ಪಾರಿವಾಳಗಳೊಂದಿಗೆ ದೀಪ ಹಿಡಿದು ಪ್ರದರ್ಶನ
ಸಿರಿಯಾದಲ್ಲಿ ಮಕ್ಕಳನ್ನು ಹತ್ಯೆಗೈಯುತ್ತಿರುವ ದುಷ್ಕೃತ್ಯ ಖಂಡಿಸಿ ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ನಗರದ ಎಸ್ವಿಪಿ ವೃತ್ತದಲ್ಲಿ ಶಾಂತಿ ಸಂಕೇತವಾದ ಪಾರಿವಾಳಗಳೊಂದಿಗೆ ದೀಪ ಹಿಡಿದುಕೊಂಡು ಪ್ರದರ್ಶನ ಮಾಡಲಾಯಿತು.
ಕಲಬುರಗಿ: ಸಿರಿಯಾದಲ್ಲಿ ಮಕ್ಕಳನ್ನು ಹತ್ಯೆಗೈಯುತ್ತಿರುವ ದುಷ್ಕೃತ್ಯ ಖಂಡಿಸಿ ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ನಗರದ ಎಸ್ವಿಪಿ ವೃತ್ತದಲ್ಲಿ ಶಾಂತಿ ಸಂಕೇತವಾದ ಪಾರಿವಾಳಗಳೊಂದಿಗೆ ದೀಪ ಹಿಡಿದುಕೊಂಡು ಪ್ರದರ್ಶನ ಮಾಡಲಾಯಿತು.
ಸಿರಿಯಾದ ಮಕ್ಕಳನ್ನು ಇಂತಹದೇ ಭಯೋತ್ಪಾದನೆ ಆಹುತಿ ಪಡೆಯುತ್ತಿದೆ. ವಿಶ್ವ ಸಂಸ್ಥೆಯು ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರದರ್ಶನಕಾರರು, ಭಾರತವು ಕೂಡಲೇ ಮಧ್ಯಪ್ರವೇಶಿಸಿ ಕೊಲೆ ಯುದ್ಧ ತಡೆಗಟ್ಟಬೇಕೆಂದು ವಿಶ್ವ ಸಂಸ್ಥೆಗೆ ಆಗ್ರಹಿಸಬೇಕು ಎಂದು ಒತ್ತಾಯಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಮೀನಾಕ್ಷಿ, ಕೆ. ನೀಲಾ ಅವರು, ಸಿರಿಯಾ ದೇಶದಲ್ಲಿನ ಆಂತರಿಕ ಭಯೋತ್ಪಾದನೆಗೆ ಮಕ್ಕಳನ್ನು ಬಲಿ ಮಾಡಲಾಗುತ್ತಿದೆ. ಹಸು ಕಂದಗಳನ್ನು ಕೊಲ್ಲುವ ಮೂಲಕ ಕೊಲೆಗಡುಕ ಸಂಸ್ಕೃತಿಯನ್ನು ವಿಸ್ತರಿಸಲಾಗುತ್ತಿದೆ. ಇದು ಜಗತ್ತಿನ ಶಾಂತಿ ಸೌಹಾರ್ದಕ್ಕೆ ಬಹು ದೊಡ್ಡ ಅಪಾಯವಾಗಿದೆ. ಈ ದುಷ್ಕೃತ್ಯವನ್ನು ಅಮೆರಿಕ ಮೇಲ್ನೋಟಕ್ಕೆ ಖಂಡಿಸಿದರೂ ಭಯೋತ್ಪಾದನೆಗೆ ಆರ್ಥಿಕ ನೈತಿಕ ಕುಮ್ಮಕ್ಕು ಸಾಮ್ರಾಜ್ಯ ಶಾಹಿ ದೇಶಗಳದ್ದೇ ಆಗಿದೆ ಎಂದು ದೂರಿದರು.
ಭಯೋತ್ಪಾದನಾ ಹಿಂಸೆಯಿಂದ ತತ್ತರಿಸಿದ ಲಕ್ಷಾಂತರ ನಾಗರಿಕರು ಸಿರಿಯಾದಿಂದ ಪಲಾಯನ ಮಾಡುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಈಗಾಗಲೇ ಇರಾಕ್, ಆಪ್ಘಾನಿಸ್ತಾನ್ದಂತಹ ದೇಶಗಳ ಮೇಲೆ ಬಾಂಬ್ ದಾಳಿ ನಡೆಸಿ ಸರ್ವನಾಶಗೈದಿದ್ದು ಜಗತ್ತು ನೋಡಿದೆ. ಅಧಿಕಾರ, ಸಂಪತ್ತಿನ ಮೇಲೆ ಹಿಡಿತ ಸಾಧಿಸಲು ಮತ್ತು ನೈಸರ್ಗಿಕ ಸಂಪತ್ತನ್ನೂ ಲೂಟಿಗೈವ ಹುನ್ನಾರಕ್ಕೆ ಭಯೋತ್ಪಾದನೆಯನ್ನು ಹುಟ್ಟಿಸಿ ಬೆಳೆಸಲಾಗಿದೆ ಎಂದು
ವಿಠಲ ಚಿಕಣಿ, ಡಾನಬಾಸ್ಕೊ ಫಾದರ್, ಸಾಹಿತಿ ಸನತ್ಕುಮಾರ್ ಬೆಳಗಲಿ ಮಾತನಾಡಿದರು.
ಧರಣಿ ಮುಂದೂಡಿಕೆ
ಚಿಂಚೋಳಿಯಲ್ಲಿ ಹೆಣ್ಣು ಶಿಶು ಮಾರಾಟ ಖಂಡಿಸಿ, ಹೆಣ್ಣು ಮಗು ಉಳಿಸಿ ಮಾನವ ಕುಲ ರಕ್ಷಿಸಿ ಎಂಬ ಘೋಷಣೆಯೊಂದಿಗೆ ಮಾ. 8ರಂದು ನಡೆಯಬೇಕಿದ್ದ ಅಹೋರಾತ್ರಿ ಹೋರಾಟವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ ತಿಳಿಸಿದ್ದಾರೆ.