ಆ್ಯಪ್ನಗರ

ಮೋದಿ ಶ್ರೀಮಂತ ಮನೆಯ ಚೌಕಿದಾರ್‌: ಜಯಮಾಲಾ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಡವರ, ಅಶಕ್ತರ, ಶೋಷಿತರ ಮತ್ತು ತುಳಿತಕ್ಕೊಳಗಾದವರ ಚೌಕಿದಾರ್‌ ಅಲ್ಲ. ಅವರು ಶ್ರೀಮಂತರ ಮನೆಯ ಚೌಕಿದಾರ್‌ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ವ್ಯಂಗ್ಯವಾಡಿದರು.

Vijaya Karnataka 21 Apr 2019, 5:00 am
ಕಲಬುರಗಿ :ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಡವರ, ಅಶಕ್ತರ, ಶೋಷಿತರ ಮತ್ತು ತುಳಿತಕ್ಕೊಳಗಾದವರ ಚೌಕಿದಾರ್‌ ಅಲ್ಲ. ಅವರು ಶ್ರೀಮಂತರ ಮನೆಯ ಚೌಕಿದಾರ್‌ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ವ್ಯಂಗ್ಯವಾಡಿದರು.
Vijaya Karnataka Web modis wealthy house square jayamala
ಮೋದಿ ಶ್ರೀಮಂತ ಮನೆಯ ಚೌಕಿದಾರ್‌: ಜಯಮಾಲಾ


ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಕ್ಕಾಗಿಯೇ ಇವತ್ತು ದೇಶದ ರೈತರಿಗೆ ಮೂರು ಕಂತುಗಳಲ್ಲಿ 6ಸಾವಿರ ರೂ, ಅಂದರೆ ದಿನಕ್ಕೆ 17 ರೂ.ಗಳನ್ನು ರೈತರಿಗೆ ನೀಡಲು ಹೊರಟಿದ್ದಾರೆ. ರೈತನ ಹಸಿವಿನ ಕಿಮ್ಮತ್ತು ಇಷ್ಟೇನಾ ಎಂದು ಪ್ರಶ್ನಿಸಿದ ಅವರು, ಇನ್ನೂ ಕೇಂದ್ರ ಸರಕಾರ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿ ಅವರ ಪಾಲು ಮಾಡಲು ಹೊರಟಿದ್ದಾರೆ. ಇದೆಲ್ಲವೂ ಹೇಳುತ್ತವೆ ಮೋದಿ ಬಡವರ, ನಿರುದ್ಯೋಗಿ ಯುವಕರ ಮತ್ತು ಮಾತೆಯರ ಕಾಯುವ ಚೌಕಿದಾರ್‌ ಅಲ್ಲ, ಕೇವಲ ಶ್ರೀಮಂತ ಉದ್ಯಮಿಗಳ ಚೌಕಿದಾರ್‌ ಎಂದರು.

* ಸುಳ್ಳಿನ ಸರಕಾರ

ಕೇಂದ್ರದಲ್ಲಿರುವುದು ಸುಳ್ಳಿನ ಸರಕಾರ, ಕಳೆದ ಚುನಾವಣೆಯಲ್ಲಿ ನೀಡಿದ ಯಾವ ಭರವಸೆ ಈಡೇರಿಸಿಲ್ಲ. ಆದರೂ, ದೇಶದ ತುಂಬಾ ಕಾಂಗ್ರೆಸ್‌ ಹಾಗೆ ಮಾಡಿದೆ, ಹೀಗೆ ಮಾಡಿದೆ ಅನ್ನುತ್ತಾ ಓಡಾಡುತ್ತಾರೆ. ಅರ್ರೆ.. ನೀವೇನು ಮಾಡಿದ್ದೀರಿ ಹೇಳ್ರಿ.. ಅಂದ್ರೆ, ಪುಲ್ವಾಮಾ ದಾಳಿಯಲ್ಲಿ ನೂರಾರು ಉಗ್ರರನ್ನು ಸೆದೆ ಬಡಿದಿದ್ದೇವೆ ಎಂದು ಮೋದಿ ತಾವೇ ನೇರವಾಗಿ ಬಾಂಬ್‌ ಹಾಕಿದಂತೆ ಕಥೆ ಸೃಷ್ಟಿಸಿ ಹೇಳುತ್ತಾರೆ. ಇನ್ನೊಂದೆಡೆ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್‌ ಪಾಕಿಸ್ತಾನದಲ್ಲಿನ ಒಬ್ಬ ಸಾರ್ವಜನಿಕ ಸತ್ತಿಲ್ಲ. ಯಾರಿಗೂ ಏನು ನಷ್ಟವಾಗಿಲ್ಲ. ನಮ್ಮ ಗುರಿ ಸ್ಪಷ್ಟವಾಗಿತ್ತು ಎನ್ನುತ್ತಾರೆ. ಯಾರು ಗುರಿ, ಹೇಗೆ ನಡೆಯಿತು ದಾಳಿ ಎಂದರೆ ಸ್ವಾಭಿಮಾನ ಕಥೆ ಹೇಳುತ್ತಾರೆ. ಅದಲ್ಲವೂ ಬರೀ ಸುಳ್ಳಿನ ಕಂತೆ. ಬುರುಡೆ ಬಿಡುತ್ತಿದ್ದಾರೆ ಎಂದರು.

ಗ್ಯಾಸ್‌ ಸಬ್ಸಿಡಿ ಬಿಡಿ.. ನಿಮ್ಮ ಹಣದಲ್ಲಿ ದೇಶದ ಮಹಿಳೆಯೊಬ್ಬರಿಗೆ ಅನಿಲ ದೊರೆಯುವಂತೆ ಮಾಡುತ್ತೇವೆ ಎಂದ ಮೋದಿ ಒಂದು ಕೈಯಿಂದ ಕೊಟ್ಟು, ಇನ್ನೊಂದು ಕೈಯಿಂದ ಸಿಲೆಂಡರ್‌ ಬೆಲೆ ಗಗನಕ್ಕೇರಿಸಿ ಆ ಬಡ ಹೆಣ್ಣು ಮಗಳ ಸಣ್ಣ ಕೌಟುಂಬಿಕ ಬಜೆಟ್‌ ಮೇಲೆ ದಾಳಿ ಮಾಡಿದ್ದಾರೆ. ಇದ್ಯಾವ ನ್ಯಾಯ ಸ್ವಾಮಿ ಅಂತಾ ಕೇಳಿದರೆ, ಆಯುಷ್ಮಾನ ಭಾರತ್‌ ಅಂತಾರೆ. ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಕೊಟ್ಟಿದ್ದೇವೆ ಎನ್ನುತ್ತಾರೆ. ಇನ್ನೊಂದೆಡೆ ಬೇಟಿ ಪಡಾವೋ ಬೇಟಿ ಬಚಾವೋ ಅಂತಾರೆ, ಬಿಜೆಪಿ ಸಂಸದರೇ ಬೇಟಿಗಳ ಮೇಲೆ ದೌರ್ಜನ್ಯ ಮಾಡ್ತಾರೆ. ಸಂಸತ್ತಿನಲ್ಲಿ ಖರ್ಗೆ ಅವರಂತಹ ಹುಲಿ ಇರಬೇಕು ಎಂದರು.

ಕೆಪಿಸಿಸಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲತಾ ರವಿ ರಾಠೋಡ ಇತರರು ಇದ್ದರು.

ಮಲ್ಲಿಕಾರ್ಜುನ ಖರ್ಗೆ ದೊಡ್ಡ ಪರ್ವತರೀ.. ಅದರಲ್ಲಿ ಎಷ್ಟೋ ಜೀವರಾಶಿಗಳು ನೆಲೆ ಕಂಡುಕೊಂಡಿವೆ. ಅದೊಂದು ಅಲುಗಾಡದ ದಲಿತ, ಶೋಷಿತರ ಮತ್ತು ಮೈನಾರಿಟಿಗಳ ದಿಟ್ಟ ನಿಲುವು. ಅವರು ಸಂಸತ್ತಿನಲ್ಲಿದ್ದು ಮಾತಾನಾಡುತ್ತಿದ್ದಾರೆಂದರೆ 130 ಕೋಟಿ ಭಾರತೀಯರಿಗೆ ಹೆಮ್ಮೆ. ಆದ್ದರಿಂದ ಖರ್ಗೆ ಎಂಬ ಹುಲಿ ಗೆಲ್ಲಿಸಿ ನರಿಗಳನ್ನು ಗೆಲ್ಲಿಸಬೇಡಿ.

- ಜಯಮಾಲಾ, ಸಚಿವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ