ಆ್ಯಪ್ನಗರ

ಸಕ್ಕರೆ ಕಾರ್ಖಾನೆಯಲ್ಲಿ ಕಿಡಿಗೇಡಿಗಳ ದಾಂಧಲೆ: ಕಚೇರಿಗೆ ನುಗ್ಗಿ ಹಲ್ಲೆ, ಪೀಠೋಪಕರಣ ಧ್ವಂಸ

ಕಿಡಿಗೇಡಿಗಳು ದಾಂಧಲೆ ನಡೆಸಿದ ಕೃತ್ಯ ಕಚೇರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಿಸಿಟಿವಿಯ ದೃಶ್ಯದ ಫೂಟೇಜ್ ಅನ್ನು ಕಾರ್ಖಾನೆಯ ಅಧಿಕಾರಿ ಸಂಗಮೇಶ್ ಸ್ಥಾವರಮಠ ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ. ಹಲ್ಲೆ ಕೃತ್ಯದ ಕುರಿತು ನಿಂಬರ್ಗಾ ಪೊಲೀಸ್ ಠಾಣೆ ಪಿಎಸ್ಐ ಅವರಿಗೆ ಮಾತನಾಡಿ ದೂರು ನೀಡಿದ್ದು ಅವರು ಸ್ಥಳಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆಂದು ಅವರು ಹೇಳಿದ್ದಾರೆ.

Vijaya Karnataka Web 20 May 2019, 2:09 pm
ಕಲಬುರಗಿ: ಆಳಂದ ತಾಲೂಕಿನ ಭೂಸನೂರ್ ಎನ್ಎಸ್ಎಲ್ ಶುಗರ್ ಫ್ಯಾಕ್ಟರಿಗೆ ಕಿಡಿಗೇಡಿಗಳು ನುಗ್ಗಿ ಹಲ್ಲೆ ಮಾಡಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಪರಿಣಾಮ ಫ್ಯಾಕ್ಟರಿಯ ಸೆಕ್ಯೂರಿಟಿ ಗಾರ್ಡ್ ಗೆ ಗಂಭೀರ ಗಾಯಗಳಾಗಿದ್ದು, ಗಾರ್ಡ್‌ನನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Vijaya Karnataka Web Kalaburagi


ಕಬ್ಬಿನ ಹಣ ಪಾವತಿ ಮಾಡಿ ಎಂದು ಧರ್ಮರಾಜ ಸಾಹು ಸೇರಿದಂತೆ 5-6 ಜನ ರಾತ್ರೋ ರಾತ್ರಿ ಫ್ಯಾಕ್ಟರಿಗೆ ನುಗ್ಗಿ ಸೆಕ್ಯೂರಿಟಿ, ಗಾರ್ಡ್ ಗುರುಶಾಂತ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದಾರೆ. ಫ್ಯಾಕ್ಟರಿಯ ಎಂ.ಡಿ ಮೇಲೆ ಹಲ್ಲೆಗೂ ಯತ್ನಿಸಿ ಅವರ ಕಚೇರಿಗೆ ನುಗ್ಗಿದ್ದರು. ಆದರೆ ಅವರು ಸ್ಥಳದಲ್ಲಿ ಇಲ್ಲದ ಕಾರಣ ಫ್ಯಾಕ್ಟರಿಯಲ್ಲಿದ್ದ ಕಂಪ್ಯೂಟರ್, ಪ್ರಿಂಟರ್, ಪೀಠೋಪಕರಣ ಧ್ವಂಸಗೈದು, ಕಚೇರಿ ಕಿಟಿಕಿಗಳು ಪುಡಿ ಪುಡಿ ಮಾಡಿ ದಾಂಧಲೆ ನಡೆಸಿದ್ದಾರೆ ಎಂದು ಫ್ಯಾಕ್ಟರಿಯ ಅಧಿಕಾರಿ ಸಂಗಮೇಶ್ ಸ್ಥಾವರಮಠ ಅವರು ತಿಳಿಸಿದ್ದಾರೆ.

ಕಿಡಿಗೇಡಿಗಳು ದಾಂಧಲೆ ನಡೆಸಿದ ಕೃತ್ಯ ಕಚೇರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಿಸಿಟಿವಿಯ ದೃಶ್ಯದ ಫೂಟೇಜ್ ಮಾಧ್ಯಮದವರಿಗೆ ಬಿಡುಗಡೆ ಮಾಡಿದ್ದಾರೆ.

ನಂತರ ಮಾತನಾಡಿದ ಅವರು ಹಲ್ಲೆ ಹಾಗೂ ಕೃತ್ಯದ ಕುರಿತು ನಿಂಬರ್ಗಾ ಪೊಲೀಸ್ ಠಾಣೆ ಪಿಎಸ್ ಐ ಅವರಿಗೆ ಮಾತನಾಡಿ ದೂರು ನೀಡಿದ್ದು ಅವರು ಸ್ಥಳಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆಂದು ಅವರು ಹೇಳಿದ್ದಾರೆ.

ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸುವುದಾಗಿ ಫ್ಯಾಕ್ಟರಿಯ ಅಧಿಕಾರಿ ಸಂಗಮೇಶ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ