ಆ್ಯಪ್ನಗರ

ರಂಗಾಯಣದ ಮುಂದೆ ಪ್ರತಿಭಟನೆ ಇಂದು

ಕಲಬುರಗಿ :ಇಲ್ಲಿನ ಕಲಬುರಗಿ ರಂಗಾಯಣದ ನಿರ್ದೇಶಕ ಮಹೇಶ ಪಾಟೀಲ ಅವರನ್ನು ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿ ದಿ. 15ರಂದು ಬೆಳಗ್ಗೆ 11 ಗಂಟೆಗೆ ರಂಗಾಯಣದ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಕಸಾಪ ಮಾಜಿ ಅಧ್ಯಕ್ಷ ಪಿ.ಎಂ.ಮಣ್ಣೂರ್‌ ತಿಳಿಸಿದ್ದಾರೆ.

Vijaya Karnataka 15 Dec 2018, 5:00 am
ಕಲಬುರಗಿ :ಇಲ್ಲಿನ ಕಲಬುರಗಿ ರಂಗಾಯಣದ ನಿರ್ದೇಶಕ ಮಹೇಶ ಪಾಟೀಲ ಅವರನ್ನು ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿ ದಿ. 15ರಂದು ಬೆಳಗ್ಗೆ 11 ಗಂಟೆಗೆ ರಂಗಾಯಣದ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಕಸಾಪ ಮಾಜಿ ಅಧ್ಯಕ್ಷ ಪಿ.ಎಂ.ಮಣ್ಣೂರ್‌ ತಿಳಿಸಿದ್ದಾರೆ.
Vijaya Karnataka Web protest against rangayana today
ರಂಗಾಯಣದ ಮುಂದೆ ಪ್ರತಿಭಟನೆ ಇಂದು


ರಂಗಾಯಣದ ನಿರ್ದೇಶಕರಾಗಿ ಬಂದ ಮೇಲೆ ಜನರಲ್ಲಿ, ಕಲಾವಿದರಲ್ಲಿ ಇದ್ದ ಯಾವ ನಿರೀಕ್ಷೆಯನ್ನು ಈಡೇರಿಸದ ಪಾಟೀಲ ಅವರು, ರಂಗಾಯಣವನ್ನು ವಿವಾದದ ಕೇಂದ್ರವನ್ನಾಗಿಸಿದ್ದಾರೆ. ನಿರಂತರ ಚಟುವಟಿಕೆ ಇಲ್ಲದೆ ಕೇವಲ ಸ್ವಜನ ಪಕ್ಷಪಾತಕ್ಕೆ ಸಿಲುಕಿಸಿ ರೋಗಗ್ರಸ್ಥವನ್ನಾಗಿಸಿದ್ದಾರೆ. ಈ ಕುರಿತು ರಂಗ ಸಮಾಜಕ್ಕೆ ದೂರು ನೀಡಿದಾಗ, ರಂಗ ಸಮಾಜದ ಸದಸ್ಯರು ಕಲಬುರಗಿ ಆಗಮಿಸಿ ಕಲಾವಿದರ, ನಿರ್ದೇಶಕರ ಹಾಗೂ ಸಾಹಿತ್ಯಾಸಕ್ತರ ವಿಡಿಯೋ ಸಾಕ್ಷ್ಯ ಸಂಗ್ರಹ ಮಾಡಿ 3 ತಿಂಗಳಾದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ರಂಗ ಸಮಾಜದ ಬೇಡಿಕೆಯಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕೂಡ ತನಿಖೆ ಮಾಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿದ್ದಾರೆ. ಈ ಎಲ್ಲ ಘಟನೆಯ ಬಳಿಕವೂ ಮಹೇಶ ಪಾಟೀಲ ವಜಾ ಆಗದೇ ಇರುವುದು ರಂಗಾಯಣಕ್ಕೆ ಕಳಂಕ ತಂದಿದೆ. ಆದ್ದರಿಂದ ರಂಗಾಯಣ ನಿರ್ದೇಶಕರ ವಜಾಕ್ಕೆ ಆಗ್ರಹಿಸಿ ದಿ. 15ರಂದು ಪ್ರತಿಭಟನೆ ಮಾಡಲಾಗುವುದು ಎಂದು ಮಣ್ಣೂರ್‌, ಜನರಂಗ ಅಧ್ಯಕ್ಷ ಶಂಕ್ರಯ್ಯ ಘಂಟಿ, ಕಲಬುರಗಿ ಆರ್ಟ್‌ ಥೇಯಟರ್‌ ಅಧ್ಯಕ್ಷ ಸುನಿಲ ಮಾನ್ಪಡೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ