ಆ್ಯಪ್ನಗರ

ಕಲಬುರಗಿಗೆ ಸಿಎಂ ಭೇಟಿ: ಪತ್ರಕರ್ತರಿಗೆ ಆಹ್ವಾನ ನೀಡದ ಜಿಲ್ಲಾಡಳಿತ, ಡಿಸಿಎಂ ವಿರುದ್ಧ ವರದಿ ಪ್ರಕಟಿಸಿದ್ದಕ್ಕೆ ಶಿಕ್ಷೆ?

ಭೀಕರ ಪ್ರವಾಹ ಸ್ಥಿತಿ ಏರ್ಪಟ್ಟಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲೆಗೆ ಭೇಟಿ ನೀಡದ ಕುರಿತು ಮಾಧ್ಯಮಗಳಲ್ಲಿ ಮ್ಯಾರಥಾನ್ ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಜಿಲ್ಲಾಡಳಿತ ಪತ್ರಕರ್ತರಿಗೆ ಈ ಶಿಕ್ಷೆ ವಿಧಿಸಿದೆ.

Vijaya Karnataka Web 21 Oct 2020, 12:55 pm
ಕಲಬುರಗಿ: ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಕೈಗೊಳ್ಳಲು ಆಗಮಿಸಿರುವ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಾಗದೆ ಪತ್ರಕರ್ತರು ಕಲಬುರಗಿ ಏರ್ ಪೋಟ್೯ ಗೇಟು ಕಾಯುವ ಸ್ಥಿತಿ ಬಂದೊದಗಿದೆ.
Vijaya Karnataka Web ಕಲಬುರಗಿ ವಿಮಾನ ನಿಲ್ದಾಣ ಗೇಟ್‌ ಬಳಿ ಪತ್ರಕರ್ತರು
ಕಲಬುರಗಿ ವಿಮಾನ ನಿಲ್ದಾಣ ಗೇಟ್‌ ಬಳಿ ಪತ್ರಕರ್ತರು


ಭೀಕರ ಪ್ರವಾಹ ಸ್ಥಿತಿ ಏರ್ಪಟ್ಟಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲೆಗೆ ಭೇಟಿ ನೀಡದ ಕುರಿತು ಮಾಧ್ಯಮಗಳಲ್ಲಿ ಮ್ಯಾರಥಾನ್ ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಜಿಲ್ಲಾಡಳಿತ ಪತ್ರಕರ್ತರಿಗೆ ಈ ಶಿಕ್ಷೆ ವಿಧಿಸಿದೆ.

ಸಿಎಂ ಜಿಲ್ಲಾ ಪ್ರವಾಸದ ವೇಳೆ ವಾರ್ತಾ ಇಲಾಖೆ ವತಿಯಿಂದ ಪತ್ರಕರ್ತರಿಗೆ ಅಧಿಕೃತ ಆಹ್ವಾನ ಮತ್ತು ವಾಹನ ವ್ಯವಸ್ಥೆ ಸಹ ಮಾಡದೆ ಪತ್ರಕರ್ತರನ್ನು ಅವಮಾನಿಸಲಾಗುತ್ತಿದೆ.

ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಸಿಎಂ ಭೇಟಿಗೆ ಅವಕಾಶ ಇಲ್ಲ ಎಂದು ಗೇಟ್ ಬಳಿ ಇರುವ ಪೊಲೀಸರು ಸ್ಪಷ್ಟವಾಗಿ ಹೇಳುತ್ತಿದ್ದಾರೆ‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ