ಆ್ಯಪ್ನಗರ

ಅಕ್ಕನನ್ನು ಭೇಟಿಯಾಗಿ ರಾಖಿ ಕಟ್ಟಿಸಿಕೊಳ್ಳಲು ಬಂದವನ ದುರಂತ ಅಂತ್ಯ

ಚಿಕಿತ್ಸೆ ಪಡೆಯುತ್ತಿದ್ದ ಅಕ್ಕನನ್ನು ಭೇಟಿಯಾಗಿ ರಾಖಿ ಕಟ್ಟಿಸಿಕೊಂಡು ಹೋಗಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Vijaya Karnataka Web 16 Aug 2019, 1:49 pm
ಕಲಬುರಗಿ: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕನನ್ನು ಭೇಟಿಯಾಗಿ ರಾಖಿ ಕಟ್ಟಿಸಿಕೊಂಡು ಹೋಗಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
Vijaya Karnataka Web murder2


ಕೊಲೆಯಾದ ವ್ಯಕ್ತಿಯನ್ನು ಆಳಂದದ ರವಿಕುಮಾರ್ ಶಿವಶಂಕರ್ (35) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಬೆಳಗಾವಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದಿದೆ.

ರಾಖಿ ಹಬ್ಬದ ನಿಮಿತ್ತ ಮತ್ತು ಕಲಬುರ್ಗಿಯ ಖಾಸಗಿ ದವಾಖಾನೆ ಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕನನ್ನು ಭೇಟಿಯಾಗಿ ರಾಖಿ ಕಟ್ಟಿಸಿಕೊಂಡು ಹೋಗಲು ಕಲಬುರಗಿಗೆ ಆಗಮಿಸಿದ್ದ. ಆದರೆ, ವಿಧಿಯಾಟವೇ ಬೇರೆಯಾಗಿತ್ತು.

ಸಂಜೆ ಭಾವನೊಂದಿಗೆ ಊಟ ಮಾಡಿದ ಬಳಿಕ ಆಸ್ಪತ್ರೆಯ ಪಕ್ಕದಲ್ಲೇ ಇರುವ ಚಿಕ್ಕ ಉದ್ಯಾನವನದಲ್ಲಿ ಮಲಗಿಕೊಂಡಿದ್ದ. ತಡರಾತ್ರಿ ಅಪರಿಚಿತರು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಬೆಳಗ್ಗೆ ಅಕ್ಕನ ಗಂಡ ರವಿಯನ್ನು ಎಬ್ಬಿಸಲು ಹೋದಾಗ ಈ ಘಟನೆ ಬಯಲಾಗಿದೆ.

ಅಕ್ಕನ ಗಂಡನ ಪ್ರಕಾರ ರವಿಗೆ ಅಂತ ಹೇಳಿಕೊಳ್ಳುವ ಶತ್ರುಗಳು ಯಾರೂ ಇದ್ದಿರಲಿಲ್ಲ. ಆತನ ಬಳಿ ಹೆಚ್ಚು ಹಣವೂ ಇರಲಿಲ್ಲ. ಆದರೆ ಕೊಲೆ ಮಾಡಿದವರು ಯಾರು ಮತ್ತು ಏತಕ್ಕಾಗಿ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಈ ಕುರಿತು ಸ್ಟೇಷನ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ