ಆ್ಯಪ್ನಗರ

ಕಲಬುರಗಿ ಕಾರಾಗೃಹದಿಂದ 16 ಕೈದಿಗಳ ಬಿಡುಗಡೆ ಭಾಗ್ಯ

ಸನ್ನಡತೆ ಆಧಾರದಲ್ಲಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 92 ಜೀವಾವಧಿ ಕೈದಿಗಳ ಅವಧಿಪೂರ್ವ ಬಿಡುಗಡೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.

Vijaya Karnataka 18 Feb 2018, 4:43 pm
ಬೆಂಗಳೂರು/ ಕಲಬುರಗಿ: ಸನ್ನಡತೆ ಆಧಾರದಲ್ಲಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 92 ಜೀವಾವಧಿ ಕೈದಿಗಳ ಅವಧಿಪೂರ್ವ ಬಿಡುಗಡೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.
Vijaya Karnataka Web release of 16 prisoners from prison jails
ಕಲಬುರಗಿ ಕಾರಾಗೃಹದಿಂದ 16 ಕೈದಿಗಳ ಬಿಡುಗಡೆ ಭಾಗ್ಯ


ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಬಳ್ಳಾರಿ ಮತ್ತು ಧಾರವಾಡ ಜೈಲುಗಳಲ್ಲಿರುವ 92 ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರಕಲಿದೆ.

ಕಾರಾಗೃಹ ಇಲಾಖೆಯಿಂದ ಒಟ್ಟು 115 ಕೈದಿಗಳ ಪಟ್ಟಿಯನ್ನು ಸರಕಾರಕ್ಕೆ ಕಳುಹಿಸಲಾಗಿತ್ತು. ಕೈದಿಗಳ ಬಿಡುಗಡೆ ಸಮಿತಿಯು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಮತ್ತು 14 ವರ್ಷ ಪೂರೈಕೆ ಮಾಡದ ಕೈದಿಗಳನ್ನು ಹೊರತುಪಡಿಸಿ 109 ಜನರ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಮತ್ತಷ್ಟು ಕೈದಿಗಳ ಹೆಸರುಗಳನ್ನು ಕೈ ಬಿಟ್ಟು 92 ಜನ ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿ ಪಟ್ಟಿಯನ್ನು ಅಂಗೀಕರಿಸಿದ್ದಾರೆ.

ಕಲಬುರಗಿ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಲಿರುವವರು:

ಸಾಬಣ್ಣ ಮಾಸ್ತರ್‌, ದುಪ್ಪಲಿ- ಯಾದಗಿರಿ, ಸಿದ್ರಾಮಪ್ಪ ಸೋಪಣ್ಣ- ರಾಯಚೂರು, ಆದೆಣ್ಣ ಅಯ್ಯಪ್ಪ ರಾಯಚೂರು, ರಾಜು ಶರಣಪ್ಪ ಬೀದರ್‌, ಶಿವಾಜಿ ಅಂಬಾದಾಸ್‌- ಕಲಬುರಗಿ, ಸೂರ್ಯಕಾಂತ ಗಣಪತಿ- ಬೀದರ್‌, ವಿಜಯಕುಮಾರ ಗೋವಿಂದ ಬೀದರ್‌, ಮಾದು ಗೋವಿಂದ ಕಾಂಬ್ಳೆ- ಬೀದರ್‌, ಶರಣಪ್ಪ ಫಕೀರಪ್ಪ ಭೈರಿ- ಕಲಬುರಗಿ, ಶಿವಣ್ಣ ಫಕೀರಪ್ಪ ಭೈರಿ- ಕಲಬುರಗಿ, ದೊಡ್ಡ ಭೀಮಶಾ ತಾಮೇದಾರ- ಯಾದಗಿರಿ, ತಿಪ್ಪಣ್ಣ ಹೊನ್ನಪ್ಪ ನಾಯ್ಕೊಡಿ- ಯಾದಗಿರಿ, ಹೊನ್ನಪ್ಪ ಸಾಬಣ್ಣ ನಾಯ್ಕೋಡಿ- ಯಾದಗಿರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ