ನಾನು ಏನೂ ಮಾಡಿಲ್ಲ ಅಂತಿದ್ದಾರೆ. ನಮ್ಮ ಒಳ್ಳೆಯ ಕೆಲಸ ಅವರಿಗೆ ಕಾಣುವುದಿಲ್ಲ. ಕನಿಷ್ಠ ಗುಜರಾತಿನ ಅಹ್ಮದ್ ನಗರದ ಬಾಪು ನಗರದಲ್ಲಿ ನಾನು ಕೇಂದ್ರ ಕಾರ್ಮಿಕ ಸಚಿವನಾಗಿ 200 ಹಾಸಿಗೆ ಆಸ್ಪತ್ರೆ ನಿರ್ಮಿಸಿಕೊಟ್ಟೆ. ಸಮೀಪದ ಬರೂಚ್‌ನಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಿಕೊಟ್ಟಿರುವೆ. ಅದಾದರೂ ಕಾಣುತ್ತಿದೆಯೇ.' ಎಂದು ಖರ್ಗೆ ಕೇಳಿದ್ದಾರೆ.

ಇಷ್ಟಕ್ಕೂ ಈ ಭಾಗದ ಆಲಮಟ್ಟಿ ಡ್ಯಾಂ, ಬೆಣ್ಣೆತೊರಾ, ಮುಲ್ಲಾಮಾರಿ, ಚುಳಕಿನಾಲಾ, ಕಾರಂಜಾ ಅಣೆಕಟ್ಟು ನಿರ್ಮಿಸಿ ಲಕ್ಷಾಂತರ ಎಕರೆ ಜಮೀನಿಗೆ ನೀರು ಕೊಟ್ಟವರು ಯಾರು ಎಂಬುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಕೇಂದ್ರ ರೈಲ್ವೆ ಸಚಿವನಾದಾಗ ಇಡೀ ರಾಜ್ಯಕ್ಕೆ ಉಪಯೋಗ ಆಗುವಂತೆ ರೈಲ್ವೆ ಲೇನ್ ಕೊಟ್ಟಿದ್ದಾಗಲಿ, ಹೊಸ ರೈಲುಗಳನ್ನು ನೀಡಿದ್ದಾಗಲಿ ಇವರಿಗೆ ಗೊತ್ತಿರಬೇಕಲ್ವ ಎಂದರು. ಕೇವಲ ರಾಜಕೀಯ ಕಾರಣಕ್ಕಾಗಿ ಮಾತನಾಡುವುದನ್ನು ಬಿಡಬೇಕು ಎಂದು ಅವರು ಸಲಹೆ ನೀಡಿದರು.

ಇಲ್ಲಿನ ಗುಲ್ಬಗ೯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧೀನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ ಮಲ್ಲಿಕಾರ್ಜುನ ಖರ್ಗೆ ಗುಲ್ಬಗ೯ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹಾಗೂ ಟ್ರೂಮಾ ಸೆಂಟರ್ ಉದ್ಘಾಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ