ಆ್ಯಪ್ನಗರ

ಕಾಗದದಲ್ಲಿಟಾಯ್ಲೆಟ್‌, ಬಯಲು ಶೌಚವೇ ಫೇವರಿಟ್‌!

2012ನೇ ಸಾಲಿನಲ್ಲಿನಡೆದ ಬೇಸ್‌ಲೈನ್‌ ಸರ್ವೆಯಂತೆ ಕೇವಲ ಕಾಗದದಲ್ಲಿಸೃಷ್ಟಿಯಾದ ಕಥೆ. ವಾಸ್ತವದಲ್ಲಿಈಗಲೂ ಶೇ.40 ರಷ್ಟು ಗ್ರಾಮಗಳ ಸ್ತ್ರೀ-ಪುರುಷರು ಸಂಜೆ ಮತ್ತು ಬೆಳಗ್ಗೆ ಖಾಲಿ ನಿವೇಶನ ಮತ್ತು ರಸ್ತೆಯ ಇಕ್ಕೆಲಗಳಲ್ಲಿಶೌಚಕ್ಕೆ ಹೋಗುತ್ತಾರೆ. ಆದರೂ ಜಿಲ್ಲೆಯನ್ನು ಇಡಿಯಾಗಿ ಶೌಚಮುಕ್ತ ಗ್ರಾಮ ಎಂದು ಘೋಷಿಸಿ ಕೈ ತೊಳೆದುಕೊಂಡಿರುವ ಜಿಪಂ. ವರ್ತನೆ ಸಾರ್ವಜನಿಕರ ಅಸಮಾಧಾನಕ್ಕೆ ಹಾದಿ ಮಾಡಿಕೊಟ್ಟಿದೆ.

Vijaya Karnataka 15 Oct 2019, 5:00 am
ಸೂರ್ಯಕಾಂತ್‌ ಎಂ ಜಮಾದಾರ್‌ ಕಲಬುರಗಿ :2012ನೇ ಸಾಲಿನಲ್ಲಿನಡೆದ ಬೇಸ್‌ಲೈನ್‌ ಸರ್ವೆಯಂತೆ ಕೇವಲ ಕಾಗದದಲ್ಲಿಸೃಷ್ಟಿಯಾದ ಕಥೆ. ವಾಸ್ತವದಲ್ಲಿಈಗಲೂ ಶೇ.40 ರಷ್ಟು ಗ್ರಾಮಗಳ ಸ್ತ್ರೀ-ಪುರುಷರು ಸಂಜೆ ಮತ್ತು ಬೆಳಗ್ಗೆ ಖಾಲಿ ನಿವೇಶನ ಮತ್ತು ರಸ್ತೆಯ ಇಕ್ಕೆಲಗಳಲ್ಲಿಶೌಚಕ್ಕೆ ಹೋಗುತ್ತಾರೆ. ಆದರೂ ಜಿಲ್ಲೆಯನ್ನು ಇಡಿಯಾಗಿ ಶೌಚಮುಕ್ತ ಗ್ರಾಮ ಎಂದು ಘೋಷಿಸಿ ಕೈ ತೊಳೆದುಕೊಂಡಿರುವ ಜಿಪಂ. ವರ್ತನೆ ಸಾರ್ವಜನಿಕರ ಅಸಮಾಧಾನಕ್ಕೆ ಹಾದಿ ಮಾಡಿಕೊಟ್ಟಿದೆ.
Vijaya Karnataka Web on paper toilet outside toilet favorite
ಕಾಗದದಲ್ಲಿಟಾಯ್ಲೆಟ್‌, ಬಯಲು ಶೌಚವೇ ಫೇವರಿಟ್‌!


ಮಹಾನಗರ ಪಾಲಿಕೆ ವ್ಯಾಪ್ತಿಯ ಬಿದ್ದಾಪುರ ಕಾಲೊನಿ, ಖರ್ಗೆ ಕಾಲೊನಿ. ಡಬರಾಬಾದ್‌, ಮಿಸ್ಬಾ ಕಾಲೊನಿ, ಶಹಾಬಜಾರ್‌, ಫಿಲ್ಟರ್‌ ಬೆಡ್‌ ಸೇರಿದಂತೆ ನಗರಕ್ಕೆ ಹೊಂದಿಕೊಂಡಂತೆ ಇರುವ ಹೀರಾಪುರ, ಕುಸನೂರ, ಬಿದನೂರು, ಶರಣ ಸಿರಸಗಿ, ಮಾದರಸನ ಹಳ್ಳಿ, ಬಡೇಪುರ ಗ್ರಾಮಗಳಲ್ಲಿಬಯಲು ಶೌಚ ಎಂಬುದು ತೀರಾ ಸಾಮಾನ್ಯ. ಹೀಗಿರುವಾಗ ಬಯಲು ಶೌಚಮುಕ್ತ ಎಂಬ ಹೇಗಾಯಿತು ಎಂದು ನಿವೃತ್ತ ಶಿಕ್ಷಕರೊಬ್ಬರು ಪ್ರಶ್ನಿಸುತ್ತಾರೆ.

ದಾಖಲೆ ಹೇಳೋದೇನು ?


ಕಲಬುರಗಿ ಜಿಲ್ಲೆಯ ಎಲ್ಲ264 ಗ್ರಾಪಂ.ಗಳಲ್ಲಿನ ಒಟ್ಟು 824 ಗ್ರಾಮಗಳು ಈಗ ಬಯಲು ಶೌಚ ಮುಕ್ತವಾಗಿವೆ. ಆದರೆ ಈ ಗ್ರಾಮಗಳ 28,100 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳಲೇ ಇಲ್ಲ. 2012ರಲ್ಲಿಪತ್ತೆಮಾಡಿದ ಗ್ರಾಮಗಳ ಒಟ್ಟು 2,14,525 ಕುಟುಂಬಗಳಿಗೆ 2018ರ ಅ.2ರೊಳಗೆ ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಿಕೊಡುವ ಗುರಿ ಇತ್ತು. ಈ ಟಾರ್ಗೆಟ್‌ ತಲುಪಿದ ಕೂಡಲೆ ಈ ಘೋಷಣೆ ಮಾಡಿ ಕೈತೊಳೆದುಕೊಳ್ಳಲಾಗಿದೆ. ಆದರೆ, ಮರು ಸಮೀಕ್ಷೆ ಪ್ರಕಾರ ಈಗಲೂ ಜಿಲ್ಲೆಯ 28,000 ಕುಟುಂಬಗಳಿಗೆ ಶೌಚಾಲಯಗಳಿಲ್ಲಎಂದು ಖುದ್ದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಪ್ರಾಕ್ಟಿಕಲ್‌ ಸಮಸ್ಯೆ:


ವಾಸ್ತವದಲ್ಲಿಶೌಚಾಲಯ ಇಲ್ಲದ ಕುಟುಂಬಗಳ ಸರ್ವೆ ಮಾಡಿರುವುದೇ ಸರಿಯಾಗಿಲ್ಲ. ಇದು ಆರಂಭದಲ್ಲಿಕೇಂದ್ರ ಸರಕಾರದ ಒಂದು ಅಂಶದ ಕಾರ್ಯಕ್ರಮವಾಗಿತ್ತು. ಬಳಿಕ ಇದರ ಅನುಷ್ಠಾನದಲ್ಲಿಸಮಸ್ಯೆಗಳು ಕಾಣಿಸಿಕೊಂಡವು. ಗ್ರಾಮೀಣ ಭಾಗದಲ್ಲಿ 5- 6 ಸದಸ್ಯರಿರುವ ಮನೆಗೆ ಶೌಚಕ್ಕಾಗಿಯೇ 40 -45 ಲೀಟರ್‌ ನೀರು ಬೇಕಾಗುತ್ತದೆ. ನೀರಿನ ಸಮಸ್ಯೆಯ ಮಧ್ಯೆ ಶೌಚಕ್ಕೆ ಹೀಗೆ ಧಾರಾಳವಾಗಿ ನೀರು ಬಳಸಲು ಗ್ರಾಮೀಣ ಭಾಗದ ಜನರು ಹಿಂದೇಟು ಹಾಕುತ್ತಾರೆ. ಹಾಗಾಗಿ, ಗ್ರಾಪಂ.ಗಳು ಮುತುವರ್ಜಿ ವಹಿಸಿ ನಿರ್ಮಿಸಿದ ಶೌಚಾಲಯಗಳ ಪೈಕಿ ಶೇ.30ರಷ್ಟು ಮಾತ್ರ ಬಳಕೆ ಆಗುತ್ತಿವೆ. ಇನ್ನುಳಿದ 30ರಷ್ಟು ಶೌಚಾಲಯಗಳು ಭೆರಣಿ,ಕಟ್ಟಿಗೆ ಮತ್ತು ಮೇವು ಸಂಗ್ರಹದ ಗೋದಾಮುಗಳಾಗಿ ಮಾರ್ಪಾಡಾಗಿವೆ ಎಂದು ಗ್ರಾಪಂ. ಪಿಡಿಒ ಒಬ್ಬರು ಒಪ್ಪಿಕೊಳ್ಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ