ಆ್ಯಪ್ನಗರ

ಮಾನವ ಬಲಿಗೆ ಕಾದಿವೆ ಮ್ಯಾನ್‌ಹೋಲ್‌ !

ಇಲ್ಲಿನ ಮಹಾನಗರ ಪಾಲಿಕೆಯ ವಾರ್ಡ್‌-55ರ ವ್ಯಾಪ್ತಿಯ ಕರುಣೇಶ್ವರ ನಗರ, ಬೃಂದಾವನ ಲೇಔಟ್‌ ಮತ್ತು ಜನತಾಗೃಹ ಬಡಾವಣೆಯಲ್ಲಿ ಅವೈಜ್ಞಾನಿಕಾಗಿ ನಿರ್ಮಿಸಿರುವ ಮ್ಯಾನ್‌ಹೋಲ್‌ಗಳು ಈಗಲೂ ಜನರಲ್ಲಿ ಆತಂಕ ಮೂಡಿಸಿವೆ.

Vijaya Karnataka 20 Jul 2018, 4:26 pm
ಕಲಬುರಗಿ : ಇಲ್ಲಿನ ಮಹಾನಗರ ಪಾಲಿಕೆಯ ವಾರ್ಡ್‌-55ರ ವ್ಯಾಪ್ತಿಯ ಕರುಣೇಶ್ವರ ನಗರ, ಬೃಂದಾವನ ಲೇಔಟ್‌ ಮತ್ತು ಜನತಾಗೃಹ ಬಡಾವಣೆಯಲ್ಲಿ ಅವೈಜ್ಞಾನಿಕಾಗಿ ನಿರ್ಮಿಸಿರುವ ಮ್ಯಾನ್‌ಹೋಲ್‌ಗಳು ಈಗಲೂ ಜನರಲ್ಲಿ ಆತಂಕ ಮೂಡಿಸಿವೆ.
Vijaya Karnataka Web manhole waiting for human sacrifice
ಮಾನವ ಬಲಿಗೆ ಕಾದಿವೆ ಮ್ಯಾನ್‌ಹೋಲ್‌ !


ಇತ್ತೀಚೆಗೆ ಪಾಲಿಕೆ ಎದುರಿನ ಮುಖ್ಯರಸ್ತೆ ಮೇಲಿನ ಮ್ಯಾನ್‌ಹೋಲ್‌ ಮೇಲೆ ಬೈಕ್‌ ಹಾಯ್ದು ಯುವತಿಯೊಬ್ಬಳು ಮೃತಪಟ್ಟ ಘಟನೆಯ ಬೆನ್ನಲ್ಲೇ ಪಾಲಿಕೆ ತನ್ನ ವ್ಯಾಪ್ತಿಯ ಎಲ್ಲ ವಾರ್ಡುಗಳಲ್ಲಿ ಅವೈಜ್ಞಾನಿಕ ರೀತಿಯ ಮ್ಯಾನ್‌ಹೋಲ್‌ಗಳನ್ನು ಸಮತಟ್ಟುಗೊಳಿಸುವ ಕೆಲಸ ಆರಂಭಿಸಿದೆ. ಆದರೆ, ಈವರೆಗೆ ಈ ಮೂರೂ ಬಡಾವಣೆಗಳಲ್ಲಿ ಕಣ್ಣು ಕೋರೈಸುವಂತೆ ರಸ್ತೆ ಬದಿ, ರಸ್ತೆ ಮಧ್ಯೆ ಇರುವ ಮ್ಯಾನ್‌ಹೋಲ್‌ಗಳನ್ನು ಮಾತ್ರ ಈವರೆಗೆ ಸಮತಟ್ಟುಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ. ಹೀಗಾಗಿ, ಮಹಿಳೆಯರು, ಮಕ್ಕಳು ಮತ್ತು ವಯೋವೃದ್ಧರು ರಾತ್ರಿ ವೇಳೆ ಈ ಬಡಾವಣೆಗಳಲ್ಲಿ ನಡೆದಾಡಲು ಹೆದರುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಬಡಾವಣೆಯ ಜನರು ಭೀತಿ ವ್ಯಕ್ತಪಡಿಸುತ್ತಾರೆ.

ರಸ್ತೆ ಬದಿ ಹಾದು ಹೋಗುವ ವಾಹನಗಳ ಸವಾರರು ಮೈಯೆಲ್ಲಾ ಕಣ್ಣಿಟ್ಟುಕೊಂಡು ಸವಾರಿ ಮಾಡುವ ಸ್ಥಿತಿ ಕಾಡುತ್ತಿದೆ. ಒಂದುವೇಳೆ, ಸ್ವಲ್ಪ ಯಾಮಾರಿದರೂ ಮ್ಯಾನ್‌ಹೋಲ್‌ ಪಾಲಾಗುವ ಸ್ಥಿತಿಯಿದೆ. ಈ ಕುರಿತು ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ ಎಂದು ಕರುಣೇಶ್ವರ ನಗರ ಬಡಾವಣೆಯ ಗೃಹಿಣಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ಸಮೀಕ್ಷೆ ನಡೆಸಲು ಆಗ್ರಹ:

ಕಲಬುರಗಿ ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಮ್ಯಾನ್‌ಹೋಲ್‌ಗಳನ್ನು ಇದೇ ರೀತಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಈ ಕುರಿತು ಪಾಲಿಕೆ ಅಧಿಕಾರಿಗಳು ಮೊದಲು ಸಮಗ್ರ ಸಮೀಕ್ಷೆ ಕೈಗೊಂಡು ನಂತರ ಅವುಗಳನ್ನು ಸಮತಟ್ಟುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿತ್ತು. ಆದರೆ, ಸದ್ಯ ಅಧಿಕಾರಿಗಳು ತಮ್ಮ ಕಣ್ಣಿಗೆ ಗೋಚರಿಸುವ ಮ್ಯಾನ್‌ಹೋಲ್‌ಗಳನ್ನು ಮಾತ್ರ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಒಳಪ್ರದೇಶಗಳಲ್ಲಿರುವ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಜನರು ಟೀಕಿಸುತ್ತಿದ್ದಾರೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಅವೈಜ್ಞಾನಿಕ ಮ್ಯಾನ್‌ಹೋಲ್‌ಗಳನ್ನು ಸಮತಟ್ಟುಗೊಳಿಸುವುದಕ್ಕೂ ಮುನ್ನ ಸಮಗ್ರ ಸಮೀಕ್ಷೆ ಕೈಗೊಳ್ಳಬೇಕು. ಆ ನಂತರ ಕ್ರಮಕ್ಕೆ ಮುಂದಾಗುವುದು ಒಳ್ಳೆಯದು.

-ಮಹೇಶ್‌ ಹೊಸೂರಕರ್‌, ಪಾಲಿಕೆ ಸದಸ್ಯರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ