ಆ್ಯಪ್ನಗರ

ಹಳ್ಳದಲ್ಲಿ ಕೊಚ್ಚಿಹೋದ ತಾಯಿ-ಮಗ

ಹಳ್ಳ ದಾಟುತ್ತಿದ್ದಾಗ ತಾಯಿ- ಮಗ ನೀರು ಪಾಲಾದ ಘಟನೆ ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸ್‌ ಠಾಣೆ ವ್ಯಾಪ್ತಿಯ ಯಲ್ಲದಗುಂಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತರನ್ನು ಯಲ್ಲದಗುಂಡಿ ಗ್ರಾಮದ ಗೀತಾ (37), ಭಾಗ್ಯವಂತ (14) ಎಂದು ಗುರುತಿಸಲಾಗಿದೆ. ಮೃತ ಭಾಗ್ಯವಂತನ ದೇಹ ಪತ್ತೆಯಾಗಿದ್ದು, ತಾಯಿ ಗೀತಾ ದೇಹಕ್ಕಾಗಿ ಪತ್ತೆ ಮುಂದುವರಿದೆ.

Vijaya Karnataka 24 Jun 2019, 5:00 am
ಬೀದರ್‌ :ಹಳ್ಳ ದಾಟುತ್ತಿದ್ದಾಗ ತಾಯಿ- ಮಗ ನೀರು ಪಾಲಾದ ಘಟನೆ ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸ್‌ ಠಾಣೆ ವ್ಯಾಪ್ತಿಯ ಯಲ್ಲದಗುಂಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತರನ್ನು ಯಲ್ಲದಗುಂಡಿ ಗ್ರಾಮದ ಗೀತಾ (37), ಭಾಗ್ಯವಂತ (14) ಎಂದು ಗುರುತಿಸಲಾಗಿದೆ. ಮೃತ ಭಾಗ್ಯವಂತನ ದೇಹ ಪತ್ತೆಯಾಗಿದ್ದು, ತಾಯಿ ಗೀತಾ ದೇಹಕ್ಕಾಗಿ ಪತ್ತೆ ಮುಂದುವರಿದೆ.
Vijaya Karnataka Web mother son
ಹಳ್ಳದಲ್ಲಿ ಕೊಚ್ಚಿಹೋದ ತಾಯಿ-ಮಗ


ಮಹಾರಾಷ್ಟ್ರದ ಭಾಗದಲ್ಲಿ ಮಳೆಯಾಗಿದ್ದರಿಂದ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಇದೇ ವೇಳೆ ಹೊಲದಿಂದ ಮನೆಗೆ ಹಿಂತಿರುಗುತ್ತಿದ್ದ ತಾಯಿ- ಮಗ ಹಳ್ಳ ದಾಟಿಕೊಂಡು ಬರುತ್ತಿದ್ದ ವೇಳೆ ಏಕಾಏಕೀ ಹರಿದು ಬಂದ ನೀರಿನಲ್ಲಿ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ.

ಘಟನೆಯಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಮಗನ ದೇಹ ಪತ್ತೆಯಾಗಿದ್ದು, ತಾಯಿಯ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ ಎಂದು ವಿಕಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ತಿಳಿಸಿದ್ದಾರೆ. ಈ ಕುರಿತು ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ