ಆ್ಯಪ್ನಗರ

ಕೊನೆ ಕ್ಷಣದಲ್ಲಿ ಗುಲ್ಬರ್ಗ ವಿವಿಯಲ್ಲಿ ರದ್ದಾದ ಕನ್ಹಯ್ಯ ಕುಮಾರ್ ಕಾರ್ಯಕ್ರಮ: ಕರ್ಫ್ಯೂ ಜಾರಿ

ವಿವಾದದ ಸ್ವರೂಪ ಪಡೆದಿದ್ದ ಕನ್ಹಯ್ಯ ಕುಮಾರ್ ಕಾರ್ಯಕ್ರಮ ವಿಚಾರದಲ್ಲಿ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗುಲ್ಬರ್ಗ ವಿವಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದ ಜಾಗವನ್ನು ಬದಲಾಯಿಸಲಾಗಿದೆ.

Vijaya Karnataka Web 15 Oct 2019, 12:31 pm
ಕಲಬುರಗಿ : ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ರದ್ದುಪಡಿಸಲಾಗಿದೆ. ರಾಜ್ಯಪಾಲರ ಕಚೇರಿಯ ಮಧ್ಯಸ್ಥಿಕೆಯ ಪತ್ರ ಕಳೆದ ಮಧ್ಯರಾತ್ರಿ ಪ್ರಭಾರಿ ಕುಲಪತಿಗಳ ಕೈ ಸೇರಿದ್ದು, ರಾಜ್ಯಪಾಲರ ನಿದೇ೯ಶನದ ಮೇರೆಗೆ ಕನ್ಹಯ್ಯ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ ಎಂದು ಕುಲಪತಿಗಳು ತಿಳಿಸಿದ್ದಾರೆ.
Vijaya Karnataka Web kanhaiya kumar toi


ಕನ್ಹಯ್ಯ ಕಾರ್ಯಕ್ರಮಕ್ಕೆ ಅನುಮತಿ ರದ್ದುಗೊಳಿಸಿದ ಗುಲ್ಬರ್ಗ ವಿವಿ: ಇದು ಹಿಂದೂಗಳ ಹೋರಾಟಕ್ಕೆ ಸಿಕ್ಕ ಜಯ ಎಂದ ಸಿದ್ಧಲಿಂಗ ಸ್ವಾಮೀಜಿ

ಭಾರಿ ನಿರೀಕ್ಷೆ ಮತ್ತು ಹಲವು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದ್ದ ಕಾರ್ಯಕ್ರಮಕ್ಕೆ ಅಧಿಕೃತ ಮೊಹರು ಒತ್ತಿದ್ದ ವಿವಿ ಕೊನೆ ಕ್ಷಣದಲ್ಲಿ ಅನುಮತಿ ರದ್ದುಗೊಳಿಸಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಗುಲ್ಬರ್ಗ ವಿಶ್ವವಿದ್ಯಾಲಯ ಪ್ರವೇಶಕ್ಕೂ ಕನ್ಹಯ್ಯಗೆ ನಿಷೇಧ ಹೇರಲಾಗಿದೆ. ಇನ್ನೊಂದೆಡೆ, ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯ ಅನುಮತಿ ನಿರಾಕರಿಸಿದ್ದರಿಂದ ಉಪನ್ಯಾಸದ ಸ್ಥಳ ಬದಲಾಯಿಸಲಾಗಿದೆ. ಈಗ ಕಲಬುರಗಿಯ ವಿಶ್ವೇಶ್ವರಯ್ಯ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ಉಪನ್ಯಾಸ ನಿಗದಿ ಮಾಡಲಾಗಿದೆ.

ವಿರೋಧದ ನಡುವೆಯೂ 15ರಂದು ಕನ್ಹಯ್ಯ ಭಾಷಣಕ್ಕೆ ಅನುಮತಿ

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅ.15ರಂದು ಬೆಳಗ್ಗೆ 11ಕ್ಕೆ ನಡೆಯಬೇಕಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ ಪಾಲ್ಗೊಳ್ಳಲು ಸೋಮವಾರ ನಡೆದ ವಿವಿ ಸಿಂಡಿಕೇಟ್‌ ಸಭೆ ತನ್ನ ಒಪ್ಪಿಗೆ ನೀಡಿತ್ತು.

ಅಂಧಭಕ್ತಿ ಪ್ರದರ್ಶನವೂ ದೇಶದ್ರೋಹ: ಕನ್ಹಯ್ಯ ಕುಮಾರ್‌

ವಿವಿಯ ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ, ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ಸಂಯುಕ್ತವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಕಂಡ ಅಧುನಿಕ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತ ವಿಷಯದ ಮೇಲೆ ಡಾ.ಕನ್ಹಯ್ಯ ವಿಶೇಷ ಉಪನ್ಯಾಸ ನೀಡಬೇಕಿತ್ತು. ಆದರೀಗ, ಕಾರ್ಯಕ್ರಮದ ಸ್ಥಳ ಬದಲಾಗಿದೆ.

ವಿವಿಯಲ್ಲಿ ಕಾರ್ಯಕ್ರಮ ರದ್ದು


ಕಾರ್ಯಕ್ರಮಕ್ಕಾಗಿ ನಡೆದಿತ್ತು ಪರ - ವಿರೋಧ ಹೋರಾಟ

ಈ ಮಧ್ಯೆ, ಕನ್ಹಯ್ಯ ದೇಶವಿರೋಧಿ ಭಾಷಣ ಮಾಡುತ್ತಾರೆ, ಸಾಮಾಜಿಕ ಸೌಹಾರ್ದತೆ ಕೆಡಿಸುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಯಾವುದೇ ಕಾರಣಕ್ಕೂ ಗುಲ್ಬರ್ಗ ವಿವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನೆ ಕರೆ ನೀಡಿತ್ತು. ಇನ್ನೊಂದೆಡೆ, ಕನ್ಹಯ್ಯ ಭೇಟಿಗೆ ಅವಕಾಶ ನೀಡದಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ಕಲಬುರಗಿ ಸಂಸದ ಡಾ.ಉಮೇಶ್‌ ಜಾಧವ್‌, ಬೀದರ್‌ ಸಂಸದ ಭಗವಂತ ಖೂಬಾ ಸೇರಿದಂತೆ ಇತರರು ಹಂಗಾಮಿ ಕುಲಪತಿ ಡಾ.ಪರಿಮಳಾ ಅಂಬೇಕರ್‌ ಅವರಿಗೆ ದೂರವಾಣಿ ಕರೆ ಮಾಡಿ ತಾಕೀತು ಮಾಡಿದ್ದರಿಂದ ಕನ್ಹಯ್ಯ ಕುಮಾರ್‌ ಆಗಮನದ ಕುರಿತು ಮತ್ತೊಮ್ಮೆ ಸಂಶಯ ಆವರಿಸಿಕೊಂಡಿತ್ತು. ಮೇಲಾಗಿ, ಈ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲು ಸಿಂಡಿಕೇಟ್‌ ಸಭೆಯನ್ನು ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ