ಆ್ಯಪ್ನಗರ

ಹುತಾತ್ಮ ಬಂಡೆಗೆ ಮರಣೋತ್ತರ ಶೌರ್ಯ ಪ್ರಶಸ್ತಿ?

ರೌಡಿಶೀಟರ್‌ ಮುನ್ನಾ ಜೊತೆ ನಡೆದ ಎನ್‌ಕೌಂಟರ್‌ ವೇಳೆ ತಲೆಗೆ ಗುಂಡೇಟು ತಗುಲಿ ಸಾವನ್ನಪ್ಪಿದ ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡುವ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.

Vijaya Karnataka 5 Jul 2018, 7:19 am
ಕಲಬುರಗಿ: ರೌಡಿಶೀಟರ್‌ ಮುನ್ನಾ ಜೊತೆ ನಡೆದ ಎನ್‌ಕೌಂಟರ್‌ ವೇಳೆ ತಲೆಗೆ ಗುಂಡೇಟು ತಗುಲಿ ಸಾವನ್ನಪ್ಪಿದ ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡುವ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.
Vijaya Karnataka Web mallikarjun bande


2014ರ ಜನವರಿ 8ರಂದು ಬಂಡೆ ನಡೆಸಿದ ಕಾರ್ಯಾಚರಣೆ ವೇಳೆ ರೌಡಿ ಮುನ್ನಾ ಸಾವನ್ನಪ್ಪಿದ್ದ. ಆದರೆ, ಆತನ ಪಿಸ್ತೂಲಿನಿಂದ ಒಂದು ಗುಂಡು ಬಂಡೆ ಅವರ ಹಣೆಯ ಭಾಗದಿಂದ ತಲೆಯೊಳಗೆ ಹೊಕ್ಕಿದ್ದರಿಂದ ಅವರು ಪ್ರಜ್ಞಾಹೀನರಾಗಿ ಕೊನೆಗೆ ಜ.15ರಂದು ಬಂಡೆ ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ದುರಂತವೆಂದರೆ, ಮೆದುಳು ಕ್ಯಾನ್ಸರ್‌ನಿಂದ ಬಂಡೆ ಅವರ ಮಡದಿ ಮಲ್ಲಮ್ಮ ಬಂಡೆ ಸಹ ಜುಲೈ 8, 2016ರಂದು ಮೃತಪಟ್ಟಿದ್ದರಿಂದ ಅವರ ಇಬ್ಬರು ಮಕ್ಕಳು ಈಗ ಸಂಬಂಧಿಕರ ಆಸರೆಯಲ್ಲಿ ಬದುಕುತ್ತಿದ್ದಾರೆ.

ಬಂಡೆ ವೀರ ಮರಣದ ನಂತರ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ಅಂದಿನ ಸರಕಾರ ಆಶ್ವಾಸನೆ ನೀಡಿತ್ತಾದರೂ, ಇಂದಿಗೂ ಈ ನಿಟ್ಟಿನಲ್ಲಿ ನ್ಯಾಯಾಂಗ ತನಿಖೆ ಇನ್ನೂ ಬಾಕಿ ಇಡಲಾಗಿದೆ. ಹೀಗಾಗಿ, ಈ ತನಿಖೆ ಪೂರ್ಣಗೊಳ್ಳದ ಹೊರತು; ರಾಷ್ಟ್ರಮಟ್ಟದ ಮರಣೋತ್ತರ ಶೌರ್ಯಪ್ರಶಸ್ತಿಗೆ ಶಿಫಾರಸು ಮಾಡಲು ಬರುವುದಿಲ್ಲ ಎಂಬ ನಿಯಮವಿದೆ.

ಈ ಹಿನ್ನೆಲೆಯಲ್ಲಿ ಬಂಡೆ ಅವರ ಸಹವರ್ತಿಗಳ ಒತ್ತಾಯ ಮಣಿದ ಎಸ್ಪಿ ಶಶಿಕುಮಾರ್‌ ಈ ಕುರಿತು ಡಿಜಿಪಿ ಅವರ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಡಿಜಿಪಿ ಅವರು ಎಸ್ಪಿ ಶಶಿಕುಮಾರ್‌ ಅವರಿಗೆ ಪತ್ರವೊಂದನ್ನು ಬರೆದಿದ್ದು, ಆದಷ್ಟು ಶೀಘ್ರ ನ್ಯಾಯಾಂಗ ತನಿಖೆ ಪೂರ್ಣಗೊಳಿಸಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ, ಮುಂದಿನ ಎರಡು ಮೂರು ದಿನಗಳಲ್ಲಿ ಶಶಿಕುಮಾರ್‌ ಈ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಒಂದೊಮ್ಮೆ ಈ ವರದಿ ಡಿಜಿಪಿ ಕೈ ಸೇರಿದ ನಂತರ ಹುತಾತ್ಮ ಬಂಡೆ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಗೆ ಡಿಜಿಪಿ ಶಿಫಾರಸು ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಬಂಡೆ ಅವರ ಸಾವಿನ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ಆದಷ್ಟು ಪೂರ್ಣಗೊಳಿಸುವಂತೆ ಡಿಜಿಪಿ ಪತ್ರ ಬರೆದಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳನ್ನು ಕೋರಲಾಗುವುದು. ಇದಾದ ಬಳಿಕ ಮರಣೋತ್ತರ ಶೌರ್ಯ ಪ್ರಶಸ್ತಿಗಾಗಿ ಡಿಜಿಪಿ ಅವರು ಶಿಫಾರಸು ಮಾಡಲು ಅನುಕೂಲವಾಗಲಿದೆ.
-ಶಶಿಕುಮಾರ್‌, ಎಸ್ಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ