ಆ್ಯಪ್ನಗರ

ಸಾರಿಗೆ ಕಚೇರಿಯಲ್ಲಿ ಹೊಸ ಸಾಫ್ಟ್‌ವೇರ್‌

ಸಾರಿಗೆ ಇಲಾಖೆಯು ಹಂತ ಹಂತವಾಗಿ ಗಣಕೀಕರಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕೇಂದ್ರೀಕೃತ ಹಾಗೂ ವೆಬ್‌ಆಧಾರಿತ ವಾಹನ-4 ಸಾಫ್ಟವೇರ್‌ನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಲಬುರಗಿ ಸಾರಿಗೆ ಉಪ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್‌.ಬಿ. ಸುರೇಂದ್ರಪ್ಪ ತಿಳಿಸಿದ್ದಾರೆ.

Vijaya Karnataka 12 Jul 2018, 4:20 pm
ಕಲಬುರಗಿ: ಸಾರಿಗೆ ಇಲಾಖೆಯು ಹಂತ ಹಂತವಾಗಿ ಗಣಕೀಕರಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕೇಂದ್ರೀಕೃತ ಹಾಗೂ ವೆಬ್‌ಆಧಾರಿತ ವಾಹನ-4 ಸಾಫ್ಟವೇರ್‌ನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಲಬುರಗಿ ಸಾರಿಗೆ ಉಪ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್‌.ಬಿ. ಸುರೇಂದ್ರಪ್ಪ ತಿಳಿಸಿದ್ದಾರೆ.
Vijaya Karnataka Web new software in the transport office
ಸಾರಿಗೆ ಕಚೇರಿಯಲ್ಲಿ ಹೊಸ ಸಾಫ್ಟ್‌ವೇರ್‌


2018ರ ಜುಲೈ 24ರಿಂದ ಸಂಪೂರ್ಣವಾಗಿ ವಾಹನ-1ರ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡು ಜುಲೈ 25ರಂದು ವಾಹನ-4ರ ಸಾಫ್ಟವೇರಲ್ಲಿಯೇ ಎಲ್ಲಾ ಸೇವೆಗಳು ಆರಂಭಗೊಳ್ಳಲಿದೆ. ಈ ಸಾಫ್ಟ್‌ವೇರ್‌ ಅನುಷ್ಠಾನದಿಂದ ಕೆಲವು ತಾಂತ್ರಿಕ ದೋಷಗಳು ಮತ್ತು ನ್ಯೂನ್ಯತೆಗಳು ಉಂಟಾಗುವ ಸಂಭವವಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದಿದ್ದಾರೆ.

ಜುಲೈ 25 ರಿಂದ ವಾಹನ-4ರಲ್ಲಿ ವಾಹನಕ್ಕೆ ಸಂಬಂಧಪಟ್ಟ ಎಲ್ಲ ಕೆಲಸಗಳು ಹಂತ ಹಂತವಾಗಿ ಚಾಲನೆಗೊಳ್ಳಲಿದೆ. ವಾಹನ-1 ಸಾಫ್ಟವೇರ್‌ನಿಂದ ವಾಹನ-4 ಸಾಫ್ಟವೇರ್‌ಗೆ ಉನ್ನತೀಕರಣಗೊಳ್ಳುತ್ತಿದೆ. ಈ ಸಂಬಂಧವಾಗಿ ಈ ಹಿಂದೆ ಸಾರ್ವಜನಿಕರು ಏನಾದರೂ ಶುಲ್ಕ ಮತ್ತು ತೆರಿಗೆ ಭರಿಸಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಜುಲೈ 20 ರ ನಂತರ ಈ ರಸೀದಿಗಳು ತಂತಾನೆ ನಿಷ್ಕ್ರಿಯಗೊಳ್ಳಲಿವೆ. ಹೀಗಾಗಿ ಜುಲೈ 20ರೊಳಗಾಗಿ ಕೆಲಸ ಮಾಡಿಸಿಕೊಳ್ಳಬೇಕು. ಜುಲೈ 20ರಿಂದ ಈಗ ಆಸ್ತಿತ್ವದಲ್ಲಿರುವ ವಾಹನ-1ರ ಆನ್‌ಲೈನ್‌ ಮೂಲಕ ವಾಹನ ನೋಂದಣಿಗೆ ಅರ್ಜಿ ಸಲ್ಲಿಸುವ ಪಾವತಿಯನ್ನು ಸ್ಥಗಿತಗೊಳಿಸಲಾಗುತ್ತದೆ. ಈಗಾಗಲೇ ಫ್ಯಾನ್ಸಿ ನಂಬರಿಗೆ ಶುಲ್ಕ ಭರಿಸಿಕೊಂಡಿದ್ದಲ್ಲಿ ತಕ್ಷ ಣವೇ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಂಡು ಫ್ಯಾನ್ಸಿ ನಂಬರ ಪಡೆಯಬೇಕು ಎಂದಿದ್ದಾರೆ.

ಈಗಾಗಲೆ ವಾಹನದ ಯಾವುದೇ ಕಾರ್ಯಕ್ಕೆ ಅರ್ಜಿ ಸಲ್ಲಿಸಿದ್ದು, ಯಾವುದಾದರೂ ನ್ಯೂನ್ಯತೆಗಳಿಗೆ ಕಡತ ಬಾಕಿ ಇದ್ದಲ್ಲಿ ಜುಲೈ 20 ರವರೆಗೆ ಮಾತ್ರ ಸಂಬಂಧಪಟ್ಟ ಸಾರ್ವಜನಿಕರು ಗಮನಿಸಿ ತಮ್ಮ ಅರ್ಜಿಗಳು ಬಾಕಿ ಇದ್ದರೆ ಕೂಡಲೇ ಆರ್‌ಟಿಓ ಕಚೇರಿಯ ಸಂಬಂಧಪಟ್ಟ ವಿಷಯ ನಿರ್ವಾಹಕರು ಮತ್ತು ಅಧೀಕ್ಷ ಕರನ್ನು ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳಬೇಕು. ಈ ಸಂಬಂಧ ಈ ಮೊದಲು ಭರಿಸಿದ ಶುಲ್ಕ ಮತ್ತು ತೆರಿಗೆ ಈಗ ಅನುಷ್ಠಾನಗೊಳ್ಳುತ್ತಿರುವ ವಾಹನ-4ರಲ್ಲಿ ನಿಷ್ಕ್ರೀಯಗೊಂಡು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಆರ್‌ಟಿಓ ಕಚೇರಿಯಲ್ಲಿ ತಮ್ಮ ವಾಹನಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳಿಗೆ ಯಾವುದೇ ಪ್ರಕರಣಗಳು ಬಾಕಿ ಇದ್ದಲ್ಲಿ ಜುಲೈ 20ರೊಳಗಾಗಿ (ಹೊಸದಾಗಿ ಯಾವುದೇ ಅರ್ಜಿ ಸ್ವೀಕರಿಸುವುದಾಗಲಿ, ಶುಲ್ಕ ಭರಿಸಿಕೊಳ್ಳುವುದಾಗಲಿ ಅವಕಾಶವಿರುವುದಿಲ್ಲ) ಕಚೇರಿಯ ಸಮಯದಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಿ ಕೆಲಸವನ್ನು ಮಾಡಿಸಿಕೊಳ್ಳಬೇಕು. ಒಂದು ವೇಳೆ ವಿಳಂಬವಾಗಿ ಕಚೇರಿಗೆ ಸಂಪರ್ಕಿಸಿದ್ದಲ್ಲಿ ವಾಹನ-1ರ ಯಾವುದೇ ಕಾರ್ಯ ಆಗದಿರುವುದಕ್ಕೆ ಸಹಕಾರ ನೀಡಬೇಕು. ಹೊಸದಾಗಿ ವಾಹನ-4ರಲ್ಲಿ ತೆರಿಗೆ ಮತ್ತು ಶುಲ್ಕ ಭರಿಸಬೇಕಾಗುತ್ತದೆ. ವಾಹನ-4ರ ಸಾಫ್ಟ್‌ವೇರ್‌ನಲ್ಲಿ ಕೆಲ ತಿದ್ದುಪಡಿಗೆ ಯಾವುದೇ ಅವಕಾಶಗಳಿರುವುದಿಲ್ಲವಾದ್ದರಿಂದ ಡೇಟಾ ಅಪ್‌ಲೋಡ ಮಾಡುವಾಗ ಜಾಗರೂಕತೆಯಿಂದ ಗಮನಿಸಿ ಅಪ್‌ಲೋಡ ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದತ್ತಾಂಶ ಪೋರ್ಟಿಂಗ್‌

ಜುಲೈ 23 ರಂದು ಸಾರಿಗೆ ಇಲಾಖೆಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಡಾಟಾಬೇಸ್‌ನ ಪೋರ್ಟಿಂಗ್‌ಗೆ ಈಗಿರುವ ಎಲ್ಲಾ ಡೇಟಾಗಳನ್ನು ಪೋರ್ಟಿಂಗ ಕಾರ್ಯ ಹಾಗೂ ಜುಲೈ 24 ರಂದು ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯಿಂದ ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ನವದೆಹಲಿಯಲ್ಲಿ ವಾಹನ-1ರ ಡಾಟಾವನ್ನು ವಾಹನ-4ಕ್ಕೆ ಡಾಟಾ ಪೕರ್ಟಿಂಗ್‌ ಕಾರ್ಯ ನಡೆಯಲಿದೆ ಆರ್‌ಟಿಒ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ