ಆ್ಯಪ್ನಗರ

ರೇಪ್‌ ಆ್ಯಂಡ್‌ ಮರ್ಡರ್‌, 100 ದಿನದಲ್ಲಿಗಲ್ಲುಪ್ರಕಟ

ಜಿಲ್ಲೆಯ ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದಲ್ಲಿಕಳೆದ ಡಿಸೆಂಬರ್‌ 2ರಂದು ಮಾನಸಿಕ ಅಸ್ವಸ್ಥ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಮರ್ಡರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ಪೋಕ್ಸೊ ನ್ಯಾಯಾಲಯ ಕೇವಲ 100 ದಿನದೊಳಗೆ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಡಿ.2ರಂದು ಘಟನೆ ನಡೆದಿತ್ತು.

Vijaya Karnataka 15 Mar 2020, 10:40 pm
ಮಹೇಶ್‌ ಕುಲಕರ್ಣಿ ಕಲಬುರಗಿ :ಜಿಲ್ಲೆಯ ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದಲ್ಲಿಕಳೆದ ಡಿಸೆಂಬರ್‌ 2ರಂದು ಮಾನಸಿಕ ಅಸ್ವಸ್ಥ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಮರ್ಡರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ಪೋಕ್ಸೊ ನ್ಯಾಯಾಲಯ ಕೇವಲ 100 ದಿನದೊಳಗೆ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಡಿ.2ರಂದು ಘಟನೆ ನಡೆದಿತ್ತು.
Vijaya Karnataka Web rape and murder 100 days gallows
ರೇಪ್‌ ಆ್ಯಂಡ್‌ ಮರ್ಡರ್‌, 100 ದಿನದಲ್ಲಿಗಲ್ಲುಪ್ರಕಟ

ಡಿ.2-3ರಂದು ಮಧ್ಯರಾತ್ರಿ ಸುಲೇಪೇಟ್‌ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ 22 ದಿನಗಳಲ್ಲಿ124 ಪುಟಗಳ ಚಾಜ್‌ರ್‍ಶೀಟ್‌ ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 52 ಸಾಕ್ಷಿಗಳು ನ್ಯಾಯಾಲಯದ ಎದುರು ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು.

ಎಲ್ಲದಕ್ಕೂ ಮುಖ್ಯವಾಗಿ ನ್ಯಾಯಾಧೀಶರಾದ ಎಸ್‌.ಗೋಪಾಲಪ್ಪ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಬಳಿಕ ಸರಕಾರಿ ರಜೆ ದಿನ ಹೊರತುಪಡಿಸಿ ಒಂದೇ ಒಂದು ದಿನದ ಅಂತರ ನೀಡದೆ ಮ್ಯಾರಥಾನ್‌ ವಿಚಾರಣೆ ಕೈಗೊಂಡಿದ್ದರಿಂದ ಧಿಶುಧಿಕ್ರಧಿವಾರ ಕೇವಲ 100 ದಿನಗಳೊಳಗೆ ತೀರ್ಪು ಹೊರಬಿದ್ದಿದೆ. ಏನಿದು ಘಟನೆ: ಯಾಕಾಪುರದ ಅಲ್ಪಸಂಖ್ಯಾತ ಸಮುದಾಯದ ಬಾಲಕಿ ಡಿ.2ರಂದು ಮಧ್ಯಾಹ್ನ ಮನೆಯಿಂದ ಹೊರಗೆ ಬಂದವಳು ನಾಪತ್ತೆಯಾಗಿದ್ದಳು.

ಇದರಿಂದ ಗಾಬರಿಗೊಂಡ ಆಕೆಯ ಪೋಷಕರು ಊರೆಲ್ಲಾಹುಡುಕಾಡಿದರೂ ಎಲ್ಲಿಯೂ ಆಕೆ ಕಾಣದ ಹಿನ್ನೆಲೆಯಲ್ಲಿಇಡೀ ಗ್ರಾಮಸ್ಥರು ಒಂದಾಗಿ ಹುಡುಕಾಟ ಆರಂಭಿಸಿದ್ದರು. ಅದೇವೇಳೆಗೆ ಊರ ಹೊರಗಿನ ಮುಲ್ಲಾಮಾರಿ ಕಾಲುವೆ ಕಡೆಯಿಂದ ಕುಡಿದ ಅಮಲಿನಲ್ಲಿತೂರಾಡುತ್ತಾ ಬಂದ ಯಲ್ಲಪ್ಪ ಸೇಡಂ ಏನೂ ನಡೆದೇ ಇಲ್ಲಎಂಬಂತೆ ಗುಂಪಿನೊಳಗೆ ಒಬ್ಬನಾಗಿ ಸೇರಿಕೊಂಡಿದ್ದ.
ಹೀಗಿದ್ದಾಗ ಗ್ರಾಮಸ್ಥರೊಬ್ಬರು ಯಲ್ಲಪ್ಪ ಮತ್ತು ಬಾಲಕಿ ಜೊತೆಯಾಗಿ ನಡೆದುಕೊಂಡು ಹೊರಟಿದ್ದನ್ನು ತಾನು ಗಮನಿಸಿದ್ದಾಗಿ ಆತನ ಎದುರೇ ಊರಿನ ಜನರೆದುರು ಪ್ರಸ್ತಾಪಿಸಿದ್ದರು. ಆಗ ತಡವರಿಸುತ್ತಾ ಉತ್ತರಿಸಿದ ಯಲ್ಲಪ್ಪ ಬಾಲಕಿ ಕಾಲುವೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದುದನ್ನು ತಾನೂ ಕಂಡಿದ್ದಾಗಿ ಹೇಳಿದ್ದರಿಂದ ಗ್ರಾಮಸ್ಥರು ಕಾಲುವೆಯ ಕಡೆಗೆ ಗಾಬರಿಯಿಂದ ಓಡಿ ಹೋಗಿದ್ದರು.
ಕಾಲುವೆ ಸಮೀಪ ಅರೆಬೆತ್ತಲೆ ಸ್ಥಿತಿಯಲ್ಲಿಬಾಲಕಿ ಮೃತಪಟ್ಟಿದ್ದನ್ನು ಗ್ರಾಮಸ್ಥರು ಗಮನಿಸಿದ್ದೇ ತಡ; ಸುಲೇಪೇಟ್‌ ಪೊಲೀಸ್‌ ಠಾಣೆಗೆ ಫೋನ್‌ ಮಾಡಿ ಮಾಹಿತಿ ನೀಡಿದ್ದರು. ಗ್ರಾಮಕ್ಕೆ ಪೊಲೀಸರು ಬಂದ ಕೂಡಲೇ ಯಲ್ಲಪ್ಪನ ಮೇಲೆ ಗ್ರಾಮಸ್ಥರು ವ್ಯಕ್ತಪಡಿಸಿದ ಅನುಮಾನದ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಾಗ ಆರೋಪಿ ತಾನು ನಡೆಸಿದ ಕೃತ್ಯ ಬಿಡಿಸಿಟ್ಟಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ