ಆ್ಯಪ್ನಗರ

ಕಲಬುರಗಿಯಲ್ಲಿ ಶೂಟೌಟ್‌: ರೌಡಿ ಸೆರೆ

ಕಲಬುರಗಿಯ ಸರಟಗಿ ಗಾಡರ್ನ್ ಹತ್ತಿರ ಶೂಟೌಟ್ ನಡೆದಿದ್ದು, ರೌಡಿ ಸೆರೆಯಾಗಿದ್ದಾನೆ.

Vijaya Karnataka Web 10 Jan 2018, 11:53 am
ಕಲಬುರಗಿ: ನಗರದ ಹೊರವಲಯದ ಕೆಸರಟಗಿ ಗಾಡರ್ನ್ ಹತ್ತಿರ ಬೆಳಗ್ಗೆ ಶೂಟೌಟ್ ನಡೆದಿದೆ. ಕಡಬೂರು ಮಲ್ಯಾ ಅಲಿಯಾಸ್ ಮಲ್ಲಿಕಾರ್ಜುನ ಎಂಬಾತ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಬಂಧಿತ ಕಡಬೂರು ಮಲ್ಯಾ ಅಲಿಯಾಸ್ ಮಲ್ಲಿಕಾರ್ಜುನ ಇತ್ತೀಚೆಗೆ ಎನ್ ಕೌಂಟರ್‌ನಲ್ಲಿ ಹತನಾದ ಕರಿಚಿರತೆಯ ಜತೆಗೂಡಿ ಹಲವು ದುಷ್ಕೃತ್ಯ ನಡೆಸಿದ್ದ.
Vijaya Karnataka Web shootout in kalburgi
ಕಲಬುರಗಿಯಲ್ಲಿ ಶೂಟೌಟ್‌: ರೌಡಿ ಸೆರೆ


ಈತ ನಂದೂರ್ ಕೆ ಗ್ರಾಮದ ನಿವಾಸಿ. ಈತನ ಮೇಲೆ ಒಂಬತ್ತು ಕೊಲೆ,ದರೋಡೆ, ಅಕ್ರಮ ಶಸ್ತ್ರಾಸ್ತ್ರ, ನಾಡ ಬಂದೂಕು ಸೇರಿದಂತೆ ಒಂಬತ್ತು ಪ್ರಕರಣಗಳಿದ್ದವು. ಹೀಗಾಗಿ ಬಂಧಿಸಲು ಪೊಲೀಸರು ಯೋಜನೆ ಹಾಕಿದ್ದರು. ಕಳೆದ ರಾತ್ರಿ ಕೆಸರಟಗಿ ಬಳಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಲು ಹೋಗಿದ್ದರು.

ಆದರೆ ಪೊಲೀಸರ ಮೇಲೆ ಬಿಯರ್ ಬಾಟಲ್ ಮತ್ತು ಮಚ್ಚಿನಿಂದ್ ಹಲ್ಲೆ ಮಾಡಿ ಪರಾರಿಯಾಗಲು ಮುಂದಾದ. ಹೀಗಾಗಿ ಆತ್ಮರಕ್ಷಣೆಗಾಗಿ ಪಿಎಸ್ಐ ಪರಶುರಾಮ ಆರೋಪಿಯ ಕೈ ಮತ್ತು ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಅನಿಲ್ ಮತ್ತು ವಿಶ್ವನಾಥ್ ಎನ್ನುವ ಇಬ್ಬರು ಪೇದೆಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ