ಕಲಬುರಗಿ:ಜಿಲ್ಲೆಯ ಗ್ರಾಪಂ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ಕೆಲಸ ಮಾಡುತ್ತಿರುವ ಮೇಲ್ವಿಚಾರಕರು, ಕನಿಷ್ಠ ವೇತನ ನೀಡುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ 30 ವರ್ಷಗಳಿಂದ ನಾವು ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮಗೆ ಸರಕಾರದಿಂದ ಸಂಬಳವೂ ಸೇರಿದಂತೆ ಯಾವುದೇ ಸೇವಾ ಭದ್ರತೆ ಇಲ್ಲ. ಕೊನೆ ಪಕ್ಷ ಕನಿಷ್ಠ ವೇತನವಾದರೂ ಕೊಡಿ ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಅದನ್ನು ಕೊಡುತ್ತಿಲ್ಲ. 2019ರ ಜೂನ್ 24ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆನೂರು ಗ್ರಾಪಂ ಮೇಲ್ವಿಚಾರಕ ಆರ್.ರೇವಣಕುಮಾರ ಆತ್ಮಹತ್ಯೆಗೆ ಯತ್ನಿಸಿರುವುದು ನಮ್ಮ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದಂತಿದೆ ಎಂದು ಮನವಿ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.
ನಾವು ಎಷ್ಟು ಅಪಾಯದ ಸ್ಥಿತಿಯಲ್ಲಿ ಇದ್ದೇವೆ ಎಂದರೆ, ಮಾಡು ಇಲ್ಲವೆ ಮಡಿ ನಮ್ಮ ಮುಂದಿನ ಆಯ್ಕೆಯಾಗಿದೆ. ಆದ್ದರಿಂದ ಕೂಡಲೇ ಸರಕಾರ ಮತ್ತು ಉನ್ನತ ಅಧಿಕಾರಿಗಳು ನಮ್ಮ ಪರಿಸ್ಥಿತಿ ನೀಡಿ ಕನಿಷ್ಠ ಸಂಬಳವಾದರೂ ಜಾರಿ ಮಾಡಬೇಕು. ಗ್ರಂಥಾಲಯಗಳ ಸಮಯ ಬದಲಾವಣೆ ಮಾಡಬೇಕು. ಮೇಲ್ವಿಚಾರಕರು ಅಕಾಲಿಕ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಅನುಕಂಪದಲ್ಲಿ ಹುದ್ದೆ ಕೊಡಿ, ಆತ್ಮಹತ್ಯೆಗೆ ಯತ್ನಿಸಿರುವ ರೇವಣಕುಮಾರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆಯಲ್ಲಿ ಶ್ರೀಮಂತ ಗೌಂಡಿ, ಶರಣಪ್ಪ ಮಾವನೂರ, ಶಿವಶರಣಪ್ಪ ಕಾಳಗಿ, ಶರಣು ಪಟ್ಟಣ, ಮಲ್ಲಿಕಾರ್ಜುನ ಸೊನ್ನ, ಎಚ್.ವಿ.ಬಾಬನಕರ್, ಕಲಾವತಿ ಸಾವಳಗಿ, ನಾಗಮ್ಮ ಹೋಳಕುಂದಾ, ಪಾರ್ವತಿ ಬಂಕೂರು, ಜ್ಯೋತಿ ಕುಮಸಿ ಇತರರು ಇದ್ದರು.
ಕಳೆದ 30 ವರ್ಷಗಳಿಂದ ನಾವು ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮಗೆ ಸರಕಾರದಿಂದ ಸಂಬಳವೂ ಸೇರಿದಂತೆ ಯಾವುದೇ ಸೇವಾ ಭದ್ರತೆ ಇಲ್ಲ. ಕೊನೆ ಪಕ್ಷ ಕನಿಷ್ಠ ವೇತನವಾದರೂ ಕೊಡಿ ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಅದನ್ನು ಕೊಡುತ್ತಿಲ್ಲ. 2019ರ ಜೂನ್ 24ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆನೂರು ಗ್ರಾಪಂ ಮೇಲ್ವಿಚಾರಕ ಆರ್.ರೇವಣಕುಮಾರ ಆತ್ಮಹತ್ಯೆಗೆ ಯತ್ನಿಸಿರುವುದು ನಮ್ಮ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದಂತಿದೆ ಎಂದು ಮನವಿ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.
ನಾವು ಎಷ್ಟು ಅಪಾಯದ ಸ್ಥಿತಿಯಲ್ಲಿ ಇದ್ದೇವೆ ಎಂದರೆ, ಮಾಡು ಇಲ್ಲವೆ ಮಡಿ ನಮ್ಮ ಮುಂದಿನ ಆಯ್ಕೆಯಾಗಿದೆ. ಆದ್ದರಿಂದ ಕೂಡಲೇ ಸರಕಾರ ಮತ್ತು ಉನ್ನತ ಅಧಿಕಾರಿಗಳು ನಮ್ಮ ಪರಿಸ್ಥಿತಿ ನೀಡಿ ಕನಿಷ್ಠ ಸಂಬಳವಾದರೂ ಜಾರಿ ಮಾಡಬೇಕು. ಗ್ರಂಥಾಲಯಗಳ ಸಮಯ ಬದಲಾವಣೆ ಮಾಡಬೇಕು. ಮೇಲ್ವಿಚಾರಕರು ಅಕಾಲಿಕ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಅನುಕಂಪದಲ್ಲಿ ಹುದ್ದೆ ಕೊಡಿ, ಆತ್ಮಹತ್ಯೆಗೆ ಯತ್ನಿಸಿರುವ ರೇವಣಕುಮಾರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆಯಲ್ಲಿ ಶ್ರೀಮಂತ ಗೌಂಡಿ, ಶರಣಪ್ಪ ಮಾವನೂರ, ಶಿವಶರಣಪ್ಪ ಕಾಳಗಿ, ಶರಣು ಪಟ್ಟಣ, ಮಲ್ಲಿಕಾರ್ಜುನ ಸೊನ್ನ, ಎಚ್.ವಿ.ಬಾಬನಕರ್, ಕಲಾವತಿ ಸಾವಳಗಿ, ನಾಗಮ್ಮ ಹೋಳಕುಂದಾ, ಪಾರ್ವತಿ ಬಂಕೂರು, ಜ್ಯೋತಿ ಕುಮಸಿ ಇತರರು ಇದ್ದರು.