ಆ್ಯಪ್ನಗರ

ಏರ್‌ಪೋರ್ಟ್‌ಗೆ ನೃಪತುಂಗ ಹೆಸರಿಡಲು ಒತ್ತಾಯ

ಕಲಬುರಗಿಯ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗರ ಹೆಸರಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಘಟಕದ ಕಾರ್ಯಕರ್ತರು ನಗರದಲ್ಲಿಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 19 Nov 2019, 5:00 am
ಕಲಬುರಗಿ:ಕಲಬುರಗಿಯ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗರ ಹೆಸರಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಘಟಕದ ಕಾರ್ಯಕರ್ತರು ನಗರದಲ್ಲಿಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web nirupatunga insists on naming the airport
ಏರ್‌ಪೋರ್ಟ್‌ಗೆ ನೃಪತುಂಗ ಹೆಸರಿಡಲು ಒತ್ತಾಯ


ಸರ್ವ ಧರ್ಮದ ಸಮಾನತೆಯ ಹರಿಕಾರನಾಗಿ ಕನ್ನಡದ ಬೆಳವಣಿಗೆಗೆ ನೀರೆರೆದು ಪ್ರೋತ್ಸಾಹಿಸಿದ ಅರಸ ಅಮೋಘವರ್ಷ ನೃಪತುಂಗರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಸರಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕಲೆ, ಸಾಹಿತ್ಯ, ವಾಸ್ತು ಶಿಲ್ಪಗಳನ್ನು ಎತ್ತರಕ್ಕೆ ಬೆಳೆಸಿ ಪೋಷಿಸಿದ ಕೀರ್ತಿ ರಾಷ್ಟ್ರಕೂಟ ರಾಜ ಮನೆತನಕ್ಕೆ ಸಲ್ಲುತ್ತದೆ. ನಂದ ಅರಸರ ನಂತರ ಭಾಷೆಯ ಆಧಾರದಲ್ಲಿಸಾಮ್ರಾಜ್ಯ ಕಟ್ಟಿ, ಆಳಿದ ರಾಷ್ಟ್ರಕೂಟರು ಒಕ್ಕೂಟದ ಕಲ್ಪನೆ ಮೊದಲಿಗೆ ಪರಿಚಯಿಸಿದ್ದಾರೆ. ಮಳಖೇಡ ರಾಜಧಾನಿಯಾಗಿಸಿಕೊಂಡು ನೇಪಾಳದವರೆಗೂ ಆಳ್ವಿಕೆ ಮಾಡಿರುವ ಅಮೋಘವರ್ಷ ಸರ್ವ ಧರ್ಮಗಳಿಗೆ ರಾಜಾಶ್ರಯ ನೀಡಿ, ಕವಿಗೆ ಪ್ರೋತ್ಸಾಹಿಸಿ ಕನ್ನಡ ಮೊದಲ ಉಪಲಬ್ದ ಗದ್ಯ ಕೃತಿಯಾದ ಕವಿರಾಜಮಾರ್ಗ ರಚನೆಗೆ ಕಾರಣೀಕರ್ತರಾಗಿದ್ದಾರೆ. ಆದ್ದರಿಂದ ಕನ್ನಡ ಸಾಹಿತ್ಯ ಚರಿತ್ರೆಗೆ ಅಮೋಘ ಕೊಡುಗೆ ನೀಡಿರುವ ಅವರ ಹೆಸರನ್ನು ಲೋಕಾರ್ಪಣೆಗೊಳ್ಳಲಿರುವ ಕಲಬುರಗಿ ವಿಮಾನ ನಿಲ್ದಾಣಕ್ಕಿಟ್ಟು ಕನ್ನಡಿಗರ ವೀರತ್ವ ನೆನೆಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಘಟಕದ ಅಧ್ಯಕ್ಷ ರವಿ ಎನ್‌.ದೇಗಾಂವ, ಉಪಾಧ್ಯಕ್ಷ ಪ್ರಶಾಂತ ಮಠಪತಿ, ಕಾರ್ಯಾಧ್ಯಕ್ಷ ಸಂತೋಷ ಪಾಟೀಲ, ಪ್ರಧಾನ ಕಾರ್ಯದರ್ಶಿ ಆನಂದ ಫಾಲ್ಕೆ, ಹಣಮಂತ ಹಿರಾಪುರ, ಮಲ್ಲಿಕಾರ್ಜುನ ಬುಳ್ಳಾ, ಸತೀಶ ಪಾಟೀಲ, ನವೀನ ಬಿರಾದಾರ, ಶಿವುಪಾಟೀಲ, ಅಶೋಕಪಾಟೀಲ, ಬಸವರಾಜ ಮೇತ್ರೆ, ಧರ್ಮಾ, ವಿಲಾಸರಾವ ಬಿರಾದಾರ, ಜಗದೀಶ ಅಂಬಲಗಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ