ಆ್ಯಪ್ನಗರ

ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಓವೈಸಿ

ಸಬ್ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಲೇ ಪ್ರಧಾನಿ ಮೋದಿ ಅನ್ಯಧರ್ಮೀಯರ ಹಿತಾಸಕ್ತಿ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಾದುಲ್-ಮುಸ್ಲಿಮೀನ್ (ಎಐಎಂಐಎಂ) ಸಂಸ್ಥಾಪಕ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ಬೇಸರ ವ್ಯಕ್ತಪಡಿಸಿದರು.

ವಿಕ ಸುದ್ದಿಲೋಕ 13 Mar 2016, 12:56 pm
ಕಲಬುರಗಿ: ಸಬ್ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಲೇ ಪ್ರಧಾನಿ ಮೋದಿ ಅನ್ಯಧರ್ಮೀಯರ ಹಿತಾಸಕ್ತಿ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಾದುಲ್-ಮುಸ್ಲಿಮೀನ್ (ಎಐಎಂಐಎಂ) ಸಂಸ್ಥಾಪಕ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ಬೇಸರ ವ್ಯಕ್ತಪಡಿಸಿದರು.
Vijaya Karnataka Web pradhni mdi viruddha kiikrida vaisi
ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಓವೈಸಿ


ನಗರದ ಮುಸ್ಲಿಂ ಚೌಕದಲ್ಲಿ ಎಐಎಂಐಎಂ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕೇವಲ ಆರ್‌ಎಸ್‌ಎಸ್ ಮತ್ತು ಬಿಜೆಪಿ ಹಿತಾಸಕ್ತಿಗೆ ಮಾತ್ರ ದೇಶದಲ್ಲಿ ಮಣೆ ಹಾಕಲಾಗುತ್ತಿದೆ. ಮೋದಿ ಈ ದೇಶದ ಪ್ರಧಾನಿ ಎಂಬುದನ್ನು ಮರೆತು, ಕೇವಲ ಒಂದು ಧರ್ಮದ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ. ಮೋದಿ ಸೂಫಿ ಸಮ್ಮೇಳನದಲ್ಲಿ ಅವರು ಪಾಲ್ಗೊಳ್ಳುವುದರಿಂದ ಏನೂ ಪ್ರಯೋಜನ ಇಲ್ಲ. ಹೀಗಿರುವಾಗ ಸಬ್ ಕೆ ಸಾಥ್ ಸಬ್ ಕಾ ವಿಕಾಸ್ ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

ಆಯುಷ್ ಇಲಾಖೆಯಲ್ಲಿ ಖಾಲಿ ಇರುವ 3000 ಹುದ್ದೆಗಳ ಪೈಕಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಭರ್ತಿ ಮಾಡಿಕೊಂಡಿಲ್ಲ. ಈ ಕುರಿತು ಮಾಹಿತಿ ಹಕ್ಕು ಅಧಿನಿಯಮದ ಅಡಿ ಕೇಳಲಾದ ಪ್ರಶ್ನೆಗೆ, ಮುಸ್ಲಿಮರನ್ನು ಈ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ನೇಮಕಾತಿ ಮಾಡಿಕೊಳ್ಳಬಾರದು ಎಂಬ ನಿರ್ದೇಶನವಿದೆ ಎಂದು ಆಯುಷ್ ಇಲಾಖೆ ನೇರ ಉತ್ತರ ನೀಡಿದೆ. ಹೀಗಿರುವಾಗ ಈ ದೇಶದ ಮುಸ್ಲಿಮರು ಎಲ್ಲಿಗೆ ಹೋಗಬೇಕು ಎಂದರು.

ಇನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಮತ್ತು ಉತ್ತರ ಪ್ರದೇಶದ ಸಮಾಜವಾದಿ ಪಕ್ಷಗಳು ತಾವು ಸೆಕ್ಯುಲರ್ ಎನ್ನುತ್ತಲೇ ಮುಸ್ಲಿಮರನ್ನು ತಮ್ಮ ಹಿತಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿವೆ. ಇಷ್ಟಕ್ಕೂ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಾವು ಪ್ರಚಾರ ನಡೆಸದಂತೆ ಇಲ್ಲಿನ ಸರಕಾರ ತಮ್ಮನ್ನು ತಡೆದಿದ್ದನ್ನು ನೋಡಿದರೆ ತಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಭಯವಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಈ ದೇಶದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಹೇಳಲಾಗುತ್ತಿದೆಯೇ ಹೊರತು; ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಹಿಸುವುದಿಲ್ಲ ಎಂದರು.

ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಸೋತಿರಬಹುದು. ಆ ಸೋಲಿನ ನೈತಿಕ ಹೊಣೆ ಹೊರಲು ಸಿದ್ದ. ಆದರೆ, ತಾವು ಬೆಂಗಳೂರಿಗೆ ಬರದಂತೆ ನಿಷೇಧ ಹೇರಿದ್ದರಿಂದ ಹೀಗಾಯಿತು. ಮುಂಬರುವ 2018ರ ವಿಧಾನಸಭಾ ಚುನಾವಣೆ ಕೇಂದ್ರ ಚುನಾವಣಾ ಆಯೋಗದ ನಿಗರಾಣಿಯಲ್ಲಿ ನಡೆಯುತ್ತದೆ. ಆಗ ತಮ್ಮನ್ನು ತಡೆಯುವ ಯತ್ನ ಮಾಡಲಿ ಎಂದು ಓವೈಸಿ ಸವಾಲು ಹಾಕಿದರು.

ಮುಂಬರುವ ಎಲ್ಲ ಸ್ಥಳೀಯ ಮತ್ತು ಸಾರ್ವಜನಿಕ ಚುನಾವಣೆಗಳಲ್ಲಿ ಎಐಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಓವೈಸಿ ಸ್ಪಷ್ಟಪಡಿಸಿದರು.

ನ್ಯಾಯವಾದಿ ವಹಾಜ್ ಬಾಬಾ, ಗುರುಶಾಂತ ಪಟ್ಟೇದಾರ್ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಇಶ್ರತ್ ಜಹಾನ್ ಪ್ರಕರಣ: ನಿತ್ಯ ವಿಚಾರಣೆ ನಡೆಯಲಿ

ಗುಜರಾತ್‌ನಲ್ಲಿ ನಡೆದ ಇಶ್ರತ್ ಜಹಾನ್ ಪ್ರಕರಣ ಮತ್ತು ಆ ನಿಟ್ಟಿನಲ್ಲಿ ನಡೆದ ವಿಚಾರಣೆಯನ್ನು ಕೇಂದ್ರ ಸರಕಾರ ತಿರುಚಲು ಯತ್ನಿಸುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಓವೈಸಿ ಪ್ರತಿಕ್ರಿಯಿಸಿ, ಘಟನೆಯ ನಂತರದ ಮೂರು ವರ್ಷಗಳ ಘಟನಾವಳಿಗಳ ನಿತ್ಯ ವಿಚಾರಣೆ ನಡೆಸಲಿ. ಆಗ ಹಾಲು ಯಾವುದು? ನೀರು ಯಾವುದು? ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಓವೈಸಿ ಅಭಿಮಾನಿಗಳಿಗೆ ಲಾಠಿ ರುಚಿ

ಶನಿವಾರ ಬೆಳಗ್ಗೆ 11ಕ್ಕೆ ಆಗಮಿಸಬೇಕಿದ್ದ ಓವೈಸಿ ಕೊನೆಗೆ ಮಧ್ಯಾಹ್ನದ 2ಕ್ಕೆ ಬಂದರು. ಬೆಳಗ್ಗೆ 10ರಿಂದಲೇ ಸುಡುಬಿಸಿಲಿನಲ್ಲಿ ತಮ್ಮ ನಾಯಕನ ದರ್ಶನಕ್ಕಾಗಿ ಕಾಯುತ್ತಿದ್ದ ಸುಮಾರು 10 ಸಾವಿರಕ್ಕೂ ಅಧಿಕ ಅಭಿಮಾನಿಗಳು ಓವೈಸಿ ಪರ ಘೋಷಣೆಗಳನ್ನು ಕೂಗುತ್ತಿದ್ದರು. ಓವೈಸಿ ಆಗಮಿಸುತ್ತಿದ್ದಂತೆಯೇ ಅವರ ಕೈ ಕುಲುಕಲು ನುಗ್ಗುತ್ತಿದ್ದಾಗ ಪೊಲೀಸರು ಪರಿಸ್ಥಿತಿ ಹತೋಟಿ ಮೀರದಂತೆ ಲಾಠಿ ಬೀಸಬೇಕಾಯಿತು. ನೂಕು ನುಗ್ಗಲು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾಗಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ