ಆ್ಯಪ್ನಗರ

ಎನ್‌ವಿ ಸಂಸ್ಥೆಯಲ್ಲಿ 'ನೂತನ ಫೆಸ್ಟ್‌-2019' ಸ್ಪರ್ಧಾತ್ಮಕ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನವರಿ 2 ಮತ್ತು 3ರಂದು ನಗರದ ನೂತನ ವಿದ್ಯಾಲಯ ಸಂಸ್ಥೆಯಲ್ಲಿ ಬೆಳಗ್ಗೆ 10ಕ್ಕೆ 'ನೂತನ ಫೆಸ್ಟ್‌-2019' ಸ್ಪರ್ಧಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನೂತನ ವಿದ್ಯಾಲಯ ಸಂಸ್ಥೆಯ ಪ್ರಾಚಾರ್ಯ ಹೇಮಂತ ಕೊಲ್ಹಾಪುರ ಹಾಗೂ ಮುಕ್ತಾ ಕೋಲ್ಹಾಪುರ ತಿಳಿಸಿದರು.

Vijaya Karnataka 30 Dec 2018, 4:54 pm
ಕಲಬುರಗಿ:ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನವರಿ 2 ಮತ್ತು 3ರಂದು ನಗರದ ನೂತನ ವಿದ್ಯಾಲಯ ಸಂಸ್ಥೆಯಲ್ಲಿ ಬೆಳಗ್ಗೆ 10ಕ್ಕೆ 'ನೂತನ ಫೆಸ್ಟ್‌-2019' ಸ್ಪರ್ಧಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನೂತನ ವಿದ್ಯಾಲಯ ಸಂಸ್ಥೆಯ ಪ್ರಾಚಾರ್ಯ ಹೇಮಂತ ಕೊಲ್ಹಾಪುರ ಹಾಗೂ ಮುಕ್ತಾ ಕೋಲ್ಹಾಪುರ ತಿಳಿಸಿದರು.
Vijaya Karnataka Web newest fest 2019 competitive program at nv
ಎನ್‌ವಿ ಸಂಸ್ಥೆಯಲ್ಲಿ 'ನೂತನ ಫೆಸ್ಟ್‌-2019' ಸ್ಪರ್ಧಾತ್ಮಕ ಕಾರ್ಯಕ್ರಮ


ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಾಧೀಶ ಸಂತೋಷ ಹೆಗ್ಡೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಜ.2ರಂದು ಬೆಳಗ್ಗೆ 10ಕ್ಕೆ ಮೆಹಂದಿ, ಕಿರುನಾಟಕ, ಚಿತ್ರಕಲೆ, ಕೇಶವಿನ್ಯಾಸ, ಹಾಡುಗಾರಿಕೆ ಹಾಗೂ ಜ.3ರಂದು ಚರ್ಚಾಸ್ಪರ್ಧೆ, ಜಾಮ್‌, ಇಕೆಬಾನ್‌, ಫೋಟೊಗ್ರಾಫಿ ಸ್ಪರ್ಧೆಗಳು ಜರುಲಿವೆ ಎಂದರು.

ನಗರದ ಎಲ್ಲ ಪದವಿ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೂ ಆಹ್ವಾನ ನೀಡಲಾಗಿದ್ದು, 2000 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳಿಗೆ ವಿವಿಧ ಕೌಶಲ ತರಬೇತಿಗಳನ್ನು ನೀಡಲಾಗುವುದು.ಇಲ್ಲಿ 15 ಮಳಿಗೆಗಳು ಸೇರಲಿವೆ. ರಾಬ್ಸನ್ಸ್‌ ಇಂಪೋ ವರ್ಲ್ಡ್‌ ಸಂಸ್ಥೆ ವತಿಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಜ.2ರಂದು ನಿರ್ದೇಶಕ ಯಶವಂತ ಸರದೇಶಪಾಂಡೆ ಅವರಿಂದ ಸಂಜೆ 6ಕ್ಕೆ ಹಾಸ್ಯಭರಿತ'ರಾಶಿ ಚಕ್ರ' ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಸಂಸ್ಥೆಯ ಸಿಬ್ಬಂದಿಗಳಾದ ಶ್ರೀಕಾಂತ ಕುಲಕರ್ಣಿ,ರಾಧಾ ಜೋಶಿ, ಜ್ಯೋತಿ ದೇಶಮುಖ, ಭಾರತಿ ಎಸ್‌.ಆರ್‌. ಹಾಗೂ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ