ಆ್ಯಪ್ನಗರ

ಸಿಸಿಐ ಪುನಾರಂಭಕ್ಕೆ ಸಂಸದ ಜಾಧವ್‌ ಒತ್ತಾಯ

ಸೇಡಂ ತಾಲೂಕಿನ ಸಿಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಸಿಸಿಐಎಲ್‌) ಕಾರ್ಖಾನೆಯ ಪುನಾರಂಭಕ್ಕೆ ಒತ್ತು ನೀಡಬೇಕೆಂದು ಕಲಬುರಗಿ ಸಂಸದ ಡಾ.ಉಮೇಶ್‌ ಜಾಧವ್‌ ಒತ್ತಾಯಿಸಿದ್ದಾರೆ.

Vijaya Karnataka 30 Nov 2019, 9:59 pm
ಕಲಬುರಗಿ :ಸೇಡಂ ತಾಲೂಕಿನ ಸಿಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಸಿಸಿಐಎಲ್‌) ಕಾರ್ಖಾನೆಯ ಪುನಾರಂಭಕ್ಕೆ ಒತ್ತು ನೀಡಬೇಕೆಂದು ಕಲಬುರಗಿ ಸಂಸದ ಡಾ.ಉಮೇಶ್‌ ಜಾಧವ್‌ ಒತ್ತಾಯಿಸಿದ್ದಾರೆ.
Vijaya Karnataka Web mp jadhav demands cci restart
ಸಿಸಿಐ ಪುನಾರಂಭಕ್ಕೆ ಸಂಸದ ಜಾಧವ್‌ ಒತ್ತಾಯ


ಈ ಕುರಿತು ಕೇಂದ್ರ ಭಾರಿ ಉದ್ಯಮ ಖಾತೆಯ ರಾಜ್ಯ ಸಚಿವ ಅರ್ಜುನ್‌ರಾಂ ಮೇಘವಾಲ್‌ ಅವರನ್ನು ನವದೆಹಲಿಯಲ್ಲಿಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಸಂಸದ ಜಾಧವ್‌, ಕಾರ್ಖಾನೆಯ ಪುನಾರಂಭದಿಂದ ಉದ್ಯೋಗ ವಂಚಿತ ಸಾವಿರಾರು ಕುಟುಂಬಗಳಿಗೆ ಆರ್ಥಿಕ ಭದ್ರತೆ ಕಲ್ಪಿಸಬಹುದಾಗಿದೆ ಎಂದು ಮನದಟ್ಟು ಮಾಡಿಕೊಡುವ ಯತ್ನ ಮಾಡಿದ್ದಾರೆ.

1972ರಲ್ಲಿಆರಂಭಗೊಂಡ ಸಿಸಿಐಎಲ್‌ ವಾರ್ಷಿಕ ಸುಮಾರು 1,98,000 ಮೆಟ್ರಿಕ್‌ ಟನ್‌ ಸಿಮೆಂಟ್‌ ಉತ್ಪಾದನೆ ಮಾಡುತ್ತಿತ್ತು. ಇಂತಹ ಅತ್ಯುತ್ತಮ ಉತ್ಪಾದನಾ ಸಾಮರ್ಥ್ಯ ಹೊಂದಿದ್ದ ಕಾರ್ಖಾನೆಗೆ 2008ರಲ್ಲಿಅಂದಿನ ಕೇಂದ್ರ ಸರಕಾರ ಬಂಡವಾಳ ಹಿಂಪಡೆದಿದೆ. ಹೀಗಾಗಿ, ಸರಕಾರಿ ಸ್ವಾಮ್ಯದ ಕಾರ್ಖಾನೆಯೊಂದು ಉತ್ತಮ ಉತ್ಪಾದನಾ ಸಾಮರ್ಥ್ಯದ ಮಧ್ಯೆಯೂ ಬಂದ್‌ ಆಗಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ ಎಂದು ಸಂಸದ ಡಾ.ಜಾಧವ್‌ ವಿವರಿಸಿದ್ದಾರೆ.

ತನ್ನ ಇಂಧನ ಸ್ವಾವಲಂಬನೆಯ ಕಾರಣಕ್ಕಾಗಿ 1989-90ರಲ್ಲಿಸಿಸಿಐಎಲ್‌ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿತ್ತು. ಇಂತಹ ಕಾರ್ಖಾನೆಯ ಸುವರ್ಣ ಸ್ಥಿತಿಯಲ್ಲಿಅಭಿವೃದ್ಧಿಪಡಿಸಲಾಗಿದ್ದ ಬಡಾವಣೆ, ಶಾಲೆ, ವಸತಿ ಸಮುಚ್ಛಯ, ಆಸ್ಪತ್ರೆ ಕಟ್ಟಡ ಇಂದು ಅವನತಿ ಹಂತಕ್ಕೆ ಬಂದು ನಿಂತಿವೆ. ಇನ್ನಾದರೂ ಈ ನಿಟ್ಟಿನಲ್ಲಿಅಗತ್ಯ ಕಾಳಜಿ ತೋರಬೇಕೆಂದು ಅವರು ಸಚಿವರಿಗೆ ಮನವಿ ಮಾಡಿದ್ದಾರೆ.

ಶೂನ್ಯ ಅವಧಿಯಲ್ಲಿಪ್ರಸ್ತಾಪ

ಉತ್ಪಾದನೆಯ ದೃಷ್ಟಿಯಿಂದ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕುರಕುಂಟಾ ಸಮೀಪದ ಸಿಸಿಐಎಲ್‌ ಕಾರ್ಖಾನೆಗೆ ಪುನಃ ಬಂಡವಾಳ ಹೂಡಿಕೆ ಮೂಲಕ ಮರು ಜೀವ ನೀಡಬೇಕೆಂದು ತಾವು 2019ರ ಜೂನ್‌ 26ರಂದು ಲೋಕಸಭೆಯ ಕಲಾಪದ ಶೂನ್ಯ ಅವಧಿಯಲ್ಲಿಪ್ರಸ್ತಾಪಿಸಿದ್ದಾಗಿಯೂ ಸಂಸದ ಜಾಧವ್‌ ಅವರು ಸಚಿವ ಮೇಘವಾಲ್‌ ಗಮನಕ್ಕೆ ತಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ