ಆ್ಯಪ್ನಗರ

ರಾಮನ ಹುಟ್ಟೂರು ಭಾರತ ಅಲ್ಲ, ಪಂಥಾಹ್ವಾನ

ಭಾರತೀಯರು ದೇವರು ಎಂದು ಕರೆಯುವ ರಾಮ ಭಾರತದಲ್ಲಿಹುಟ್ಟಿಯೇ ಇಲ್ಲ. ಹಾಗಂತ ಕೇವಲ ಭಾರತೀಯರ ಮೇಲೆ ಭಾವೋದ್ವೇಗ ಹೇರಲಾಗಿದೆ. ಈ ನಿಟ್ಟಿನಲ್ಲಿಎಲ್ಲಿಯೇ ಚರ್ಚೆಗೆ ಸ್ಥಳ ನಿಗದಿಪಡಿಸಿದರೂ ತಾವು ಚರ್ಚೆಗೆ ಸಿದ್ದ ಎಂದು ಅಖಿಲ ಭಾರತ ಭಿಕ್ಕು ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಭಂತೆ ಆನಂದ ಮಹಾಶ್ಥವೀರ ಪಂಥಾಹ್ವಾನ ನೀಡಿದರು.

Vijaya Karnataka 16 Oct 2019, 9:57 pm
ಕಲಬುರಗಿ :ಭಾರತೀಯರು ದೇವರು ಎಂದು ಕರೆಯುವ ರಾಮ ಭಾರತದಲ್ಲಿಹುಟ್ಟಿಯೇ ಇಲ್ಲ. ಹಾಗಂತ ಕೇವಲ ಭಾರತೀಯರ ಮೇಲೆ ಭಾವೋದ್ವೇಗ ಹೇರಲಾಗಿದೆ. ಈ ನಿಟ್ಟಿನಲ್ಲಿಎಲ್ಲಿಯೇ ಚರ್ಚೆಗೆ ಸ್ಥಳ ನಿಗದಿಪಡಿಸಿದರೂ ತಾವು ಚರ್ಚೆಗೆ ಸಿದ್ದ ಎಂದು ಅಖಿಲ ಭಾರತ ಭಿಕ್ಕು ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಭಂತೆ ಆನಂದ ಮಹಾಶ್ಥವೀರ ಪಂಥಾಹ್ವಾನ ನೀಡಿದರು.
Vijaya Karnataka Web ramanas hometown is not india
ರಾಮನ ಹುಟ್ಟೂರು ಭಾರತ ಅಲ್ಲ, ಪಂಥಾಹ್ವಾನ


ನಗರದ ಸಿದ್ಧಾರ್ಥ ನಗರದ ದೀಕ್ಷಾ ಭೂಮಿಯಲ್ಲಿಮೆತ್ತಾ ಫೌಂಡೇಷನ್‌ ಧಮ್ಮಚಕ್ರ ಪ್ರವರ್ತನಾ ದಿನ, ವರ್ಷಾವಾಸದ ಮುಕ್ತಾಯ ಮತ್ತು ಕಠಿಣ ಛೀವರ ದಾನ ನೀಡುವ ಪ್ರಯುಕ್ತ ಹಮ್ಮಿಕೊಂಡಿದ್ದ ಧಮ್ಮ ಉತ್ಸವದಲ್ಲಿಧಮ್ಮ ದೀಕ್ಷೆ ನೀಡಿ ಅವರು ಮಾತನಾಡುತ್ತಿದ್ದರು.

ಭಾರತದಲ್ಲಿರಾಮ ಹುಟ್ಟಿದ್ದಾನೆ ಎಂದು ಕಥೆ ಕಟ್ಟಿ ಜನರಲ್ಲಿಭಯ ತುಂಬಿ ತಮ್ಮ ಲಾಭಕ್ಕಾಗಿ ಜನರನ್ನು ಆಟ ಆಡಿಸಲಾಗುತ್ತಿದೆ. ವಾಸ್ತವದಲ್ಲಿರಾಮ ಭಾರತದಲ್ಲಿಹುಟ್ಟಿಲ್ಲ. ಆತ ಹುಟ್ಟಿದ್ದು ಥೈಲ್ಯಾಂಡ್‌ನಲ್ಲಿಇವತ್ತಿಗೂ ಆ ದೇಶದಲ್ಲಿರಾಮನ ಆರಾಧನೆ ನಡೆಯುತ್ತಿದೆ ಎಂದ ಅವರು, ಈ ನಿಟ್ಟಿನಲ್ಲಿಬ್ರಾಹ್ಮಣರಾದಿಯಾಗಿ ಭಾರತದ ಪ್ರಧಾನಿ, ವಿದ್ವಾಂಸರು, ಮಂತ್ರಿಗಳು, ಇತಿಹಾಸಕಾರರು, ಹೋರಾಟಗಾರರು ಯಾರು ಬೇಕಾದರೂ ಬಂದು ತಮ್ಮೊಂದಿಗೆ ಚರ್ಚಿಸಬಹುದು. ತಾವು ವೈಜ್ಞಾನಿಕವಾಗಿ ಎಲ್ಲವನ್ನೂ ನಿರೂಪಿಸಲು ಸಿದ್ಧ ಎಂದರು.

ವೈಜ್ಞಾನಿಕವಾಗಿ ಸೂರ್ಯನನ್ನು ಬಾಯಲ್ಲಿಹಿಡಿಯುವುದು ಸಾಧ್ಯವಿಲ್ಲ. ಆದರೆ, ಬಾಲ ಹನುಮ ಸೂರ್ಯನನ್ನು ಬಾಯಲ್ಲಿಹಿಡಿದ ಕಥೆಯನ್ನು ಹೇಳಲಾಗಿದೆ. ಆತ ದೇವರು ಎಂಬ ಭಯ ಹುಟ್ಟಿಸಿ, ಹೀಗೇ ಇರಬೇಕು, ಹೀಗೆಯೇ ನಡೆದುಕೊಳ್ಳಬೇಕು ಎಂದು ನಿಯಮಗಳನ್ನು ರೂಪಿಸಲಾಗಿದೆ. ಈ ದೇಶದ ರಸ್ತೆ ರಸ್ತೆಗಳಲ್ಲಿನಾನಾ ದೇವರ ಮಂದಿರಗಳನ್ನು ಕಟ್ಟಿಸಿದ್ದಾರೆ. ಅದ್ಯಾವುದಕ್ಕೂ ಅಧಿಕೃತ ದಾಖಲೆ ಇಲ್ಲ. ಆದರೆ, ದೆಹಲಿಯಲ್ಲಿರಾಮದಾಸ ಮಂದಿರ ಬೀಳಿಸಲಾಗುತ್ತದೆ. ಇನ್ನೊಂದೆಡೆ, ಮಂದಿರ ನಿರ್ಮಾಣಕ್ಕೆ ಜಿಡಿಎ ಅನುಮತಿ ಪಡೆದಿಲ್ಲಎಂದು ಸುಪ್ರಿಂಕೋರ್ಟ್‌ ಸಮಜಾಯಿಷಿ ನೀಡುತ್ತದೆ ಎಂದು ಅವರು ವಿಷಾದಿಸಿದರು.

ಮನುಷ್ಯರಲ್ಲಿಭಯ ಹುಟ್ಟಿಸುವ, ಜೀವನದಲ್ಲಿಸದಾಕಾಲ ಆತಂಕ ಮೂಡಿಸುವ, ಮೂಢನಂಬಿಕೆಗಳಿಂದ ಜನರನ್ನು ಹೆದರಿಸುವ, ಆಹಾರ-ಜೀವನ ಶೈಲಿ, ದೇವರು, ಪಕ್ಷ, ಆಚರಣೆಗಳಲ್ಲೂಹೀಗೆಯೇ ಇರಬೇಕು ಎಂದು ಹೇರುವ ಜಾತಿ ಪದ್ಧತಿಯಲ್ಲಿತಾವು ಇರುವುದು ಬೇಡವೇ ಬೇಡ ಎಂದು ಬಾಬಾ ಸಾಹೇಬರು ಕೊನೆಯಲ್ಲಿಬೌದ್ಧ ಧರ್ಮದ ದೀಕ್ಷೆ ಪಡೆದರು ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮತಿಯ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಮಾತನಾಡಿದರು. ಪಂಚಾಯತ್‌ ರಾಜ್‌ ವಿಭಾಗದ ಇಇ ಡಾ.ಸುರೇಶ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಭಿಕ್ಕುಣಿ ಸುಮನಾ ಪುಣೆ, ಭಿಕ್ಕುಣಿ ಧಮ್ಮದೀಪ ಅಕೋಲಾ, ಕೀರ್ತಿ, ರಾಹುಲ್‌ ಲಕ್ಷ್ಮಿಕಾಂತ ಹುಬ್ಬಳ್ಳಿ ಇದ್ದರು.

ಸುರೇಶ ಮೇಂಗನ್‌ ಸ್ವಾಗತಿಸಿದರು. ಅಂಬಿಕಾ ಹುಬ್ಬಳ್ಳಿ ನಿರೂಪಿಸಿದರು.

2000 ಜನರಿಗೆ ಬೌದ್ಧ ದೀಕ್ಷೆ

ಕಲಬುರಗಿಯ ಸಿದ್ಧಾರ್ಥ ದೀಕ್ಷಾ ಭೂಮಿಯಲ್ಲಿನಡೆದ ಕಾರ್ಯಕ್ರಮದಲ್ಲಿ2000ಕ್ಕೂ ಹೆಚ್ಚು ಜನರು ಧಮ್ಮ ದೀಕ್ಷೆ ಸ್ವೀಕರಿಸಿದರು. ಇದಕ್ಕೂ ಮುನ್ನ ಧಮ್ಮ ದೀಕ್ಷೆ ಯಾಕೆ ಪಡೆಯಬೇಕು? ಅದರ ಉದ್ದೇಶ ಏನು? ಮತ್ತು ಏತಕ್ಕಾಗಿ ಪಡೆಯಬೇಕು? ಎಂದು ಆನಂದ ಮಹಾಶ್ಥವೀರ ಮನವರಿಕೆ ಮಾಡಿಕೊಟ್ಟರು.

ಈ ವೇಳೆ ಸತ್ಯ ರಕ್ಷಿತ್‌ ನಾಂದೇಡ್‌, ಭಂತೆ ವರಜ್ಯೋತಿ ಬೀದರ್‌ 22 ಪ್ರತಿಜ್ಞೆಗಳನ್ನು ಓದುವ ಮೂಲಕ ಪ್ರತಿಜ್ಞಾ ವಿಧಿ ಬೋಧಿಸಿದರು. ಭಂತೆಗಳಿಗೆ ಛೀವರ ದಾನ ನೀಡಿ ಗೌರವಿಸಲಾಯಿತು.

ಭಿಕ್ಕುಗಳೇಕೆ ಚರ್ಚೆಗೆ ಬೇಡ?

ಈ ದೇಶದ ಮಾಧ್ಯಮಗಳ ಯಾವುದೇ ಚರ್ಚೆಯಲ್ಲಿಬೌದ್ಧ ಬಿಕ್ಕುಗಳನ್ನು ತಪ್ಪಿಯೂ ಆಹ್ವಾನಿಸುವುದಿಲ್ಲ. ಇನ್ನೊಂದೆಡೆ, ಸುಳ್ಳುಗಳನ್ನು ಪ್ರತಿಪಾದಿಸುವ ಜನರನ್ನು ಗಂಟೆಗಳಲ್ಲಿಟಿವಿಗಳಲ್ಲಿಕರೆದು ಕೂಡಿಸಿ ಚರ್ಚೆ ನಡೆಸಲಾಗುತ್ತಿದೆ ಎಂದು ಭಂತೆ ಆನಂದ ಮಹಾಶ್ಥವೀರ ಅಚ್ಚರಿ ವ್ಯಕ್ತಪಡಿಸಿದರು.

ಯಾವುದು ನಡೆದಿಲ್ಲವೋ ಅದನ್ನು ನಡೆದಿದೆ ಎಂದು ಬಿಂಬಿಸುವ ಜನರನ್ನು ಕರೆದು ಟಿವಿ ಸ್ಟುಡಿಯೋಗಳಿಗೆ ಆಹ್ವಾನಿಸಲಾಗುತ್ತದೆ. ಬೌದ್ಧ ಬಿಕ್ಕುಗಳನ್ನು ಏಕೆ ಆಹ್ವಾನಿಸುವುದಿಲ್ಲಎಂದು ಅವರು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ