ಆ್ಯಪ್ನಗರ

ವೈನ್‌ಶಾಪ್‌ಗೆ ಕನ್ನ ಹಾಕಿ ದುಬಾರಿ ಮದ್ಯ ಕದ್ದ ಮೂವರು ಕ್ಲಾಸ್‌ಮೇಟ್ಸ್ ಬಂಧನ

ಅದು ಮೂರು ಜನ ಪಿಯುಸಿ ಫೇಲ್ಯೂರ್ ಬ್ಯಾಚ್. ಪಿಯೂಸಿಯಲ್ಲಿ ಪೇಲ್ ಆದ ಮೇಲೆ ಮದ್ಯಪಾನಕ್ಕೆ ದಾಸರಾಗಿದ್ದಾರೆ. ದುಡ್ಡು ಇದ್ದಾಗ ಹೈಫೈ ಬ್ರ್ಯಾಂಡ್ ಎಣ್ಣೆ ಹಾಕಿ ಮಾಜಾ ಮಾಡ್ತಿದ್ದರು. ಕೊನೆಗೆ ದುಡ್ಡು ಇಲ್ಲದೆ ಇದ್ದಾಗ ವೈನ್ ಶಾಪ್‌ಗೆ ಕನ್ನ ಹಾಕಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Vijaya Karnataka Web 24 Jul 2022, 9:06 pm
ಕಲಬುರಗಿ: ಅದು ಮೂರು ಜನ ಪಿಯುಸಿ ಫೇಲ್ಯೂರ್ ಬ್ಯಾಚ್. ಪಿಯುಸಿ ಪೇಲ್ ಆದ ಮೇಲೆ ಮತ್ತೆ ಪರೀಕ್ಷೆ ಬರೆದು ಪಾಸ್ ಆಗಬೇಕು ಅನ್ನೋ ಆಸೆಯನ್ನೇ ಬಿಟ್ಟಿದ್ದಾರೆ. ಪಿಯೂಸಿಯಲ್ಲಿ ಪೇಲ್ ಆದ ಮೇಲೆ ಮದ್ಯಪಾನಕ್ಕೆ ದಾಸರಾಗಿದ್ದಾರೆ. ದುಡ್ಡು ಇದ್ದಾಗ ಹೈಫೈ ಬ್ರ್ಯಾಂಡ್ ಎಣ್ಣೆ ಹಾಕಿ ಮಾಜಾ ಮಾಡ್ತಿದ್ದರು. ಕೊನೆಗೆ ದುಡ್ಡು ಇಲ್ಲದೆ ಇದ್ದಾಗ ವೈನ್ ಶಾಪ್‌ಗೆ ಕನ್ನ ಹಾಕಿ ಹೈ ಫೈ ಬ್ರ್ಯಾಂಡ್ ಎಣ್ಣೆ ಕದ್ದು ಕಂಠ ಪೂರ್ತಿ ಕುಡಯುತ್ತಿದ್ದರು. ವೈನ್ ನಲ್ಲಿ ಎಣ್ಣೆ ಕದ್ದು ಕುಡಿದಿದ್ದ ಮೂರು ಜನರ ಟೀಮ್ ಅನ್ನ ಪೊಲೀಸರು ಹೆಡೆಮುರಿ ಕಟ್ಟಿ ಒಳಗೆ ಹಾಕಿದ್ದಾರೆ.
Vijaya Karnataka Web liquor stolen


ಒಂದು ಸಾರಿ ಚೆನ್ನಾಗಿ ನೋಡಿಕೊಳ್ಳಿ, ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಅರೆ ಬೆತ್ತಲೆಯಾಗಿ ವೈನ್ ಶಾಪ್‌ಗೆ ಎಂಟ್ರಿ ಕೊಟ್ಟು ವೈನ್ ಶಾಪ್ ನಲ್ಲಿದ್ದ ಹೈ ಫೈ ಬ್ರ್ಯಾಂಡ್ ಮದ್ಯವನ್ನು ಕಳ್ಳತನ ಮಾಡಿ ಎಸ್ಕೇಫ್ ಆಗ್ತಿರೋದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂದಹಾಗೆ ಹೀಗೆ ವೈನ್ ಶಾಪ್ ಬಾಗಿಲು ಮುರಿದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಈ ಮೂರೂ ಜನರನ್ನ ಪೊಲೀಸರು ಹೆಡೆಮುರಿ ಕಟ್ಟಿ ಒಳಗೆ ಹಾಕಿದ್ದಾರೆ. ಕಲಬುರಗಿ ನಗರದ ವಿವಿಧ ಬಡವಾಣೆಯ ನಿವಾಸಿಗಳಾದ ತುಷಾರ್, ಗುರುರಾಜ್ , ಮೋಹನ್‌ ಬಂಧಿತರು. ಈ ಮೂರೂ ಜನ ಕ್ಲಾಸ್ ಮೇಟ್ಸ್‌, ಓದಿನಲ್ಲಿ ಹಿಂದೆ ಬಿದ್ದು ಪಿಯುಸಿಯಲ್ಲಿ ಫೇಲ್‌ ಆಗಿದ್ದಾರೆ. ಇವರು ಪಿಯುಸಿ ಫೆಲ್ಯೂವರ್ ಬ್ಯಾಚ್ ಎಂದೇ ಫೇಮಸ್ ಆಗಿದೆ.

ಉತ್ತರ ಕನ್ನಡದಲ್ಲಿ ಅಂತಾರಾಜ್ಯ ಅಕ್ರಮ ಮದ್ಯ ಜಾಲ ಪತ್ತೆ: 26.29 ಲಕ್ಷ ರೂ. ಮೌಲ್ಯದ ಮದ್ಯ ವಶ

ಪಿಯುಸಿ ಪೇಲ್ ಆದ ಮೇಲೆ ಎಣ್ಣೆ ಹೊಡೆಯೋ ಅಭ್ಯಾಸ ಶುರು ಮಾಡಿದ ಇವರು, ಹಣ ಇದ್ದಾಗ ದುಬಾರಿ ಮದ್ಯ ಖರೀದಿಸಿ ಕುಡಿಯುತ್ತಿದ್ದರು. ಹಣ ಇಲ್ಲದೆ ಇದ್ದಾಗ ವೈನ್ ಶಾಪ್‌ಗೆ ಕನ್ನ ಹಾಕಿ ಬ್ರ್ಯಾಂಡೆಡ್ ಮದ್ಯವನ್ನು ಕಳ್ಳತನ ಮಾಡಿ ಕುಡಿಯುತ್ತಿದ್ದರು.

ಕಳೆದ ತಿಂಗಳು ಈ ತುಷಾರ್ , ಗುರುರಾಜ್ , ಮೋಹನ್ ಮೂರು ಜನ ಸೇರಿಕೊಂಡು ರಾತ್ರಿ ಕಂಠ ಪೂರ್ತಿ ಕುಡಿದಿದ್ದಾರೆ. ಆದರೆ, ಮದ್ಯ ಸಾಕಾಗಿಲ್ಲ. ಜೇಬಲ್ಲಿ ದುಡ್ಡೂ ಇಲ್ಲದ ಕಾರಣ ವೈನ್ ಶಾಪ್‌ಗೆ ಕನ್ನ ಹಾಕಲು ಪ್ಲಾನ್ ಮಾಡಿದ್ದರು. ಕಲಬುರಗಿ ಹೊರವಲಯದ ಕೋಟನೂರ ಬಡವಾಣೆಯಲ್ಲಿರುವ ವೈನ್ ಶಾಪ್ ಬಾಗಿಲು ಮುರಿದು ಒಳಗೆ ಎಂಟ್ರಿ ಕೊಟ್ಟ ಮೂರು ಜನರ ಗ್ಯಾಂಗ್ ವೈನ್ ಶಾಪ್ ದುಬಾರಿ ಮದ್ಯ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ವೈನ್ ಶಾಪ್‌ನಲ್ಲಿ ಹಣ ಇದ್ದರೂ, ಹಣಕ್ಕೆ ಕೈ ಹಾಕದ ಇವರು ತಮಗೆ ಬೇಕಾದ ಮದ್ಯವನ್ನು ಕದ್ದು ಎಸ್ಕೇಪ್ ಆಗಿದ್ದಾರೆ.

ಬೆಳಗ್ಗೆ ವೈನ್ ಶಾಪ್ ಮಾಲೀಕ ಅಂಗಡಿಗೆ ಬಂದಾಗ ವೈನ್ ಶಾಪ್ ನಲ್ಲಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲಿಸರು ಮೂರೂ ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ