ಆ್ಯಪ್ನಗರ

ರುಮ್ಮನಗೂಡ ಗ್ರಾಪಂ ಚುನಾವಣೆ:ಕಾಂಗ್ರೆಸ್‌ ವಿಜಯೋತ್ಸವ

ರುಮ್ಮನಗೂಡ ಗ್ರಾಮ ಪಂಚಾಯಿತಿಯಲ್ಲಿ ತೆರವಾದ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 7 ಜನ ಕಾಂಗ್ರೆಸ್‌ ಬೆಂಬಲಿಗರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಚಂದಾಪುರನಲ್ಲಿರುವ ಶಾಸಕ ಡಾ.ಉಮೇಶ ಜಾಧವ ಅವರ ನಿವಾಸ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Vijaya Karnataka 5 Jan 2019, 5:00 am
ಚಿಂಚೋಳಿ :ತಾಲೂಕಿನ ರುಮ್ಮನಗೂಡ ಗ್ರಾಮ ಪಂಚಾಯಿತಿಯಲ್ಲಿ ತೆರವಾದ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 7 ಜನ ಕಾಂಗ್ರೆಸ್‌ ಬೆಂಬಲಿಗರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಚಂದಾಪುರನಲ್ಲಿರುವ ಶಾಸಕ ಡಾ.ಉಮೇಶ ಜಾಧವ ಅವರ ನಿವಾಸ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
Vijaya Karnataka Web rumanaguda gram panchayat election congress triumph
ರುಮ್ಮನಗೂಡ ಗ್ರಾಪಂ ಚುನಾವಣೆ:ಕಾಂಗ್ರೆಸ್‌ ವಿಜಯೋತ್ಸವ


ರಾಮಚಂದ್ರ ಜಾಧವ ಮಾತನಾಡಿ, ಚಿಂಚೋಳಿ ಮತಕ್ಷೇತ್ರದ ಜನರು ಸತತ ಎರಡು ಬಾರಿ ಶಾಸಕ ಡಾ.ಉಮೇಶ ಜಾಧವ ಅವರಿಗೆ ಗೆಲ್ಲಿಸಿ ದ್ದಾರೆ. ಮತದಾರ ನಿರೀಕ್ಷೆಯಂತೆ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಅವರ ಅಭಿವೃದ್ಧಿ ಕಂಡ ಮತದಾರರು ಇನ್ನು ಹೆಚ್ಚಿನ ಅಭಿವೃದ್ಧಿಗಾಗಿ ರುಮ್ಮನಗೂಡ ಗ್ರಾಪಂನಲ್ಲಿ 10 ಸ್ಥಾನಗಳಲ್ಲಿ 7 ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರಿಗೆ ಗೆಲುವು ಸಾಧಿಸಿದ್ದಾರೆ ಎಂದರು.

ನೂತನ ಆಯ್ಕೆಗೊಂಡ ಗ್ರಾಪಂ ಸದಸ್ಯರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನರಿಗೆ ಸೌಲಭ್ಯಗಳು ಒದಗಿಸಿ ಕೊಡುವಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕೆಎಂ ಬಾರಿ, ಅಮರ್‌ ಲೊಡ್ಡನೋರ, ಸಂತೋಷ ಗುತ್ತೇದಾರ, ಗೋಪಾಲರಾವ ಕಟ್ಟಿಮನಿ, ರಾಮಶೆಟ್ಟಿ ಪವಾರ, ಬಸವನಗೌಡ ಪಾಟೀಲ್‌ ಹೂಡದಳ್ಳಿ, ಉಮಾ ಪಾಟೀಲ್‌, ಶ್ರೀನಿವಾಸ ಚಿಂಚೋಳಿ, ರಾಜು ನವಲೆ, ರಾಜು ಪವಾರ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ