ಆ್ಯಪ್ನಗರ

ಕೊಟ್ಟ ರೊಕ್ಕೆ ಕೇಳಿದ್ದಕ್ಕೆ ಕೊಲೆ

ಕೊಟ್ಟ ಹಣ ವಾಪಸ್ಸು ಕೇಳಿದ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದ ಯುವಕನೋರ್ವ, ಹಣ ಕೇಳಿದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಶಹಾಬಾದ ರಸ್ತೆಯಲ್ಲಿರುವ ಶಕ್ತಿ ನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

Vijaya Karnataka 10 Jul 2019, 10:06 pm
ಕಲಬುರಗಿ: ಕೊಟ್ಟ ಹಣ ವಾಪಸ್ಸು ಕೇಳಿದ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದ ಯುವಕನೋರ್ವ, ಹಣ ಕೇಳಿದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಶಹಾಬಾದ ರಸ್ತೆಯಲ್ಲಿರುವ ಶಕ್ತಿ ನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
Vijaya Karnataka Web murderasking for money
ಕೊಟ್ಟ ರೊಕ್ಕೆ ಕೇಳಿದ್ದಕ್ಕೆ ಕೊಲೆ


ವಿಜಯಕುಮಾರ ಗೋರಖನಾಥ(23) ಕೊಲೆಯಾದವ. ಈತ ನಗರದ ನಿಲೇಶ್‌ ಎನ್ನುವ ಯುವಕನಿಗೆ 5ಸಾವಿರ ರೂ.ಗಳನ್ನು ಕೊಟ್ಟಿದ್ದ. ಅದನ್ನು ವಾಪಸ್ಸು ಕೇಳಿದ್ದಕ್ಕೆ ಉಭಯರ ಮಧ್ಯೆ ಜಗಳವಾಗಿ ನಿಲೇಶ್‌ ಚಾಕುವಿನಿಂದ ಇರಿದ ಪರಿಣಾಮ ಭಾರಿ ರಕ್ತಸ್ರಾವವಾಗಿ ವಿಜಯಕುಮಾರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಗುವಿವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಾರರನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ