ಆ್ಯಪ್ನಗರ

'ಕಂದಾಯ ಬಾಕಿ' ವಸೂಲಿಗೆ ಡಿಸಿಗೆ ಪತ್ರ

ಇಲ್ಲಿನ ಖಾಜಾ ಎಜುಕೇಷನ್‌ ಸೊಸೈಟಿಯ ನಿವೃತ್ತ ನೌಕರ ಡಾ.ಎಂ.ಡಿ.ಸಯದುದ್ದೀನ್‌ ಅವರಿಗೆ ಸಂಸ್ಥೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ರೂ.8,61,566 ರೂ.ಉಪಧನವನ್ನು (ಗ್ರಾಚ್ಯುಯಿಟಿ) 'ಭೂ ಕಂದಾಯ ಬಾಕಿ' ಎಂದು ಪರಿಗಣಿಸಿ ವಸೂಲಿ ಮಾಡಿಕೊಡುವಂತೆ ಜಿಲ್ಲಾ ಉಪವಿಭಾಗದ ಕಾರ್ಮಿಕ ಅಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Vijaya Karnataka 23 May 2018, 4:53 pm
ಕಲಬುರಗಿ : ಇಲ್ಲಿನ ಖಾಜಾ ಎಜುಕೇಷನ್‌ ಸೊಸೈಟಿಯ ನಿವೃತ್ತ ನೌಕರ ಡಾ.ಎಂ.ಡಿ.ಸಯದುದ್ದೀನ್‌ ಅವರಿಗೆ ಸಂಸ್ಥೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ರೂ.8,61,566 ರೂ.ಉಪಧನವನ್ನು (ಗ್ರಾಚ್ಯುಯಿಟಿ) 'ಭೂ ಕಂದಾಯ ಬಾಕಿ' ಎಂದು ಪರಿಗಣಿಸಿ ವಸೂಲಿ ಮಾಡಿಕೊಡುವಂತೆ ಜಿಲ್ಲಾ ಉಪವಿಭಾಗದ ಕಾರ್ಮಿಕ ಅಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
Vijaya Karnataka Web revenue release is a letter to dc
'ಕಂದಾಯ ಬಾಕಿ' ವಸೂಲಿಗೆ ಡಿಸಿಗೆ ಪತ್ರ


ಡಾ.ಎಂ.ಡಿ. ಸಯದುದ್ದೀನ್‌ 1980 ರಿಂದ 2014ರವರೆಗೆ ಒಟ್ಟು 34 ವರ್ಷ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಹೀಗೆ ಸೇವೆ ಸಲ್ಲಿಸಿದ್ದರೂ ಅವರಿಗೆ ನಿವೃತ್ತಿ ನಂತರ ಸಿಗಬೇಕಿರುವ ಉಪಧನ ನೀಡದೆ ಸಂಸ್ಥೆ ನೀಡಲು ಮೀನಮೇಷ ಎಣಿಸುತ್ತಿದೆ. ಈ ಕುರಿತು ಅರ್ಜಿದಾರರು ನೀಡಿದ ದೂರಿನ ಮೇರೆಗೆ ವಿವಿಧ ಹಂತಗಳ ವಿಚಾರಣೆ ನಡೆಸಿದರೂ, ಪ್ರತಿವಾದಿ ಸಂಸ್ಥೆಯ ಕಾರ್ಯದರ್ಶಿಗಳು ಬಾಕಿ ಉಳಿಸಿಕೊಂಡಿರುವ ಉಪಧನ ಪಾವತಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಕರ್ನಾಟಕ ಭೂ ಕಂದಾಯ ಕಾಯದೆ ಕಲಂ 190ರ ಪ್ರಕಾರ ಬಾಕಿ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ