ಆ್ಯಪ್ನಗರ

ರುಕ್ಮಿಣಿ ಪಾಂಡುರಂಗದೇವರ ಆಷಾಢ ಉತ್ಸವ

ಆಷಾಢ ಏಕಾದಶಿ ಪ್ರಯುಕ್ತ ಕಲಬುರಗಿಯ ಸ್ಟೇಶನ್‌ ಬಜಾರ್‌ ಬಡಾವಣೆಯಲ್ಲಿ ಮಂದಿರದಲ್ಲಿ ವಿಠಲ-ರುಕ್ಮಿಣಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 3 ಗಂಟೆಗೆ ಪಂಚಾಮೃತ ಸಹಿತ ಮಹಾವಿಶೇಷ ಪುಷ್ಪಾಲಂಕಾರ ಮಾಡಲಾಯಿತು. ಬೆಳಗ್ಗೆ 6ಕ್ಕೆ ಮಹಾಮಂಗಳಾರತಿ ದರ್ಶನ ಆರಂಭ ಮಾಡಲಾಯಿತು.

Vijaya Karnataka 13 Jul 2019, 5:00 am
ಕಲಬುರಗಿ:ಆಷಾಢ ಏಕಾದಶಿ ಪ್ರಯುಕ್ತ ಕಲಬುರಗಿಯ ಸ್ಟೇಶನ್‌ ಬಜಾರ್‌ ಬಡಾವಣೆಯಲ್ಲಿ ಮಂದಿರದಲ್ಲಿ ವಿಠಲ-ರುಕ್ಮಿಣಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 3 ಗಂಟೆಗೆ ಪಂಚಾಮೃತ ಸಹಿತ ಮಹಾವಿಶೇಷ ಪುಷ್ಪಾಲಂಕಾರ ಮಾಡಲಾಯಿತು. ಬೆಳಗ್ಗೆ 6ಕ್ಕೆ ಮಹಾಮಂಗಳಾರತಿ ದರ್ಶನ ಆರಂಭ ಮಾಡಲಾಯಿತು.
Vijaya Karnataka Web rukmini panduranga devas festival
ರುಕ್ಮಿಣಿ ಪಾಂಡುರಂಗದೇವರ ಆಷಾಢ ಉತ್ಸವ

ಬೆಳಗ್ಗೆ 10ರಿಂದ ವಿವಿಧ ಭಜನಾ ಮಂಡಳಿಗಳಿಂದ ರಾತ್ರಿ 9ರ ತನಕ ಭಜನೆ ಕಾರ್ಯಕ್ರಮಗಳು ನಡೆದವು. ರಾತ್ರಿ 12ಕ್ಕೆ ಮಹಾ ಮಂಗಳಾರತಿ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು, ಪ್ರಸಾದ ಸೇವಿಸಿದರು. ದತ್ತಾತ್ರೇಯ ಕೆ. ಜೇವರ್ಗಿ, ಉಮೇಶ್‌ ಜೋಶಿ ಮುಂತಾದವರು ಇದ್ದರು.

ಬ್ರಹ್ಮಪುರದಲ್ಲಿ ರುಕ್ಮಿಣಿ ಪಾಂಡುರಂಗದೇವರ ಆಷಾಢ ಉತ್ಸವ ಮತ್ತು ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಜರುಗಿತು. ಕಾರ್ಯಕ್ರಮದ ಪ್ರಯುಕ್ತ ಜುಲೈ 17ರವರೆಗೆ ಶ್ರೀ ಪಂಡಿತ ಅಭಯಾಚಾರ್ಯ ಪಾಟೀಲ್‌ ಅವರಿಂದ ಭಾಗವತ ಸಪ್ತಾಹ ಮಹೋತ್ಸವ ಪ್ರವಚನ ಆರಂಭವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ