ಆ್ಯಪ್ನಗರ

ರಾಯರ 27ನೇ ವರ್ಧಂತಿ ಉತ್ಸವ

ಕಲಬುರಗಿ ಜೇವರ್ಗಿ ಕಾಲೊನಿಯ ರಾಯರ ಮಠದಲ್ಲಿ ಶುಕ್ರವಾರ ರಾಯರ 27ನೇ ವರ್ಧಂತ್ಯುತ್ಸವ ಪ್ರಯುಕ್ತ ಬೆಳ್ಳಿ ರಥೋತ್ಸವ ಜರುಗಿತು.

Vijaya Karnataka 29 Dec 2018, 5:00 am
ಕಲಬುರಗಿ:ಇಲ್ಲಿನ ಜೇವರ್ಗಿ ಕಾಲೊನಿಯ ರಾಯರ ಮಠದಲ್ಲಿ ಶುಕ್ರವಾರ ರಾಯರ 27ನೇ ವರ್ಧಂತ್ಯುತ್ಸವ ಪ್ರಯುಕ್ತ ಬೆಳ್ಳಿ ರಥೋತ್ಸವ ಜರುಗಿತು.
Vijaya Karnataka Web raghavendr shri27th magnificent festivala
ರಾಯರ 27ನೇ ವರ್ಧಂತಿ ಉತ್ಸವ


ಪಂಡಿತರಿಂದ ಪ್ರವಚನ, ಭಜನೆ, ಅಷ್ಟಾವಧಾನ, ತೊಟ್ಟಿಲು ಸೇವೆ, ನಂತರ ಪಂಚಾಮೃತ ಅಭಿಷೇಕ ಹಾಗೂ ನಾನಾ ವಿಧದ ಪುಷ್ಪಗಳ ಅಲಂಕಾರ, ರಾಯರ ಅಷ್ಟೋತ್ತರ, ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಠದಲ್ಲಿ ನಡೆಯಿತು.
ಈ ವೇಳೆ ಸಾಮೂಹಿಕವಾಗಿ ಅನ್ನಸಂತರ್ಪಣೆ ಸೇವೆ ಜರುಗಿತು.

ಪ್ರಧಾನ ಅರ್ಚಕ ಪಂಡಿತ ಗಿರೀಶಾಚಾರ್ಯ ಅವಧಾನಿ, ಸಹಕಾರ ಸಮಿತಿ ಅಧ್ಯಕ್ಷ ವೆಂಕಟೇಶರಾವ್‌ ಜೋಗುರ, ಉಪಾಧ್ಯಕ್ಷ ಮಾಧವರಾವ್‌ ಸಾವಲಗೇರಿ, ಕಾರ್ಯದರ್ಶಿಯಾದ ವಾಸುದೇವರಾವ್‌ ಮುಂಡರಗಿ, ಪ್ರಸನ್ನ ಮಾರುತಿ ಭಜನಾ ಮಂಡಳಿ ಹಾಗೂ ಕಾಯದರ್ಶಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ