ಕಲಬುರಗಿ :ತೀವ್ರ ಕುತೂಹಲ ಉಂಟು ಮಾಡಿದ್ದ 2019ರ ಕೇಂದ್ರ ಬಜೆಟ್ನಲ್ಲಿ ಹೈದರಾಬಾದ್ ಕರ್ನಾಟಕದ ಯೋಜನೆಗಳ ಬಗ್ಗೆ ಪ್ರಸ್ತಾಪಿಸದಿರುವುದು ಈ ಭಾಗದ ಜನರಿಗೆ ತೀವ್ರ ನಿರಾಸೆ ವ್ಯಕ್ತವಾಗಿದೆ.
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಈ ಭಾಗದ ಪ್ರಮುಖ ಬೇಡಿಕೆಗಳಾದ ಕಲಬುರಗಿ ರೈಲ್ವೆ ಡಿವಿಷನ್ಗೆ ಅನುದಾನ ನೀಡುವುದು, ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ವಿಶೇಷ ಪ್ಯಾಕೇಜ್ ಸಿಗಬಹುದು, 2014ರಲ್ಲಿ ಯುಪಿಎ ಸರಕಾರ ಘೋಷಿಸಿದ್ದ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನಿಮ್ಜ್)ಕ್ಕೆ ಹಣ ನೀಡಿ ಚಾಲನೆ ನೀಡುವುದು, ಮುಖ್ಯವಾಗಿ ತೊಗರಿಗೆ ಆಮದು ಸುಂಕ ವಿಧಿಸಿ ತೊಗರಿ ಬೆಳೆಗಾರರ ಹಿತರಕ್ಷಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ ಈ ಬೇಡಿಕೆಗಳು ಬಜೆಟ್ನಲ್ಲಿ ಸ್ಥಾನವೇ ಸಿಗಲಿಲ್ಲ. ಕೇಂದ್ರದ ಈ ಕ್ರಮ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ನಿರಾಸೆ:
ಈ ಹಿಂದೆ ಕಲಬುರಗಿಯಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಿದ್ದರು. ಈ ಕಾರಣಕ್ಕೆ ಕಲಬುರಗಿಗೆ ಬಜೆಟ್ ಆಗಲಿ, ಹೊಸ ಯೋಜನೆಗಳಾಗಲಿ ಕೊಡಲಿಲ್ಲ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೆ ಈಗ ಡಾ. ಉಮೇಶ್ ಜಾಧವ್ ಬಿಜೆಪಿಯಿಂದಲೇ ಆಯ್ಕೆಯಾಗಿದ್ದರೂ ಕೇಂದ್ರ ಕಣ್ಣೆತ್ತಿಯೂ ನೋಡಲಿಲ್ಲ. ಮತ ಹಾಕಿ ಆಯ್ಕೆ ಮಾಡಿದ ಜನರಿಗೆ ಸಹಜವಾಗಿಯೇ ಆಕ್ರೋಶ ಉಂಟು ಮಾಡಿದೆ.
ಯುಪಿಎ ಸರಕಾರದ ಅವಧಿಯಲ್ಲಿ ರೈಲ್ವೆ ಡಿವಿಷನ್ ಘೋಷಿಸಲಾಗಿತ್ತು. ಪ್ರಾಥಮಿಕವಾಗಿ 5 ಕೋಟಿ ಘೋಷಿಸಿದ್ದರೂ 1 ಲಕ್ಷ ರೂ. ನೀಡಲಾಗಿತ್ತು. ಆದರೆ ಯೋಜನೆಗೆ ಹಣ ನೀಡದೇ ಇದ್ದರಿಂದ ಯೋಜನೆ ಮೇಲೇಳಲೇ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರೂ ಮೊದಲ ಬಜೆಟ್ನಲ್ಲಿ ನಿರಾಸೆ ಮೂಡಿಸಿದಂತಾಗಿದೆ.
ಇದೊಂದು ಉತ್ತಮ ಬಜೆಟ್. ಎಂಎಸ್ಎಂಇಗೆ ಸಬ್ಸಿಡಿ ಹೆಚ್ಚಿಸಿರುವುದು, ಸ್ಟಾರ್ಟ್ಪ್- ಮೇಕ ಇನ್ ಇಂಡಿಯಾಗೆ ಆದ್ಯತೆ ನೀಡಿರುವುದರಿಂದ ಯುವ ಉದ್ಯಮಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮೂಲಸೌಲಭ್ಯಗಳಿಗೆ ಹೆಚ್ಚು ಅನುದಾನ ನೀಡಿದ್ದು ಅಭಿವೃದ್ಧಿ ಸೂಚಕ. ತೊಗರಿ ಆಮದು ಮೇಲೆ ಸುಂಕ ವಿಧಿಸಬೇಕಿತ್ತು. ಹೈಕ ಮಂಡಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕಿತ್ತು.
-ಉಮಾಕಾಂತ ನಿಗ್ಗುಡಗಿ, ಉದ್ಯಮಿ, ಕಲಬುರಗಿ
ಹೈಕ ಭಾಗಕ್ಕೆ ಯಾವ ಕೊಡುಗೆಯೂ ಕೊಟ್ಟಿಲ್ಲ. ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸದೇ ಜಿಲ್ಲೆಯ ಮತದಾರರಿಗೆ ಬಿಜೆಪಿ ವಂಚನೆ ಮಾಡಿದೆ. ಬಿಜೆಪಿ ಜನರಿಗೆ ಸುಳ್ಳು ಭರವಸೆ ನೀಡುತ್ತದೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಬಜೆಟ್ನಲ್ಲಿ ಇದು ದೃಢಪಟ್ಟಿದೆ. ಇದು ಹೈಕ ಜನವಿರೋಧಿ ಬಜೆಟ್
-ಜಗದೇವ ಗುತ್ತೇದಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕಲಬುರಗಿ
ಮನೆ ನಿರ್ಮಾಣ, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಫೇಸ್-3ಗೆ ಹೆಚ್ಚು ಹಣ ನೀಡಿರುವುದು ಗ್ರಾಮೀಣ ರಸ್ತೆ ಸುಧಾರಣೆಯಾಗಲಿವೆ. ಇದೊಂದು ಅಭಿವೃದ್ಧಿಪರ ಬಜೆಟ್. ಎಲ್ಲ ವರ್ಗದ ಜನರ ಏಳಿಗೆ ಮಾಡುವ ಬಜೆಟ್. ಕಲಬುರಗಿ ಸೇರಿ ಹೈಕ ಭಾಗದ ಯೋಜನೆಗಳ ಜಾರಿ ಸಂಬಂಧ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಲಾಗುವುದು. ಶೀಘ್ರವೇ ಈ ಭಾಗದ ಶಾಸಕರು, ಸಂಸದರು, ಪಕ್ಷದ ಮುಖಂಡರು ಕೇಂದ್ರ ಸರಕಾರದ ಬಳಿ ನಿಯೋಗ ಹೋಗಲಾಗುವುದು.
-ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಜಿಲ್ಲಾ ಬಿಜೆಪಿ ಅಧ್ಯಕ್ಷ, ಕಲಬುರಗಿ
ಕೇಂದ್ರ ಬಜೆಟ್ನಲ್ಲಿ ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ ನೀಡಲಾಗಿದೆ. ಸ್ವಚ್ಛ ಭಾರತ ಅಭಿಯಾನಯಡಿ 9.6 ಕೋಟಿ ಶೌಚಾಲಯಗಳ ನಿರ್ಮಾಣ, ಗ್ರಾಮ ಪಂಚಾಯಿತಿಗಳಿಗೆ ಇಂಟರ್ನೆಟ್ ಹಾಗೂ ಡಿಜಿಟಲ್ ವ್ಯಾಪ್ತಿಗೆ ತರುವ ವ್ಯವಸ್ಥೆಯ ಆಶ್ವಾಸನೆ ಉತ್ತಮ ಕಾರ್ಯ. ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಏಕರೀತಿಯ ಜೀವನಕ್ಕೆ ಒತ್ತು ನೀಡಲಾಗಿದೆ.
-ರಶ್ಮಿ ಸ್ವಾಮಿ, ಉಪನ್ಯಾಸಕಿ, ವಾಣಿಜ್ಯ ವಿಭಾಗ ವಿಜಿ ವುಮೆನ್ಸ್ ಕಾಲೇಜು
ಮಾಜಿ ಪ್ರಧಾನಿ ಇಂದಿರಾಗಾಂಧಿ ನಂತರ ದೇಶದ ಬಜೆಟ್ ಮಂಡಿಸಿದ ಎರಡನೇ ಧೀರ ಮಹಿಳೆ ನಿರ್ಮಲಾ ಸೀತಾರಾಮನ್. ನಿಜಕ್ಕೂ ಇಡೀ ದೇಶ ಮೆಚ್ಚುವಂತಹ ಉತ್ತಮ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಕುರಿತು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಇದು 'ಹಸಿರು ಬಜೆಟ್' ಎಂದು ಬಣ್ಣಿಸಿದ್ದಾರೆ.
-ಕಾವೇರಿ, ಪಿಯುಸಿ ಸೈನ್ಸ್ ದ್ವಿತೀಯ ವರ್ಷ ವಿಜಿ, ವುಮೆನ್ಸ್ ಕಾಲೇಜು.
ಎಫ್ಡಿಐಗೆ ಪ್ರಾಶಸ್ತ್ಯ ನೀಡಿರುವುದು ಅತ್ಯಂತ ಸಂತಸ ನೀಡಿದೆ. ಭಾರತ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯಾಗಲಿಕ್ಕೆ ಇದು ಅನುಕೂಲಕರ. ಇ-ವಾಹನಗಳಿಗೆ ಜಿಎಸ್ಟಿ ಕಡಿಮೆಯಾಗಿರುವುದು ಸ್ವಾಗತಾರ್ಹ. ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಿದ್ದು ಒಳ್ಳೆಯ ಬೆಳವಣಿಗೆ.
-ಪ್ರೀತಿ ಬಿ. ಪಿಯುಸಿ ದ್ವಿತೀಯ ವರ್ಷ, ವಿಜಿ ವುಮೆನ್ಸ್ ಕಾಲೇಜು.
ರೂ. 100 ಲಕ್ಷ ಕೋಟಿ ಐದು ವರ್ಷಗಳ ಅವಧಿಯಲ್ಲಿ ಮೂಲ ಸೌಕರ್ಯಗಳಿಗೆ ಮೀಸಲಿಡಲಾಗಿದೆ. ಇದರಿಂದ ದೇಶದ ಪ್ರಗತಿ ನಿಶ್ಚಿತ. ಅತೀ ಶ್ರೀಮಂತರ ಮೇಲೆ ತೆರಿಗೆ ಹೊಣೆ ಹೆಚ್ಚು ಮಾಡುವ ಮೂಲಕ ಮಧ್ಯಮ ವರ್ಗದ ಮೇಲೆ ಕರುಣೆ ತೋರಲಾಗಿದೆ. ಇದು ಸ್ವಾಗತಾರ್ಹ. ಜಿಎಸ್ಟಿ ಶೇ.18ರಷ್ಟು ಇಳಿಕೆಯಾಗಬೇಕಿತ್ತು.
-ಪ್ರವೀಣ ನಾಯ್ಕ, ಪ್ರಾಚಾರ್ಯ, ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕಲಬುರಗಿ.
ಸಬ್ ಅರ್ಬನ್ ಹಾಗೂ ಮೆಟ್ರೋ ರೈಲುಗಳ ನಿರ್ಮಾಣಕ್ಕೆ ಪ್ರಾಮುಖ್ಯತೆ ಹಾಗೂ ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲು ಬಜೆಟ್ನಲ್ಲಿ ಆದ್ಯತೆ ನೀಡಲಾಗುತ್ತಿದೆ.ಇತಿಹಾಸದಲ್ಲಿಯೇ ಒಳ್ಳೆಯ ಬಜೆಟ್ ಇದಾಗಿದೆ.
-ಪೂಜಾ, ಬಿಸಿಎ ತೃತೀಯ ವರ್ಷ, ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕಲಬುರಗಿ.
ಚಿನ್ನದ ಮೇಲಿನ ತೆರಿಗೆ ಶೇ.12ರಷ್ಟು ಹೆಚ್ಚಳದಿಂದ ಗೋಲ್ಡ್ ಖರೀದಿಯ ಪ್ರಮಾಣ ಕೊಂಚ ಕಡಿಮೆ ಆಗಲಿದೆ. ಪ್ರಸ್ತಕ ಸಾಲಿನ ಕೇಂದ್ರ ಬಜೆಟ್ನಲ್ಲಿ ಈ ಅಂಶ ಸ್ವಲ್ಪ ಬೇಸರ ಮೂಡಿಸಿದೆ. 'ನಾರಿ ತೂ ನಾರಾಯಿಣಿ' ಯೋಜನೆ ಮೂಲಕ ಮಹಿಳೆಯರಿಗೆ ಆದ್ಯತೆ ನೀಡಿರುವುದು ಖುಷಿ ತಂದಿದೆ.
-ಭಾವನಾ, ಬಿಸಿಎ ತೃತೀಯ ವರ್ಷ, ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕಲಬುರಗಿ
ಚಿನ್ನದ ಮೇಲಿನ ಸುಂಕ ಶೇ.12ರಷ್ಟು ಹೆಚ್ಚಳ ಮಾಡಿದ್ದರಿಂದ ಗ್ರಾಹಕರಿಗೆ ತೊಂದರೆಯಾಗಲಿದೆ. ಇದರಿಂದಾಗಿ ಗೋಲ್ಡ್ ಉದ್ಯಮಕ್ಕೆ ಹೊಡೆತ ಬೀಳಲಿದೆ. ಜಿಎಸ್ಟಿ ಶೇ.28ರಿಂದ 18ಕ್ಕೆ ಇಳಿಕೆಯಾಗಬೇಕಿತ್ತು. ಇದು ಸಹ ಹುಸಿಯಾಗಿರುವುದು ಬೇಸರ ಮೂಡಿಸಿದೆ. ದೇಶದ ಪ್ರಗತಿಯ ದೃಷ್ಟಿಯಿಂದ ಇದೊಂದು ಅತ್ಯುತ್ತಮ ಬಜೆಟ್.
-ಸಚಿನ್ ಮೆಹತಾ, ಉದ್ಯಮಿ, ಕಲಬುರಗಿ.
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಈ ಭಾಗದ ಪ್ರಮುಖ ಬೇಡಿಕೆಗಳಾದ ಕಲಬುರಗಿ ರೈಲ್ವೆ ಡಿವಿಷನ್ಗೆ ಅನುದಾನ ನೀಡುವುದು, ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ವಿಶೇಷ ಪ್ಯಾಕೇಜ್ ಸಿಗಬಹುದು, 2014ರಲ್ಲಿ ಯುಪಿಎ ಸರಕಾರ ಘೋಷಿಸಿದ್ದ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನಿಮ್ಜ್)ಕ್ಕೆ ಹಣ ನೀಡಿ ಚಾಲನೆ ನೀಡುವುದು, ಮುಖ್ಯವಾಗಿ ತೊಗರಿಗೆ ಆಮದು ಸುಂಕ ವಿಧಿಸಿ ತೊಗರಿ ಬೆಳೆಗಾರರ ಹಿತರಕ್ಷಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ ಈ ಬೇಡಿಕೆಗಳು ಬಜೆಟ್ನಲ್ಲಿ ಸ್ಥಾನವೇ ಸಿಗಲಿಲ್ಲ. ಕೇಂದ್ರದ ಈ ಕ್ರಮ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ನಿರಾಸೆ:
ಈ ಹಿಂದೆ ಕಲಬುರಗಿಯಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಿದ್ದರು. ಈ ಕಾರಣಕ್ಕೆ ಕಲಬುರಗಿಗೆ ಬಜೆಟ್ ಆಗಲಿ, ಹೊಸ ಯೋಜನೆಗಳಾಗಲಿ ಕೊಡಲಿಲ್ಲ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೆ ಈಗ ಡಾ. ಉಮೇಶ್ ಜಾಧವ್ ಬಿಜೆಪಿಯಿಂದಲೇ ಆಯ್ಕೆಯಾಗಿದ್ದರೂ ಕೇಂದ್ರ ಕಣ್ಣೆತ್ತಿಯೂ ನೋಡಲಿಲ್ಲ. ಮತ ಹಾಕಿ ಆಯ್ಕೆ ಮಾಡಿದ ಜನರಿಗೆ ಸಹಜವಾಗಿಯೇ ಆಕ್ರೋಶ ಉಂಟು ಮಾಡಿದೆ.
ಯುಪಿಎ ಸರಕಾರದ ಅವಧಿಯಲ್ಲಿ ರೈಲ್ವೆ ಡಿವಿಷನ್ ಘೋಷಿಸಲಾಗಿತ್ತು. ಪ್ರಾಥಮಿಕವಾಗಿ 5 ಕೋಟಿ ಘೋಷಿಸಿದ್ದರೂ 1 ಲಕ್ಷ ರೂ. ನೀಡಲಾಗಿತ್ತು. ಆದರೆ ಯೋಜನೆಗೆ ಹಣ ನೀಡದೇ ಇದ್ದರಿಂದ ಯೋಜನೆ ಮೇಲೇಳಲೇ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರೂ ಮೊದಲ ಬಜೆಟ್ನಲ್ಲಿ ನಿರಾಸೆ ಮೂಡಿಸಿದಂತಾಗಿದೆ.
ಇದೊಂದು ಉತ್ತಮ ಬಜೆಟ್. ಎಂಎಸ್ಎಂಇಗೆ ಸಬ್ಸಿಡಿ ಹೆಚ್ಚಿಸಿರುವುದು, ಸ್ಟಾರ್ಟ್ಪ್- ಮೇಕ ಇನ್ ಇಂಡಿಯಾಗೆ ಆದ್ಯತೆ ನೀಡಿರುವುದರಿಂದ ಯುವ ಉದ್ಯಮಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮೂಲಸೌಲಭ್ಯಗಳಿಗೆ ಹೆಚ್ಚು ಅನುದಾನ ನೀಡಿದ್ದು ಅಭಿವೃದ್ಧಿ ಸೂಚಕ. ತೊಗರಿ ಆಮದು ಮೇಲೆ ಸುಂಕ ವಿಧಿಸಬೇಕಿತ್ತು. ಹೈಕ ಮಂಡಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕಿತ್ತು.
-ಉಮಾಕಾಂತ ನಿಗ್ಗುಡಗಿ, ಉದ್ಯಮಿ, ಕಲಬುರಗಿ
ಹೈಕ ಭಾಗಕ್ಕೆ ಯಾವ ಕೊಡುಗೆಯೂ ಕೊಟ್ಟಿಲ್ಲ. ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸದೇ ಜಿಲ್ಲೆಯ ಮತದಾರರಿಗೆ ಬಿಜೆಪಿ ವಂಚನೆ ಮಾಡಿದೆ. ಬಿಜೆಪಿ ಜನರಿಗೆ ಸುಳ್ಳು ಭರವಸೆ ನೀಡುತ್ತದೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಬಜೆಟ್ನಲ್ಲಿ ಇದು ದೃಢಪಟ್ಟಿದೆ. ಇದು ಹೈಕ ಜನವಿರೋಧಿ ಬಜೆಟ್
-ಜಗದೇವ ಗುತ್ತೇದಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕಲಬುರಗಿ
ಮನೆ ನಿರ್ಮಾಣ, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಫೇಸ್-3ಗೆ ಹೆಚ್ಚು ಹಣ ನೀಡಿರುವುದು ಗ್ರಾಮೀಣ ರಸ್ತೆ ಸುಧಾರಣೆಯಾಗಲಿವೆ. ಇದೊಂದು ಅಭಿವೃದ್ಧಿಪರ ಬಜೆಟ್. ಎಲ್ಲ ವರ್ಗದ ಜನರ ಏಳಿಗೆ ಮಾಡುವ ಬಜೆಟ್. ಕಲಬುರಗಿ ಸೇರಿ ಹೈಕ ಭಾಗದ ಯೋಜನೆಗಳ ಜಾರಿ ಸಂಬಂಧ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಲಾಗುವುದು. ಶೀಘ್ರವೇ ಈ ಭಾಗದ ಶಾಸಕರು, ಸಂಸದರು, ಪಕ್ಷದ ಮುಖಂಡರು ಕೇಂದ್ರ ಸರಕಾರದ ಬಳಿ ನಿಯೋಗ ಹೋಗಲಾಗುವುದು.
-ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಜಿಲ್ಲಾ ಬಿಜೆಪಿ ಅಧ್ಯಕ್ಷ, ಕಲಬುರಗಿ
ಕೇಂದ್ರ ಬಜೆಟ್ನಲ್ಲಿ ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ ನೀಡಲಾಗಿದೆ. ಸ್ವಚ್ಛ ಭಾರತ ಅಭಿಯಾನಯಡಿ 9.6 ಕೋಟಿ ಶೌಚಾಲಯಗಳ ನಿರ್ಮಾಣ, ಗ್ರಾಮ ಪಂಚಾಯಿತಿಗಳಿಗೆ ಇಂಟರ್ನೆಟ್ ಹಾಗೂ ಡಿಜಿಟಲ್ ವ್ಯಾಪ್ತಿಗೆ ತರುವ ವ್ಯವಸ್ಥೆಯ ಆಶ್ವಾಸನೆ ಉತ್ತಮ ಕಾರ್ಯ. ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಏಕರೀತಿಯ ಜೀವನಕ್ಕೆ ಒತ್ತು ನೀಡಲಾಗಿದೆ.
-ರಶ್ಮಿ ಸ್ವಾಮಿ, ಉಪನ್ಯಾಸಕಿ, ವಾಣಿಜ್ಯ ವಿಭಾಗ ವಿಜಿ ವುಮೆನ್ಸ್ ಕಾಲೇಜು
ಮಾಜಿ ಪ್ರಧಾನಿ ಇಂದಿರಾಗಾಂಧಿ ನಂತರ ದೇಶದ ಬಜೆಟ್ ಮಂಡಿಸಿದ ಎರಡನೇ ಧೀರ ಮಹಿಳೆ ನಿರ್ಮಲಾ ಸೀತಾರಾಮನ್. ನಿಜಕ್ಕೂ ಇಡೀ ದೇಶ ಮೆಚ್ಚುವಂತಹ ಉತ್ತಮ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಕುರಿತು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಇದು 'ಹಸಿರು ಬಜೆಟ್' ಎಂದು ಬಣ್ಣಿಸಿದ್ದಾರೆ.
-ಕಾವೇರಿ, ಪಿಯುಸಿ ಸೈನ್ಸ್ ದ್ವಿತೀಯ ವರ್ಷ ವಿಜಿ, ವುಮೆನ್ಸ್ ಕಾಲೇಜು.
ಎಫ್ಡಿಐಗೆ ಪ್ರಾಶಸ್ತ್ಯ ನೀಡಿರುವುದು ಅತ್ಯಂತ ಸಂತಸ ನೀಡಿದೆ. ಭಾರತ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯಾಗಲಿಕ್ಕೆ ಇದು ಅನುಕೂಲಕರ. ಇ-ವಾಹನಗಳಿಗೆ ಜಿಎಸ್ಟಿ ಕಡಿಮೆಯಾಗಿರುವುದು ಸ್ವಾಗತಾರ್ಹ. ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಿದ್ದು ಒಳ್ಳೆಯ ಬೆಳವಣಿಗೆ.
-ಪ್ರೀತಿ ಬಿ. ಪಿಯುಸಿ ದ್ವಿತೀಯ ವರ್ಷ, ವಿಜಿ ವುಮೆನ್ಸ್ ಕಾಲೇಜು.
ರೂ. 100 ಲಕ್ಷ ಕೋಟಿ ಐದು ವರ್ಷಗಳ ಅವಧಿಯಲ್ಲಿ ಮೂಲ ಸೌಕರ್ಯಗಳಿಗೆ ಮೀಸಲಿಡಲಾಗಿದೆ. ಇದರಿಂದ ದೇಶದ ಪ್ರಗತಿ ನಿಶ್ಚಿತ. ಅತೀ ಶ್ರೀಮಂತರ ಮೇಲೆ ತೆರಿಗೆ ಹೊಣೆ ಹೆಚ್ಚು ಮಾಡುವ ಮೂಲಕ ಮಧ್ಯಮ ವರ್ಗದ ಮೇಲೆ ಕರುಣೆ ತೋರಲಾಗಿದೆ. ಇದು ಸ್ವಾಗತಾರ್ಹ. ಜಿಎಸ್ಟಿ ಶೇ.18ರಷ್ಟು ಇಳಿಕೆಯಾಗಬೇಕಿತ್ತು.
-ಪ್ರವೀಣ ನಾಯ್ಕ, ಪ್ರಾಚಾರ್ಯ, ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕಲಬುರಗಿ.
ಸಬ್ ಅರ್ಬನ್ ಹಾಗೂ ಮೆಟ್ರೋ ರೈಲುಗಳ ನಿರ್ಮಾಣಕ್ಕೆ ಪ್ರಾಮುಖ್ಯತೆ ಹಾಗೂ ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲು ಬಜೆಟ್ನಲ್ಲಿ ಆದ್ಯತೆ ನೀಡಲಾಗುತ್ತಿದೆ.ಇತಿಹಾಸದಲ್ಲಿಯೇ ಒಳ್ಳೆಯ ಬಜೆಟ್ ಇದಾಗಿದೆ.
-ಪೂಜಾ, ಬಿಸಿಎ ತೃತೀಯ ವರ್ಷ, ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕಲಬುರಗಿ.
ಚಿನ್ನದ ಮೇಲಿನ ತೆರಿಗೆ ಶೇ.12ರಷ್ಟು ಹೆಚ್ಚಳದಿಂದ ಗೋಲ್ಡ್ ಖರೀದಿಯ ಪ್ರಮಾಣ ಕೊಂಚ ಕಡಿಮೆ ಆಗಲಿದೆ. ಪ್ರಸ್ತಕ ಸಾಲಿನ ಕೇಂದ್ರ ಬಜೆಟ್ನಲ್ಲಿ ಈ ಅಂಶ ಸ್ವಲ್ಪ ಬೇಸರ ಮೂಡಿಸಿದೆ. 'ನಾರಿ ತೂ ನಾರಾಯಿಣಿ' ಯೋಜನೆ ಮೂಲಕ ಮಹಿಳೆಯರಿಗೆ ಆದ್ಯತೆ ನೀಡಿರುವುದು ಖುಷಿ ತಂದಿದೆ.
-ಭಾವನಾ, ಬಿಸಿಎ ತೃತೀಯ ವರ್ಷ, ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕಲಬುರಗಿ
ಚಿನ್ನದ ಮೇಲಿನ ಸುಂಕ ಶೇ.12ರಷ್ಟು ಹೆಚ್ಚಳ ಮಾಡಿದ್ದರಿಂದ ಗ್ರಾಹಕರಿಗೆ ತೊಂದರೆಯಾಗಲಿದೆ. ಇದರಿಂದಾಗಿ ಗೋಲ್ಡ್ ಉದ್ಯಮಕ್ಕೆ ಹೊಡೆತ ಬೀಳಲಿದೆ. ಜಿಎಸ್ಟಿ ಶೇ.28ರಿಂದ 18ಕ್ಕೆ ಇಳಿಕೆಯಾಗಬೇಕಿತ್ತು. ಇದು ಸಹ ಹುಸಿಯಾಗಿರುವುದು ಬೇಸರ ಮೂಡಿಸಿದೆ. ದೇಶದ ಪ್ರಗತಿಯ ದೃಷ್ಟಿಯಿಂದ ಇದೊಂದು ಅತ್ಯುತ್ತಮ ಬಜೆಟ್.
-ಸಚಿನ್ ಮೆಹತಾ, ಉದ್ಯಮಿ, ಕಲಬುರಗಿ.