ಆ್ಯಪ್ನಗರ

ಅಮೆರಿಕದಲ್ಲಿ 73 ಲಕ್ಷದ ಕೆಲಸ ಬಿಟ್ಟು ಹುಟ್ಟೂರಿಗೆ ಬಂದ ಇಂಜಿನಿಯರ್‌, ಕಲಬುರಗಿಯಲ್ಲಿ ಕೃಷಿ ಕ್ರಾಂತಿ!

ಎರಡು ವರ್ಷಗಳ ಹಿಂದೆ ಆರಂಭಿಸಿದ ಕೃಷಿಯಿಂದ ​​ಇವರು ಕ್ರಾಂತಿಯೇ ಮಾಡಿದ್ದಾರೆ. ಮೂಲತಃ ಕಲಬುರಗಿ ಜಿಲ್ಲೆಯ ಶೆಲಗಿಯ ಸತೀಶ್‌ ಕುಮಾರ್‌ ಮೆಕ್ಕೆ ಜೋಳ ಕೃಷಿ ಮಾಡಿದ್ದು ಭರ್ಜರಿ ಲಾಭ ಪಡೆಯುತ್ತಿದ್ದಾರೆ. ಅಮೆರಿಕ, ದುಬಾಯಿ ಸೇರಿ ವಿವಿಧೆಡೆ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದ ಸತೀಶ್‌ ಬರೋಬ್ಬರಿ 73 ಲಕ್ಷದಷ್ಟು ಸಂಬಳ ಜೇಬಿಗೆ ಇಳಿಸಿಕೊಳ್ಳುತ್ತಿದ್ದರು ಆದರೆ ದಿನನಿತ್ಯದ ಕೆಲಸದಿಂದ ರೋಸಿ ಹೋಗಿದ್ದ ಸತೀಶ್‌ ತಮ್ಮೂರೇ ತಮಗೆ ಮೇಲು ಎಂದು ಬ್ಯಾಗ್‌ ಎತ್ತಿಕೊಂಡು ನೇರವಾಗಿ ಕಲಬುರಗಿಗೆ ಹೊರಟಿದ್ದಾರೆ.

Agencies 7 Sep 2020, 9:13 am
ಕಲಬುರಗಿ: ಒಂದೆಡೆ ಕೃಷಿ ಬಿಟ್ಟು ಉದ್ಯೋಗಕ್ಕಾಗಿ ನಗರದತ್ತ ಯುವ ಸಮುದಾಯ ವಲಸೆ ಹೋಗುತ್ತಿದ್ದರೆ, ಇನ್ನೊಂದೆಡೆ ನಗರದಲ್ಲಿ ಕೈ ತುಂಬ ಸಂಬಳ ಪಡೆಯುವ ಯುವ ಜನತೆ ಕೆಲಸ ತೊರೆದು ಕೃಷಿಗಿಳಿಯುತ್ತಿದ್ದಾರೆ ಎನ್ನುವ ವರದಿಗಳು ನೋಡುತ್ತಿರುವ ಮಧ್ಯೆಯೇ ವರ್ಷಕ್ಕೆ ಬರೋಬ್ಬರಿ 73 ಲಕ್ಷ ವೇತನ ಪಡೆಯುತ್ತಿದ್ದ ಸಾಫ್ಟ್‌ವೇರ್‌ ಇಂಜಿನಿಯರೊಬ್ಬರು ಅಮೆರಿಕದಿಂದ ಕೆಲಸ ಬಿಟ್ಟು ಇದೀಗ ತಮ್ಮ ಹುಟ್ಟೂರಾದ ಕಲಬುರಗಿಗೆ ಬಂದು ಕೃಷಿ ಮಾಡುತ್ತಿದ್ದಾರೆ.
Vijaya Karnataka Web EhRSCHKVgAAjkSh


ಎರಡು ವರ್ಷಗಳ ಹಿಂದೆ ಕೆಲಸ ಬಿಟ್ಟು ತನ್ನ ಊರಿಗೆ ಬಂದು ಆರಂಭಿಸಿದ ಕೃಷಿಯಿಂದ ಇವರು ಕ್ರಾಂತಿಯೇ ಮಾಡಿದ್ದಾರೆ. ಮೂಲತಃ ಕಲಬುರಗಿ ಜಿಲ್ಲೆಯ ಶೆಲಗಿಯ ಸತೀಶ್‌ ಕುಮಾರ್‌ ಮೆಕ್ಕೆ ಜೋಳ ಕೃಷಿ ಮಾಡಿದ್ದು ಭರ್ಜರಿ ಲಾಭ ಪಡೆಯುತ್ತಿದ್ದಾರೆ. ಅಮೆರಿಕ, ದುಬಾಯಿ ಸೇರಿ ವಿವಿಧೆಡೆ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದ ಸತೀಶ್‌ ಬರೋಬ್ಬರಿ 73 ಲಕ್ಷದಷ್ಟು ಸಂಬಳ ಜೇಬಿಗೆ ಇಳಿಸಿಕೊಳ್ಳುತ್ತಿದ್ದರು ಆದರೆ ದಿನನಿತ್ಯದ ಕೆಲಸದಿಂದ ರೋಸಿ ಹೋಗಿದ್ದ ಸತೀಶ್‌ ತಮ್ಮೂರೇ ತಮಗೆ ಮೇಲು ಎಂದು ಬ್ಯಾಗ್‌ ಎತ್ತಿಕೊಂಡು ನೇರವಾಗಿ ಕಲಬುರಗಿಗೆ ಹೊರಟಿದ್ದರು.


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್‌, ನಾನು ಅಮೆರಿಕ, ದುಬಾಯಿನಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡಿದ್ದೆ. ಈ ಕೆಲಸ ಹೆಚ್ಚಿನ ಸವಾಲುಗಳಿಲ್ಲ ಎಂದು ನನಗೆ ಅನಿಸಿತ್ತು. ಅಲ್ಲದೆ ಈ ಕೆಲಸದಿಂದ ನನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನನ್ನ ಊರಿಗೆ ಮರಳಲು ನಿರ್ಧರಿಸಿದೆ. ಹೀಗಾಗಿ ಎರಡು ತಿಂಗಳ ಹಿಂದೆ ಹಳ್ಳಿಗೆ ಬಂದೆ. ಕೃಷಿ ಪ್ರಾರಂಭಿಸಿದೆ. ಕಳೆದ ತಿಂಗಳು, ನಾನು 2 ಎಕರೆ ಭೂಮಿಯಲ್ಲಿ ಬೆಳೆಸಿದ ಜೋಳವನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಿದ್ದೇನೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ