ಆ್ಯಪ್ನಗರ

ಮೊಹರಂ: ಮಾತಂ ಆಚರಿಸಿದ ಇರಾನಿ ಬಾಂಧವರು

ಮೊಹರಂ ಪ್ರಯುಕ್ತ ಇಲ್ಲಿನ ಇರಾನಿ ಬಾಂಧವರು ಶುಕ್ರವಾರ ನಗರದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ಮಾತಂ (ಅಶೂರ) ಆಚರಿಸುವ ಮೂಲಕ ಆರಾಧ್ಯ ದೈವ ಇಮಾಮ್‌ ಹುಸೈನ್‌ ಅವರನ್ನು ಭಕ್ತಿಪೂರ್ವಕವಾಗಿ ಸ್ಮರಿಸಿದರು.

Vijaya Karnataka 22 Sep 2018, 4:26 pm
ಕಲಬುರಗಿ : ಮೊಹರಂ ಪ್ರಯುಕ್ತ ಇಲ್ಲಿನ ಇರಾನಿ ಬಾಂಧವರು ಶುಕ್ರವಾರ ನಗರದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ಮಾತಂ (ಅಶೂರ) ಆಚರಿಸುವ ಮೂಲಕ ಆರಾಧ್ಯ ದೈವ ಇಮಾಮ್‌ ಹುಸೈನ್‌ ಅವರನ್ನು ಭಕ್ತಿಪೂರ್ವಕವಾಗಿ ಸ್ಮರಿಸಿದರು.
Vijaya Karnataka Web moharram irani bandha celebrated by matham
ಮೊಹರಂ: ಮಾತಂ ಆಚರಿಸಿದ ಇರಾನಿ ಬಾಂಧವರು


ನಗರದ ರೈಲ್ವೆ ನಿಲ್ದಾಣ ಹಿಂಭಾಗದ ತಾರ್‌ಫೈಲ್‌ ಪ್ರದೇಶದಲ್ಲಿ ನೆಲೆಸಿರುವ ಇರಾನಿ ಸಹೋದರರು ಮಧ್ಯಾಹ್ನ ಎಸ್‌ವಿಪಿ ವೃತ್ತದಲ್ಲಿ ಜಮಾವಣೆಗೊಂಡರು. ನಂತರ ಮುಸ್ಲಿಂ ಧರ್ಮಗುರುಗಳು ಕ್ರಿ.ಶ.680ರ ವೇಳೆ ಪ್ರಥಮ ಯಜೀದ್‌ ಉಮಾಯದ್‌ ಖಲೀಫನ ವಿರುದ್ಧ ನಡೆದ ಯುದ್ಧದಲ್ಲಿ ತಮ್ಮ 72 ಕಟ್ಟಾ ಅನುಯಾಯಿಗಳ ಜೊತೆಯಲ್ಲಿ ಹುತಾತ್ಮರಾದ ಇಮಾಮ್‌ ಹುಸೈನ್‌ ಸ್ಮರಣೆಯಲ್ಲಿ ಸಾಮೂಹಿಕ ಮಾತಂ (ಅಶೂರ) ಆಚರಿಸಿದರು.

ಇಸ್ಲಾಂ ಕ್ಯಾಲೆಂಡರ್‌ ಆರಂಭಿಕ ತಿಂಗಳಲ್ಲಿ ಬರುವ ಮೊಹರಂ ಹಬ್ಬದ ಮೊದಲ 10 ದಿನಗಳ ನಿತ್ಯ ಒಂದಲ್ಲ ಒಂದು ಧಾರ್ಮಿಕ ಆಚರಣೆ ಕೈಗೊಂಡು, 10ನೇ ದಿನದಂದು ಅಶೂರ ಆಚರಿಸುವ ಮೂಲಕ ಇರಾನಿ ಬಾಂಧವರು ತಮ್ಮ ಇಷ್ಟ ದೈವಕ್ಕೆ ಗೌರವ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ