ಆ್ಯಪ್ನಗರ

ದುಬೈನಲ್ಲಿ ರಾಜ್ಯದ ವ್ಯಕ್ತಿ ನಿಧನ; ಮೃತದೇಹ ತರಲು ಪರದಾಟ

ಶಹಾಪುರ ತಾಲೂಕಿನ ಗೋಗಿ ಗ್ರಾಮದ ನಿವಾಸಿ ಸದಾನಂದ ನರಿಬೋಳಿ (60) ಅವರು ದುಬೈನಲ್ಲಿ ಅಸುನೀಗಿದ್ದಾರೆ. ಟೇಲರಿಂಗ್ ಮಾಡುತ್ತಿದ್ದ ಅವರು ಕಳೆದ ಮೂವತ್ತು ವರ್ಷಗಳಿಂದ ವಾಸಿಸುತ್ತಿದ್ದರು. ಇವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ, ಪತ್ನಿ ಇದ್ದಾರೆ.

ವಿಕ ಸುದ್ದಿಲೋಕ 11 Jul 2017, 11:03 pm
ಯಾದಗಿರಿ: ಶಹಾಪುರ ತಾಲೂಕಿನ ಗೋಗಿ ಗ್ರಾಮದ ನಿವಾಸಿ ಸದಾನಂದ ನರಿಬೋಳಿ (60) ಅವರು ದುಬೈನಲ್ಲಿ ಅಸುನೀಗಿದ್ದಾರೆ. ಟೇಲರಿಂಗ್ ಮಾಡುತ್ತಿದ್ದ ಅವರು ಕಳೆದ ಮೂವತ್ತು ವರ್ಷಗಳಿಂದ ವಾಸಿಸುತ್ತಿದ್ದರು. ಇವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ, ಪತ್ನಿ ಇದ್ದಾರೆ.
Vijaya Karnataka Web shahapur person died dubai unable to bring body
ದುಬೈನಲ್ಲಿ ರಾಜ್ಯದ ವ್ಯಕ್ತಿ ನಿಧನ; ಮೃತದೇಹ ತರಲು ಪರದಾಟ


ಇತ್ತೀಚೆಗೆ 2016ರ ಮಾಚ್ 9ರಂದು ಬಂದಿದ್ದರು. ಜುಲೈ 9ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಗೋಗಿ ಗ್ರಾಮದ ಕೆಲವರು ಅಲ್ಲಿಯೇ ಇದ್ದಾರೆ. ಅವರು ನಿಧನರಾಗಿರುವ ಮಾಹಿತಿಯನ್ನು ತಿಳಿಸಿದ್ದಾರೆ‌.

ಇದಲ್ಲದೇ ವೈದ್ಯಕೀಯ ನಿಯಮಗಳು ಇನ್ನೂ ಪೂರ್ತಿಯಾಗದ ಹಿನ್ನೆಲೆ ಮೃತದೇಹ ಊರಿಗೆ ತರಲು ಆಗಿತ್ತಿಲ್ಲ. ದುಬೈನ ಆಸ್ಪತ್ರೆಯಲ್ಲಿ ಮೃತದೇಹವಿದೆ. ಹೀಗಾಗಿ ಕುಟುಂಬದಲ್ಲಿ ಎಲ್ಲೆಡೆ ಆತಂಕ ಮನೆ ಮಾಡಿದೆ. ಮೂರು ದಿನಗಳಿಂದಲೂ ದುಬೈನಿಂದ ಸರಿಯಾದ ಮಾಹಿತಿ ಸಿಗದೆ ಕುಟುಂಬಿಕರು ಪರದಾಡುವಂತಾಗಿದೆ.

ಇದಲ್ಲದೆ ಏಜೆಂಟ್ ಅವರು ಕೂಡ ಇವರ ಸಂಪರ್ಕಕ್ಕೆ ಬಂದಿಲ್ಲ. ಕುಟುಂಬದಲ್ಲಿ ಬಡತನ ಇರುವ ಹಿನ್ನೆಲೆ ಹಣ ಕೂಡ ಹೊಂದಿಸಲು ಆಗುತ್ತಿಲ್ಲ. ಹೀಗಾಗಿ ಮೃತ ದೇಹಕ್ಕಾಗಿ ಕಾಯುವಂತಾಗಿದೆ. ಮನೆಯಲ್ಲಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳು ತಂದೆ ದೇಹಕ್ಕಾಗಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರ ಕುಟುಂಬಸ್ಥರ ನೆರವಿಗೆ ಬಂದರೇ ಅನುಕೂಲವಾಗುತ್ತದೆ ಎಂಬುದು ಮನೆಯವರ ಅಳಲು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ