ಆ್ಯಪ್ನಗರ

ಕಲಬುರಗಿಯಲ್ಲಿ ಬುದ್ಧಿಮಾಂಧ್ಯ ಬಾಲಕಿ ಮೇಲೆ ಅತ್ಯಾಚಾರ : ಕುತ್ತಿಗೆ ಹಿಸುಕಿ ಹತ್ಯೆ

12 ವರ್ಷದ ಬುದ್ಧಿಮಾಂಧ್ಯ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಯುವಕನೊಬ್ಬ ಆಕೆಯ ಅತ್ಯಾಚಾರ ನಡೆಸಿ ಬಳಿಕ ಕತ್ತು ಹಿಸುಕಿ ಕೊಂದು ಹಾಕಿದ ಘಟನೆ ಕಲಬುರಗಿಯ ಚಿಂಚೋಳಿ ತಾಲೂಕಿನ ಸುಲೇಪೇಟ ಸಮೀಪದ ಯಾಕಾಪುರ ಗ್ರಾಮದಲ್ಲಿನಡೆದಿದೆ.

Vijaya Karnataka Web 2 Dec 2019, 11:26 pm
ಕಲಬುರಗಿ : 12 ವರ್ಷದ ಬುದ್ಧಿಮಾಂಧ್ಯ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಯುವಕನೊಬ್ಬ ಆಕೆಯ ಅತ್ಯಾಚಾರ ನಡೆಸಿ ಬಳಿಕ ಕತ್ತು ಹಿಸುಕಿ ಕೊಂದು ಹಾಕಿದ ಘಟನೆ ಚಿಂಚೋಳಿ ತಾಲೂಕಿನ ಸುಲೇಪೇಟ ಸಮೀಪದ ಯಾಕಾಪುರ ಗ್ರಾಮದಲ್ಲಿನಡೆದಿದೆ.
Vijaya Karnataka Web rape
ಸಾಂದರ್ಭಿಕ ಚಿತ್ರ


ಗ್ರಾಮದ ಯಲ್ಲಾಲಿಂಗ ಎಂಬಾತ ಕುಡಿದ ನಶೆಯಲ್ಲಿತನ್ನದೇ ಗ್ರಾಮದ ಅನ್ಯಕೋಮಿನ ಬಾಲಕಿಗೆ ಚಾಕೊಲೇಟ್‌ ಕೊಡಿಸುವ ಆಮಿಷವೊಡ್ಡಿ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ತನ್ನೊಂದಿಗೆ ಕರೆದೊಯ್ದಿದ್ದ ಎನ್ನಲಾಗಿದೆ. ಬಳಿಕ ಗ್ರಾಮದ ಹೊರವಲಯದ ಅಂಗನವಾಡಿ ಕೇಂದ್ರದ ಬಳಿ ಅತ್ಯಾಚಾರ ಎಸಗಿ, ಬಾಲಕಿಯನ್ನು ಹತ್ಯೆಗೈದಿದ್ದಾನೆ ಎಂದು ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಸುಲೇಪೇಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ