ಆ್ಯಪ್ನಗರ

ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ತಮ್ಮ ನಾಯಕರನ್ನು ಮೆಚ್ಚಿಸಲು ಚಮಚಾಗಿರಿ ಮಾಡುತ್ತಿದ್ದಾರೆ; ಜೆಡಿಎಸ್ ಮುಖಂಡ ಆಕ್ರೋಶ

ಇವರೆಲ್ಲ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಸಚಿವರಾಗಿ ಕುಮಾರಸ್ವಾಮಿಯವರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದವರು ಇದೀಗ ಕಾಂಗ್ರೆಸ್ ಸೇರಿಕೊಂಡು ಕುಮಾರಣ್ಣ ನಗರವೇ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇವರೆಲ್ಲ ಮನವರಿಕೆ ಮಾಡಿಕೊಳ್ಳಬೇಕು ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಏನು ಕೊಡುಗೆ ನೀಡಿದೆ ಎಂಬುದರ ಕುರಿತು ಮನವರಿಕೆ ಮಾಡಿಕೊಳ್ಳಲಿ ಎಂದು ನಾಸೀರ್ ಹುಸೇನ್ ಉಸ್ತಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka Web 18 Oct 2021, 5:13 pm
ಕಲಬುರಗಿ: ಕಾಂಗ್ರೆಸ್ ನಾಯಕರಿಗೆ ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಸ್ಲಿಂ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಿ ಅಂತ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ ಸವಾಲಿಗೆ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ್ ತೀರುಗೇಟು ನೀಡಿದ್ದಾರೆ.
Vijaya Karnataka Web Nasir Hussain Ustad


ಕಲಬುರಗಿಯಲ್ಲಿ ಮಾತನಾಡಿದ ಉಸ್ತಾದ್, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ತಮ್ಮ ನಾಯಕರನ್ನು ಮೆಚ್ಚಿಸಲು ಚಮಚಾಗಿರಿ ಮಾಡುತ್ತಿದ್ದಾರೆ. ಮೈಮೇಲೆ ಜ್ಞಾನ ಇಲ್ಲದೆ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ ಅಂತ ಜಮೀರ್ ವಿರುದ್ಧ ಹರಿಹಾಯ್ದರು. 60 ವರ್ಷದಲ್ಲಿ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಹುದ್ದೆ ನೀಡಲು ಆಗದ ಕಾಂಗ್ರೆಸ್ ನಾಯಕರು, ಜೆಡಿಎಸ್ ಪಕ್ಷಕ್ಕೆ ಸವಾಲು ಹಾಕುವ ನೈತಿಕತೆ ಇದೆಯಾ?, ಕಾಂಗ್ರೆಸ್ ಪಕ್ಷ ಇಲ್ಲಿವರೆಗೆ ಮುಸ್ಲಿಂರನ್ನು ಸಿಎಂ, ಡಿಸಿಎಂ, ಪಕ್ಷದ ಅಧ್ಯಕ್ಷ ಅಥವಾ ಗೃಹಸಚಿವರನ್ನಾಗಿ ಮಾಡಿದೆಯಾ? ಅಂತ ಜಮೀರ್ ಅಹ್ಮದ್ ವಿರುದ್ಧ ನಾಸಿರ್ ಹುಸೇನ್ ಉಸ್ತಾದ ಕೆಂಡಕಾರಿದರು.
ಐಎಂಎ ಹಗರಣದಲ್ಲಿ ಜಮೀರ್‌ನ ರಕ್ಷಿಸುವಂತೆ ಸಿದ್ದರಾಮಯ್ಯ ನನ್ನ ಬಳಿ ಕಳಿಸಿದ್ದರು; ಎಚ್‌ಡಿಕೆ ಗಂಭೀರ ಆರೋಪ
ಜಮೀರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ನಾಯಕರು ಚಮಚಾಗಿರಿ ಮಾಡುವದು ಬಿಡಬೇಕು. ಬೇರೆಯವರ ತಟ್ಟೆಯಲ್ಲಿ ಏನು ಬಿದ್ದಿದೆ ನೋಡುವ ಮುನ್ನ ತಮ್ಮ ತಟ್ಟೆಯಲ್ಲಿ ಏನೇನು ಬಿದ್ದಿದೆ ಅನ್ನೋದು ನೋಡಿಕೊಳ್ಳಬೇಕು ಅಂತ ಜಮೀರ್ ಗೆ ತಿರುಗೇಟು ನೀಡಿದರು. ಇವರೆಲ್ಲ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಸಚಿವರಾಗಿ ಕುಮಾರಸ್ವಾಮಿಯವರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದವರು ಇದೀಗ ಕಾಂಗ್ರೆಸ್ ಸೇರಿಕೊಂಡು ಕುಮಾರಣ್ಣ ನಗರವೇ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇವರೆಲ್ಲ ಮನವರಿಕೆ ಮಾಡಿಕೊಳ್ಳಬೇಕು ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಏನು ಕೊಡುಗೆ ನೀಡಿದೆ ಎಂಬುದರ ಕುರಿತು ಮನವರಿಕೆ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ