ಆ್ಯಪ್ನಗರ

ಪಾಲಿಕೆ ಕಮಿಷನರ್‌ ನಗರದ ಪ್ರದಕ್ಷಿಣೆ

ನಗರದ ಸರದಾರ ವಲ್ಲಭಬಾಯಿ ಪಟೇಲ್‌ ವೃತ್ತ ಮತ್ತು ಜಗತ್‌ ವೃತ್ತಗಳ ಮಧ್ಯೆದಲ್ಲಿ ನಡೆಯುತ್ತಿರುವ ರಸ್ತೆ ಮಧ್ಯದ ಡಿವೈಡರ್‌ ಸೇರಿದಂತೆ ಎರಡು ಬದಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಗಳನ್ನು ಸೋಮವಾರ ಏಕಾಏಕಿಯಾಗಿ ಪಾಲಿಕೆ ಕಮಿಷನರ್‌ ಫೌಜಿಯಾ ತರನ್ನುಮ್‌ ಅವರು ವೀಕ್ಷಣೆ ಮಾಡಿದರು.

Vijaya Karnataka 11 Jul 2019, 4:52 pm
ಕಲಬುರಗಿ:ನಗರದ ಸರದಾರ ವಲ್ಲಭಬಾಯಿ ಪಟೇಲ್‌ ವೃತ್ತ ಮತ್ತು ಜಗತ್‌ ವೃತ್ತಗಳ ಮಧ್ಯೆದಲ್ಲಿ ನಡೆಯುತ್ತಿರುವ ರಸ್ತೆ ಮಧ್ಯದ ಡಿವೈಡರ್‌ ಸೇರಿದಂತೆ ಎರಡು ಬದಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಗಳನ್ನು ಸೋಮವಾರ ಏಕಾಏಕಿಯಾಗಿ ಪಾಲಿಕೆ ಕಮಿಷನರ್‌ ಫೌಜಿಯಾ ತರನ್ನುಮ್‌ ಅವರು ವೀಕ್ಷಣೆ ಮಾಡಿದರು.
Vijaya Karnataka Web policy commissioner city round
ಪಾಲಿಕೆ ಕಮಿಷನರ್‌ ನಗರದ ಪ್ರದಕ್ಷಿಣೆ


ಈ ವೇಳೆಯಲ್ಲಿ ಕಾಮಗಾರಿ ತ್ರೀವಗತಿಯಲ್ಲಿ ಕಾಲಮಿತಿಯೊಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ರಸ್ತೆಯ ಮಧ್ಯದಲ್ಲಿ ಕೆಲಸ ನಡೆಯುತ್ತಿರುವುದರಿಂದ ಸಾವಿರಾರು ಜನರು ರಸ್ತೆಯಲ್ಲಿ ಓಡಾಡುವುದರಿಂದ ಅವರಿಗೆ ತೊಂದರೆ ಆಗದಂತೆ ದಿನವು ಎಚ್ಚರಿಕೆಯಿಂದ ಕಾಮಗಾರಿ ನಿರ್ವಹಿಸಬೇಕು ಮತ್ತು ಬೇಗ ಮುಗಿಸಬೇಕು. ಬೇಗ ಮುಗಿಸಿ ಎಂದರೆ ಕಾಮಗಾರಿಯನ್ನು ಬೇಕಾಬಿಟ್ಟೆಯಾಗಿ ಮುಗಿಸುವಂತಿಲ್ಲ. ನಿಗದಿತ ಪ್ರಮಾಣದಲ್ಲಿ ಉತ್ಕೃಷ್ಟ ಗುಣಮಟ್ಟವನ್ನು ಕಾಯ್ದು ಕೊಳ್ಳಬೇಕು. ಇಲ್ಲದೆ ಹೋದರೆ ಕಾಮಗಾರಿಯ ಗುತ್ತಿಗೆ ಹೊಣೆ ಹೊತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

ಜಗತ್‌ವೃತ್ತದಿಂದ ಎಸ್‌ಪಿವಿ ವೃತ್ತದವರೆಗೆ ನಡೆದುಕೊಂಡು ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿ ಗುಣಮಟ್ಟವನ್ನು ಖುದ್ದು ವೀಕ್ಷಣೆ ಮಾಡಿದ ಅವರು, ಗುತ್ತಿಗೆದಾರರು ಹಾಗೂ ಪಾಲಿಕೆ ಎಂಜಿನಿಯರ್‌ಗಳಿಗೆ ಹಲವು ಸೂಚನೆಗಳನ್ನು ನೀಡಿದರು. ಈ ವೇಳೆಯಲ್ಲಿ ಪಾಲಿಕೆಯ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ಇದ್ದರು.


ನಗರದ ಬಹುತೇಕ ಕಡೆಗಳಲ್ಲಿ ಪಾಲಿಕೆ ಅನುದಾನದಲ್ಲಿ ನಡೆಯುತ್ತಿರುವ ಕೆಲಸಗಳನ್ನು ವೀಕ್ಷಣೆ ಮಾಡಿದ್ದೇನೆ. ಜಗತ್‌ನಿಂದ ಎಸ್‌ವಿಪಿ ವೃತ್ತದವರೆಗಿನ ಕೆಲಸ ಶೇ. 70ರಷ್ಟು ಮುಗಿದಿದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿದು ಜನರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಕಾಮಗಾರಿ ಸ್ಥಳದಲ್ಲಿ ಜನರಿಗೆ, ಕಾಲ್ನಡಿಗೆಯಲ್ಲಿ ಪ್ರಯಾಣಿಸುವವರಿಗೆ ತೊಂದರೆ ಆಗದಂತೆ ಕಾಮಗಾರಿ ತಾಜ್ಯ ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದ್ದೇನೆ.

- ಫೌಜಿಯಾ ತರನ್ನುಮ್‌, ಮಹಾನಗರ ಪಾಲಿಕೆ ಆಯುಕ್ತರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ