ಆ್ಯಪ್ನಗರ

ರಾಮರಾವ ಮಹಾರಾಜ ಆಶೀರ್ವಾದ ಪಡೆದ ರಾಠೋಡ

ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಂಜಾರಾ ಸಮಾಜದ ಮಹಾಗುರು ಪೌರಾದೇವಿಯ ಡಾ.ರಾಮರಾವ ಮಹಾರಾಜ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ ರಾಠೋಡ್‌ ಮಂಗಳವಾರ ರಾತ್ರಿ ಭೇಟಿಯಾಗಿ ಆರ್ಶೀವಾದ ಪಡೆದರು.

Vijaya Karnataka 4 May 2019, 9:56 pm
ಚಿಂಚೋಳಿ :ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಂಜಾರಾ ಸಮಾಜದ ಮಹಾಗುರು ಪೌರಾದೇವಿಯ ಡಾ.ರಾಮರಾವ ಮಹಾರಾಜ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ ರಾಠೋಡ್‌ ಮಂಗಳವಾರ ರಾತ್ರಿ ಭೇಟಿಯಾಗಿ ಆರ್ಶೀವಾದ ಪಡೆದರು.
ಚಿಂಚೋಳಿಯಲ್ಲಿ ನಡೆಯಲಿರುವ ಬೈ ಎಲೆಕ್ಷನ್‌ನಲ್ಲಿ ಒಳ್ಳೆಯದಾಗುವಂತೆ ರಾಠೋಡ್‌ ಪ್ರಾರ್ಥಿಸಿದರು. ಮಹಾರಾಜರು ಆಶೀರ್ವದಿಸಿ ಶುಭ ಕೋರಿದರು.
Vijaya Karnataka Web rathoda blessed by the maharaja of ramarava
ರಾಮರಾವ ಮಹಾರಾಜ ಆಶೀರ್ವಾದ ಪಡೆದ ರಾಠೋಡ


ಮಂಗಳವಾರ ರಾತ್ರಿ ಪೌರಾದೇವಿಗೆ ತೆರಳಿದ ರಾಠೋಡಗೆ ಆಶ್ರದಲ್ಲಿ ವಾಸ್ತವ್ಯ ಮಾಡಲು ತಿಳಿಸಿ ಸಮಾಜ ಸೇವೆ, ಸಮುದಾಯದ ಜತೆಗೆ ಎಲ್ಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವಂತೆ ಮಹಾರಾಜರು ಸೂಚಿಸಿದ್ದಾರೆ ಎಂದು ಸಮಾಜದ ಹಿರಿಯ ಮುಖಂಡ ಜಗನ್ನಾಥ ಮಾಸ್ತರ್‌ ತಿಳಿಸಿದರು.

ಸಮಾಜದ ತಾಲೂಕಾಧ್ಯಕ್ಷ ರಾಮಶೆಟ್ಟಿ ಪವಾರ, ಉಪಾಧ್ಯಕ್ಷ ತುಮಾರಾಮ ಪವಾರ, ಮೇಘರಾಜ ರಾಠೋಡ, ಬಾಬು ಪವಾರ, ದೇವಲಾ ನಾಯಕ, ಚಂದರ್‌ ಕಾರಬಾರಿ, ತಾರಸಿಂಗ್‌ ಚವ್ಹಾಣ, ಭಿಮರಾವ ನಾಯಕ, ಈಶ್ವರ ನಾಯಕ ಚೌಕಿತಾಂಡ, ಬಲರಾಮ ನಾಯಕ, ರಾಮು ಚವ್ಹಾಣ, ಗೋವಿಂದ ಮಹಾರಾಜ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ