ಆ್ಯಪ್ನಗರ

ಕಲಬುರಗಿ ವಿವಿ ಕ್ಯಾಂಪಸ್‌ನಲ್ಲಿ ಮರ್ಡರ್

ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಗೆಳೆಯನೊಬ್ಬನಿಗೆ ದುಷ್ಕರ್ಮಿಗಳು ಕ್ಯಾಂಪಸ್‌ನಲ್ಲಿಯೇ ಹಾಡ ಹಗಲೇ ಹತ್ಯೆ ಮಾಡಿರುವ ಘಟನೆ ಶನಿವಾರ ನಡೆದಿದೆ.

Vijaya Karnataka 23 Sep 2018, 7:32 am
ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಗೆಳೆಯನೊಬ್ಬನಿಗೆ ದುಷ್ಕರ್ಮಿಗಳು ಕ್ಯಾಂಪಸ್‌ನಲ್ಲಿಯೇ ಹಾಡ ಹಗಲೇ ಹತ್ಯೆ ಮಾಡಿರುವ ಘಟನೆ ಶನಿವಾರ ನಡೆದಿದೆ.
Vijaya Karnataka Web gulbarga university


ಹೈದರಾಬಾದ್‌ನಲ್ಲಿರುವ ಮತ್ತು ಮೂಲತಃ ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ಮನೋಜ್‌ ಪ್ರಸಾದ(23) ಹತ್ಯೆಗೀಡಾದ ಯುವಕ. ಆತ ತನ್ನ ಗೆಳತಿಯೊಂದಿಗೆ ಜನ್ಮ ದಿನ ಆಚರಣೆಗೆ ವಿವಿ ಕ್ಯಾಂಪಸ್‌ಗೆ ಆಗಮಿಸಿದ್ದ ಎಂದು ಗೊತ್ತಾಗಿದೆ.

ಈತ ಸಂಜೆ 5 ಗಂಟೆಯ ಹೊತ್ತಿನಲ್ಲಿ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿ ನಿಲಯದ ಕೋಣೆಯೊಂದರಲ್ಲಿ ಗೆಳತಿಯ ಸ್ನೇಹಿತೆಯರು ಹಾಗೂ ಸ್ನೇಹಿತರೊಂದಿಗೆ ಸೇರಿ ಜನ್ಮ ದಿನ ಆಚರಣೆ ವೇಳೆ ಭರ್ಜರಿ ಪಾರ್ಟಿ ಮಾಡಿದ್ದಾಗಿ ಮತ್ತು ಬಳಿಕ ಈ ಹತ್ಯೆ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹತ್ಯೆಯಾದ ಮನೋಜ್‌ ಪ್ರಸಾದ್‌ ಹೈದ್ರಾಬಾದಿನಲ್ಲಿ ಕೆಲಸ ಮಾಡುತ್ತಿದ್ದ. ಭಾಲ್ಕಿ ಮೂಲದವಳೇ ಆಗಿರುವ ವಿವಿಯಲ್ಲಿ ಎಂ.ಎ ಎಕನಾಮಿಕ್ಸ್‌ನಲ್ಲಿ ಓದುತ್ತಿದ್ದ ಗೆಳತಿಯನ್ನು ಪ್ರೀತಿಸುತ್ತಿದ್ದ. ಅದಕ್ಕಾಗಿಯೇ ಆತ ಕ್ಯಾಂಪಸ್‌ಗೆ ಬಂದಿದ್ದ. ಜನ್ಮ ದಿನ ಆಚರಣೆ ಬಳಿಕ ರೂಂನಲ್ಲಿ ಗೆಳತಿ ಮತ್ತು ಆತ ಇದ್ದರು. ಈ ವೇಳೆ ಅಲ್ಲಿಗೆ ಬಂದು ಕೆಲವು ಯುವಕರ ಮಧ್ಯೆ ನಡೆದ ಜಗಳದಲ್ಲಿ ಹತ್ಯೆ ನಡೆದಿದೆ. ಈ ಗಲಾಟೆಯಲ್ಲಿ ಗೆಳತಿಯ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಅವಳಿಗೂ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಕ್ಯಾಂಪಸ್‌ನಲ್ಲಿ ಈಗ ಭಯದ ವಾತಾವರಣ ಉಂಟಾಗಿದ್ದು, ವಿದ್ಯಾರ್ಥಿಗಳು ತೀವ್ರ ಆತಂಕದಲ್ಲಿದ್ದಾರೆ.

ಹತ್ಯೆಯಾಗಿರುವ ಯುವಕನಿಗೆ ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಚಾಕುವಿನಿಂದ ಇರಿದಿರುವುದು ದೇಹದಲ್ಲಿನ ಗಾಯಗಳಾಗಿರುವುದು ಗೊತ್ತಾಗಿದೆ. ಹತ್ಯೆಯಾಗಿರುವ ಯುವಕ ಹೈದ್ರಾಬಾದಿನಲ್ಲಿ ಕೆಲಸ ಮಾಡುತ್ತಿದ್ದ, ಶನಿವಾರ ವಿವಿ ಕ್ಯಾಂಪಸ್‌ಗೆ ಗೆಳತಿಯೊಂದಿಗೆ ತನ್ನ ಬರ್ತ್‌ಡೇ ಆಚರಿಸಿಕೊಳ್ಳಲು ಬಂದಿದ್ದ. ಈ ವೇಳೆ ಆತನ ಹತ್ಯೆಯಾಗಿದೆ ಎಂದು ಎಸ್ಪಿ ಎನ್‌.ಶಶಿಕುಮಾರ ತಿಳಿಸಿದ್ದಾರೆ.

ಹತ್ಯೆಯ ಸುದ್ದಿ ತಿಳಿದ ಎಸ್ಪಿ ಅವರು ಕ್ಯಾಂಪಸ್‌ಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ, ಇದೊಂದು ಪ್ರೇಮ ಕಲಹ, ಪ್ರೇಮಕ್ಕೆ ಸಂಬಂಧಿಸಿದ ವಿಚಾರದಲ್ಲಿ ಹತ್ಯೆಯಾಗಿದೆ ಎಂದು ತಿಳಿದಿದೆ. ಈ ಕುರಿತು ನರೋಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2017ರಲ್ಲಿ ನಡೆದಿತ್ತು ವಿದ್ಯಾರ್ಥಿ ಸಾವು

ಕೇಂದ್ರೀಯ ವಿವಿ ಕ್ಯಾಂಪಸ್‌ ಆರಂಭಿಕವಾಗಿ ಭಾರಿ ಸದ್ದು ಮಾಡಿತ್ತು. ಉತ್ತರ ಭಾರತದ ಮತ್ತು ಸ್ಥಳೀಯ ವಿದ್ಯಾರ್ಥಿಗಳು ಹಾಗೂ ನೌಕರರ ಮಧ್ಯೆ ಒಂದಿಲ್ಲೊಂದು ಕಾರಣಕ್ಕೆ ವಿವಾದಗಳು, ಜಗಳಗಳು ನಡೆಯುತ್ತಲೇ ಇದ್ದವು. 2017 ಏಪ್ರಿಲ್‌ನಲ್ಲಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದ. ಅದನ್ನು ಆತ್ಮಹತ್ಯೆ ಎಂದು ದಾಖಲಿಸಲಾಯಿತು. ಅದಾದ ಬಳಿಕವೂ ಒಂದಷ್ಟು ಗಲಾಟೆ ನಡೆದವು.

ಈ ಘಟನೆಯ ಹಿಂದೆ ಪ್ರೇಮ ಕಲಹವಿರುವುದು ಬಹುತೇಕ ಪಕ್ಕಾ ಆಗುತ್ತದೆ. ಕುಲಪತಿಗಳು ರಜೆ ಮೇಲೆ ತೆರಳಿದ್ದಾರೆ.
ನಾನು ರಜೆ ಮೇಲೆ ಬೇರೆ ಊರಿಗೆ ಬಂದಿರುವೆ. ಹತ್ಯೆಯಾಗಿರುವ ಘಟನೆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಕುಲಸಚಿವರು ಘಟನೆಯ ಬಗ್ಗೆ ನಿಗಾ ಇರಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಳಿಕವೇ ಹೆಚ್ಚಿನ ಮಾಹಿತಿ ಸಿಗಲಿದೆ.
-ಎಚ್‌.ಎಂ. ಮಹೇಶ್ವರಯ್ಯ, ಕುಲಪತಿ, ಸಿಯುಕೆ, ಕಲಬುರಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ