ಆ್ಯಪ್ನಗರ

ತಂದೆ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ

ಕಲಬುರಗಿ ತಾಲೂಕಿನ ನರೋಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲಗುಂದಾ ಗ್ರಾಮದಲ್ಲಿ ಕುಡಿಯಲು ಹಣ ಕೊಡದ ತಂದೆಯನ್ನು ಕೊಚ್ಚಿ ಕೊಂದಿದ್ದ ಮಗನಿಗೆ ಕಲಬುರಗಿ 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Vijaya Karnataka 2 May 2018, 5:32 pm
ಕಲಬುರಗಿ : ಕಲಬುರಗಿ ತಾಲೂಕಿನ ನರೋಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲಗುಂದಾ ಗ್ರಾಮದಲ್ಲಿ ಕುಡಿಯಲು ಹಣ ಕೊಡದ ತಂದೆಯನ್ನು ಕೊಚ್ಚಿ ಕೊಂದಿದ್ದ ಮಗನಿಗೆ ಕಲಬುರಗಿ 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
Vijaya Karnataka Web son who killed his father was sentenced to life imprisonment
ತಂದೆ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ


2016ರಲ್ಲಿ ರಾತ್ರಿ ಮಗ ಸಂಜುಕುಮಾರ ಪೊಲೀಸ್‌ ಬಿರಾದಾರ ತನ್ನ ತಂದೆ ಸೋಮಶೇಖರ ಪೊಲೀಸ್‌ ಬಿರಾದಾರಗೆ ಮದ್ಯ ಕುಡಿಯಲು ಹಣ ಕೇಳುತ್ತಾನೆ. ಆಗ ತಂದೆ ಹಣ ಕೊಡದೇ ಇದ್ದಾಗ ಸಿಟ್ಟಿಗೆದ್ದ ಸಂಜುಕುಮಾರ, ದೊಡ್ಡ ಕಲ್ಲು ಎತ್ತಿ ಹಾಕಿ ತಂದೆಯನ್ನು ಕೊಲ್ಲುತ್ತಾನೆ. ಈ ವೇಳೆಯಲ್ಲಿ ಜಗಳ ಬಿಡಿಸಲು ಬಂದಿದ್ದ ಸೂರ್ಯಕಾಂತ ಶಂಕ್ರೆಪ್ಪಾ, ಶಂಕ್ರೆಪ್ಪಾ ಆದೆಪ್ಪಾ, ಸುವರ್ಣ ಶಿವಕುಮಾರ ಅವರಿಗೆ ಹೊಡೆದು ಗಾಯ ಮಾಡುತ್ತಾನೆ. ಅಲ್ಲದೆ, ಚಂದಮ್ಮ ಶಂಕ್ರೆಪ್ಪಾ ಅವರಿಗೆ ಗಂಭೀರ ಗಾಯ ಮಾಡಿ ಪರಾರಿಯಾಗುತ್ತಾನೆ.

ಈ ಕುರಿತು ನರೋಣಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಸಿಪಿಐ ಬಾಸು ಚವ್ಹಾಣ ತನಿಖೆ ವೇಳೆಯಲ್ಲಿ 21 ಸಾಕ್ಷಿಗಳನ್ನು ಹೆಸರಿಸುತ್ತಾರೆ. ಈ ಎಲ್ಲಾ ಸಾಕ್ಷಿಗಳ ವಿಚಾರಣೆಯ ಬಳಿಕ ಅಪರಾಧ ರುಜುವಾತಾಗಿ, 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಎಸ್‌.ನಾಯಕ ಅವರು, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 5ಸಾವಿರ ಜಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕರಾಗಿ ಬಲಭೀಮ ಮದನಸೂರೆ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ