ಆ್ಯಪ್ನಗರ

ಪ್ರಶಸ್ತಿ ವಾಪಸ್ ಕೊಟ್ಟರೆ, ವಿನಃ ಹಣ ಕೊಡಲಿಲ್ಲ ಸೋ ಕಾಲ್ಡ ಸಾಹಿತಿಗಳು: ಸಿದ್ದಲಿಂಗ ಸ್ವಾಮಿ

ಈ ದೇಶದಲ್ಲಿ ಸಾಹಿತಿಗಳು ಅನ್ನಿಸಿಕೊಂಡವರು, ಬುದ್ಧಿಜೀವಿಗಳು ಅನ್ನಿಸಿಕೊಂಡವರು ಸರಕಾರ ನೀಡುವ ಪ್ರಶಸ್ತಿಗಳನ್ನು ವಾಪಸು ಕೊಡುವ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ.

Vijaya Karnataka Web 4 Jul 2019, 3:17 pm
ಕಲಬುರಗಿ: ತಮ್ಮ ಹೆಸರು ಫೇಮಸ್ ಮಾಡಿಕೊಳ್ಳಲು ಸೋ ಕಾಲ್ಡ್ ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಸರಕಾರ ನೀಡಿರುವ ಪ್ರಶಸ್ತಿಗಳನ್ನು ವಾಪಸ್ಸು ಕೊಟ್ಟು ತಾವು ಭಾರಿ ಎಂದು ತೋರಿಸಿಕೊಂಡರೆ, ವಿನಃ ಸರಕಾರ ಕೊಟ್ಟಿರುವ ಹಣ ವಾಪಸು ಕೊಟ್ಟಿಲ್ಲ ಎಂದು ಆಂದೋಲದ ಸಿದ್ದಲಿಂಗ ಮಹಾಸ್ವಾಮಿಗಳು ಛೇಡಿಸಿದ್ದಾರೆ.
Vijaya Karnataka Web siddaling swamy


ನಗರದ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ಜೈ ಕರ್ನಾಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ರತ್ನ ಮತ್ತು ವಿವಿಧ ಸಾಧಕರಿಗೆ ನೀಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಸಾಹಿತಿಗಳು ಅನ್ನಿಸಿಕೊಂಡವರು, ಬುದ್ಧಿಜೀವಿಗಳು ಅನ್ನಿಸಿಕೊಂಡವರು ಸರಕಾರ ನೀಡುವ ಪ್ರಶಸ್ತಿಗಳನ್ನು ವಾಪಸು ಕೊಡುವ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಹಿಂದೊಮ್ಮೆ ಬ್ರಿಟಿಷರು ನೀಡಿದ್ದ ಸರ್ ಎನ್ನುವ ಪ್ರಶಸ್ತಿಯನ್ನು ಜಲಿಯಾನ್ ವಾಲಾ ಭಾಗ ಹತ್ಯೆಯ ನಂತರ ಘಟನೆಯನ್ನು ಖಂಡಿಸಿ ಡಾಕ್ಟರ್ ರವೀಂದ್ರನಾಥ ಟ್ಯಾಗೋರ್ ಅವರು ವಾಪಸ್ಸು ಕೊಟ್ಟಿದ್ದರು. ಅದು ನಿಜಕ್ಕೂ ಶ್ರೇಷ್ಠವಾದ ಕಾರಣವಾಗಿದೆ. ಆದರೆ, ಈಗ ತಮ್ಮ ವೇಳೆ ಬೆಳೆಸಿಬೇಯಿಸಿಕೊಳ್ಳಲು ಸರಕಾರ ನೀಡಿದ ಪ್ರಶಸ್ತಿಗಳನ್ನು ವಾಪಸ್ಸು ಕೊಡುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಪ್ರಶ್ನಿಸಿದರು.

ಇದೇ ವೇಳೆ ಪ್ರಶಸ್ತಿ ಪಡೆಯುವ ವಿದ್ಯಾರ್ಥಿ ರತ್ನಗಳು ದೇಶದ ನಾಡಿನ ಸ್ವಾಸ್ಥ್ಯ ಕಾಪಾಡಿಕೊಂಡು ಭವಿಷ್ಯವನ್ನು ಉಜ್ವಲವಾಗಿ ಬೆಳಗಬೇಕೆಂದು ಕರೆ ನೀಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ವಿಶೇಷ ಮ್ಯಾನರಿಸಂ ಮೂಲಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಟಾರ್ಗೆಟ್ ಮಾಡಿ ಗಮನ ಸೆಳೆದಿದ್ದ ಅಫಜಲಪುರದ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಕೂಡಾ ಸಿರಿವಂತನಾದರೂ ಕನ್ನಡ ನಾಡಲ್ಲೆ ಮಡಿವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಇರುವೆ ಎನ್ನುವ ಹಾಡನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ