ಆ್ಯಪ್ನಗರ

ಮಣ್ಣಿನ ಮಕ್ಕಳನ್ನು ಮಣ್ಣು ಮಾಡುವ ಹುನ್ನಾರ: ಪ್ರಿಯಾಂಕ್ ಖರ್ಗೆ

ಸರಕಾರ ವಿಧಿಸಲು ಹೊರಟಿರುವ ಷರತ್ತುಗಳನ್ನು ನೋಡಿದರೆ ಮಣ್ಣಿನ ಮಕ್ಕಳನ್ನು ಮಣ್ಣು ಮಾಡುವ ಉದ್ದೇಶ ಸರಕಾರಕ್ಕಿದೆ ಎನಿಸುತ್ತದೆ. ಯಾಕೆಂದರೆ, ಈ ಮೊದಲು ಬೆಂಬಲ ಬೆಲೆ ಯೋಜನೆಯಲ್ಲಿಎಕರೆಗೆ 15 ರಿಂದ 20 ಕ್ವಿಂಟಾಲ್‌ ಮಾತ್ರ ಖರೀದಿಸಲು ಅವಕಾಶ ಮಾಡಿಕೊಟ್ಟಿತ್ತು.

Vijaya Karnataka Web 22 Dec 2021, 7:46 pm
ಕಲಬುರಗಿ: ಅನ್ನದಾತರ ದಿನಾಚರಣೆ ಗುರುವಾರ ಇದ್ದು, ಈ ಸಡಗರವನ್ನೇ ರಾಜ್ಯ ಬಿಜೆಪಿ ಸರಕಾರ ಕಸಿದುಕೊಂಡಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.
Vijaya Karnataka Web ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ


ಬೆಂಬಲ ಬೆಲೆಗೆ ಖರೀದಿ ಮಿತಿ ಹೇರಿ ಅನ್ನದಾತರ ಕತ್ತು ಹಿಸುಕಲು ಸರಕಾರ ಹೊರಟಿದೆ. ರಾಜ್ಯದ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಬಯಸಿದ್ದರೂ ಅದಕ್ಕೆ ಖರೀದಿ ಮಿತಿ ಹೇರಲು ಮುಂದಾಗಿದೆ ಎಂದು ಕಲಬುರಗಿಯ ಕಾಂಗ್ರೆಸ್‌ ಹಿರಿಯ ನಾಯಕ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ಕಲಬುರಗಿಗೆ ಆಗಮಿಸುತ್ತಿದ್ದ ಬಸ್ ಗೆ ಎಂಇಎಸ್ ಪುಂಡರಿಂದ ಕಪ್ಪು ಮಸಿ

ಈ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕ್ಯಾಬಿನೆಟ್‌ ಸಬ್‌ ಕಮಿಟಿ ಈ ನಿರ್ಣಯ ಕೈಗೊಂಡಿದೆ. ಅದರಂತೆ ರೈತರು ಎಷ್ಟೇ ಭತ್ತ, ರಾಗಿ ಹಾಗೂ ಜೋಳ ಬೆಳೆದಿದ್ದರೂ ಅದರಲ್ಲಿಇಂತಿಷ್ಟು ಮಾತ್ರ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡವುದಾಗಿ ಸರಕಾರ ಷರತ್ತು ಹಾಕಿದೆ. ಹಾಗಾದರೆ ಉಳಿದ ಬೆಳೆಗೆ ಬೆಂಬಲ ಕೊಡೋರು ಯಾರು? ಎಂಬ ಪ್ರಶ್ನೆ ರೈತರಿಗೆ ಎದುರಾಗಿದೆ ಎಂದು ಟೀಕಿಸಿದ್ದಾರೆ.

ಅದರಲ್ಲೂ ರೈತರಿಂದ ತೀರಾ ಕಡಿಮೆ ಪ್ರಮಾಣದಲ್ಲಿ ಬೆಳೆ ಖರೀದಿ ಮಾಡಬೇಕು ಅನ್ನೋ ನಿಯಮವನ್ನೂ ಜಾರಿಗೊಳಿಸಲು ಸರಕಾರ ಮುಂದಾಗಿದೆ. ಇದರಿಂದ ನಾವು ಮತ್ತೆ ಮಧ್ಯವರ್ತಿಗಳ ಕೈಗೆ ಸಿಲುಕಿಕೊಳ್ಳಬಹುದು ಎನ್ನುವ ದುಗುಡ ರೈತರಲ್ಲಿ ಮನೆ ಮಾಡಿದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ.

ಸರಕಾರ ವಿಧಿಸಲು ಹೊರಟಿರುವ ಷರತ್ತುಗಳನ್ನು ನೋಡಿದರೆ ಮಣ್ಣಿನ ಮಕ್ಕಳನ್ನು ಮಣ್ಣು ಮಾಡುವ ಉದ್ದೇಶ ಸರಕಾರಕ್ಕಿದೆ ಎನಿಸುತ್ತದೆ. ಯಾಕೆಂದರೆ, ಈ ಮೊದಲು ಬೆಂಬಲ ಬೆಲೆ ಯೋಜನೆಯಲ್ಲಿ ಎಕರೆಗೆ 15 ರಿಂದ 20 ಕ್ವಿಂಟಾಲ್‌ ಮಾತ್ರ ಖರೀದಿಸಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಫೆಬ್ರವರಿಯಲ್ಲಿ ಮತ್ತೊಂದು ಆದೇಶ ಹೊರಡಿಸಿ ಯಾವುದೇ ಮಿತಿ ಇಲ್ಲ ಎಂದು ಹೇಳಿತು. ಇದರಿಂದ ರೈತಾಪಿ ವರ್ಗ ಸಂತಸದಲ್ಲಿತ್ತು. ಆದರೆ, ಈಗ ಇದೇ ರಾಜ್ಯ ಸರಕಾರ ಬಲಗೈಲಿ ಕೊಟ್ಟು ಎಡಗೈಲಿ ಕಿತ್ತುಕೊಂಡಿದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಎಂಇಎಸ್ ಪುಂಡರ ಹಾವಳಿ: ಮಹಾರಾಷ್ಟ್ರಕ್ಕೆ ತಾತ್ಕಾಲಿಕವಾಗಿ ಬಸ್ ಸಂಚಾರ ಬಂದ್!

ಈ ಮೂಲಕ ತನಗೆ ಇರೋದು ಎರಡು ನಾಲಿಗೆ ಅನ್ನೋದನ್ನ ಸಾಬೀತು ಮಾಡಿದೆ ಎಂದು ಪ್ರಿಯಾಂಕ್‌ ಕಟುವಾಗಿ ಟೀಕಿಸಿದ್ದಾರೆ. ಸರಕಾರ ಈ ರೈತ ವಿರೋಧಿ ನಿಲುವನ್ನು ಕೈಬಿಟ್ಟು, ಈ ಹಿಂದಿನ ನಿಯಮದಂತೆ, ರೈತರ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿಸಲು ಯಾವುದೇ ಗರಿಷ್ಠ ಮಿತಿ ಹೇರಬಾರದು ಎಂದು ಈ ಮೂಲಕ ಸರಕಾರವನ್ನು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ