ಆ್ಯಪ್ನಗರ

ಕಲಬುರಗಿ: ರೆಸಾರ್ಟ್‌ನಲ್ಲಿ ಜೂಟಾಟ, 113 ಜನರ ಬಂಧನ

ನಗರದ ಸೇಡಂ ರಸ್ತೆಯಲ್ಲಿರುವ ಕ್ರಿಸ್ಟಲ್ ಫಾರಂ ರೆಸಾರ್ಟ್ ಮೇಲೆ ಸೋಮವಾರ ತಡ ರಾತ್ರಿ ದಾಳಿ ಮಾಡಿದ ಸಿಸಿಬಿ ಘಟಕದ ಪಿಎಸ್‌ಐ ವಾಜೀದ್ ಪಟೇಲ್ ಹಾಗೂ ಸಿಬ್ಬಂದಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಬರೋಬ್ಬರಿ 92 ಜನರನ್ನು ಬಂಧಿಸಿದ್ದಾರೆ.

Vijaya Karnataka Web 23 Nov 2021, 10:22 pm
ಕಲಬುರಗಿ: ನಗರದ ಹೊರವಲಯದ ಆಳಂದ ರಸ್ತೆಯಲ್ಲಿರುವ ಜುರಿಚ್ ಕ್ಲಬ್ ಮತ್ತು ಸೇಡಂ ರಸ್ತೆಯಲ್ಲಿರುವ ಕ್ರಿಸ್ಟಲ್ ಫಾರಂ ರೆಸಾರ್ಟ್‌ಗಳಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಒಟ್ಟು 113 ಜನರನ್ನು ಬಂಧಿಸಿ ಅವರಿಂದ ಒಟ್ಟು 5.83 ಲಕ್ಷ ರೂ. ವಶ ಪಡಿಸಿಕೊಂಡಿರುವ ಪೊಲೀಸರು ಕ್ಲಬ್ ಮತ್ತು ರೆಸಾರ್ಟ್ ಮಾಲಿಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
Vijaya Karnataka Web ಪೊಲೀಸ್‌
ಪೊಲೀಸ್‌


ಕಲಬುರಗಿ ಸೋಮವಾರ ತಡ ರಾತ್ರಿ ಎರಡೂ ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಸಬ್ ಅರ್ಬನ್ ಠಾಣೆ ವ್ಯಾಪ್ತಿಯ ಆಳಂದ ರಸ್ತೆಯಲ್ಲಿರುವ ಜುರಿಚ್ ಕ್ಲಬ್ ಮೇಲೆ ದಾಳಿ ಮಾಡಿದ ಪಿಎಸ್‌ಐ ಬಾಸು ಚವ್ಹಾಣ ಹಾಗೂ ಸಿಬ್ಬಂದಿ ಒಟ್ಟು 21 ಜನರನ್ನು ಬಂಧಿಸಿದ್ದಾರೆ. ಅವರಿಂದ ಇಸ್ಪೀಟ್ ಎಲೆ ಮತ್ತು ಆಟಕ್ಕೆ ಇಟ್ಟಿದ್ದ 2.11 ಲಕ್ಷ ರೂ.ಗಳನ್ನು ವಶ ಪಡಿಸಿಕೊಂಡಿದ್ದಾರೆ. ಕ್ಲಬ್ ಮಾಲಿಕ ಅರುಣಕುಮಾರ ಪಾಟೀಲ ಇವರ ವಿರುದ್ಧ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ನಳೀನ್‌ ಕುಮಾರ್‌ ಕಟೀಲ್‌ ಒಬ್ಬ ಜೋಕರ್‌.. ಬಿಜೆಪಿ ಲೂಟಿ ಗ್ಯಾಂಗ್‌: ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಕಿಡಿ

ಕ್ರಿಸ್ಟಲ್ ರೆಸಾರ್ಟ್ ದಾಳಿ

ನಗರದ ಸೇಡಂ ರಸ್ತೆಯಲ್ಲಿರುವ ಕ್ರಿಸ್ಟಲ್ ಫಾರಂ ರೆಸಾರ್ಟ್ ಮೇಲೆ ಸೋಮವಾರ ತಡ ರಾತ್ರಿ ದಾಳಿ ಮಾಡಿದ ಸಿಸಿಬಿ ಘಟಕದ ಪಿಎಸ್‌ಐ ವಾಜೀದ್ ಪಟೇಲ್ ಹಾಗೂ ಸಿಬ್ಬಂದಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಬರೋಬ್ಬರಿ 92 ಜನರನ್ನು ಬಂಧಿಸಿದ್ದಾರೆ. ಅವರಿಂದ ಇಸ್ಪಿಟ್ ಎಲೆ ಹಾಗೂ 3.72 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ರೆಸಾರ್ಟ್ ಮಾಲಿಕ ಅಶೋಕ ಗುತ್ತೇದಾರ ಬಡದಾಳ ಅವರ ವಿರುದ್ಧ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

12,000 ಪೊಲೀಸ್‌ ಹುದ್ದೆಗಳು ಖಾಲಿ ಇದೆ, ಪ್ರತೀ ವರ್ಷ 4,000 ಪೊಲೀಸರ ನೇಮಕಕ್ಕೆ ನಿರ್ಧಾರ; ಆರಗ ಜ್ಞಾನೇಂದ್ರ

ಉಭಯ ಪ್ರಕರಣಗಳಲ್ಲಿ ಕಮಿಷನರ್ ಡಾ. ವೈ.ಎಸ್.ರವಿಕುಮಾರ, ಎಸಿಪಿಗಳಾದ ಅಂಶುಕುಮಾರ, ಜೆ.ಎಚ್.ಇನಾಂದಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ದಾಳಿ ಮಾಡಲಾಗಿತ್ತು. ಒಟ್ಟು 113 ಜನರನ್ನು ಬಂಧಿಸಿರುವುದು ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯ ಈವರೆಗಿನ ದೊಡ್ಡ ಪ್ರಕರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ