ಆ್ಯಪ್ನಗರ

ಕಲಬುರಗಿಯ ಪ್ರಮುಖ ಯೋಜನೆಗೆ ಬ್ರೇಕ್‌ ನೀಡಿದ ಕೇಂದ್ರ; ಕಲ್ಯಾಣದ ಅಭಿವೃದ್ಧಿಗೆ ಮತ್ತೊಂದು ಹೊಡೆತ

ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಸಂಪರ್ಕಿಸಲು ಅನುಕೂಲವಾಗುವ 1,481 ಕೋಟಿ ರೂ.ಗಳ ಬೈಪಾಸ್‌ ರಸ್ತೆ ನಿರ್ಮಾಣದ ಬಗ್ಗೆ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಕೇಳಿದ್ದರು. ಪ್ರಸ್ತಾವನೆ ವಾಪಸ್‌ ಕಳಿಸಲಾಗಿದೆ ಎಂಬ ಸಚಿವರ ಉತ್ತರ ತೀವ್ರ ನಿರಾಸೆ ಮೂಡಿಸಿದಂತಾಗಿದೆ.

Vijaya Karnataka 9 Dec 2021, 11:27 am
ಕಲಬುರಗಿ: ಕಲಬುರ್ಗಿ ನಗರದಲ್ಲಿ ಬೈಪಾಸ್‌ (ಸೆಕೆಂಡ್‌ ರಿಂಗ್‌ ರೋಡ್‌) ನಿರ್ಮಿಸುವಂತೆ ಕರ್ನಾಟಕ ಸರಕಾರ ಕಳುಹಿಸಿದ ಪ್ರಸ್ತಾವನೆಯನ್ನು ವಾಪಸ್‌ ಕಳುಹಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.
Vijaya Karnataka Web Nitin Gadkari


ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಗಡ್ಕರಿ, ‘ಕಲಬುರಗಿ ನಗರದ ಸುತ್ತ ಸಚಿವಾಲಯವು ಈಗಾಗಲೇ ರಿಂಗ್‌ ರೋಡ್‌ ನಿರ್ಮಿಸಿದೆ. ಬೈಪಾಸ್‌ ರಸ್ತೆ ನಿರ್ಮಿಸುವಂತೆ ರಾಜ್ಯದ ಲೋಕೋಪಯೋಗಿ ಇಲಾಖೆ 2018ರ ಸೆಪ್ಟೆಂಬರ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅಕ್ಟೋಬರ್‌ನಲ್ಲಿಯೇ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ವಾಪಸ್‌ ಕಳಿಸಲಾಗಿದೆ ಎಂದು ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.
ಒಡಿಶಾ - ಆಂಧ್ರದಂತೆ ಕಲ್ಯಾಣ ಕಲ್ಯಾಣಕ್ಕೂ ವಿಶೇಷ ಪ್ಯಾಕೇಜ್‌ ನೀಡಲು ಒತ್ತಡ..
‘ಮುಂದುವರಿದು, ಕಲಬುರಗಿ ಸುತ್ತ ರಿಂಗ್‌ ರೋಡ್‌ ಅನ್ನು ಎನ್‌ಎಚ್‌ನ ಗ್ರೀನ್‌ ಫೀಲ್ಡ್‌ ಅಲೈನ್‌ ಮೆಂಟ್‌ ಎಂದು ಘೋಷಿಸುವಂತೆ ರಾಜ್ಯ ಸರಕಾರ ಮನವಿ ಮಾಡಿದೆ. ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವಂತೆ ಕರ್ನಾಟಕ ಸರಕಾರ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಕೇಂದ್ರ ಸರಕಾರ ಇಂತಹ ಪ್ರಸ್ತಾವನೆಗಳನ್ನು ಸ್ವೀಕರಿಸುತ್ತಿದೆ. ಆದರೆ ಸಂಪರ್ಕದ ಅವಶ್ಯಕತೆ, ಅನುದಾನದ ಲಭ್ಯತೆ ಗಮನದಲ್ಲಿ ಇರಿಸಿಕೊಂಡು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಿದೆ’ ಎಂದಿದ್ದಾರೆ.

ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಸಂಪರ್ಕಿಸಲು ಅನುಕೂಲವಾಗುವ 1,481 ಕೋಟಿ ರೂ.ಗಳ ಬೈಪಾಸ್‌ ರಸ್ತೆ ನಿರ್ಮಾಣದ ಬಗ್ಗೆ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಕೇಳಿದ್ದರು. ಪ್ರಸ್ತಾವನೆ ವಾಪಸ್‌ ಕಳಿಸಲಾಗಿದೆ ಎಂಬ ಸಚಿವರ ಉತ್ತರ ತೀವ್ರ ನಿರಾಸೆ ಮೂಡಿಸಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ